ರಾಜಕೀಯ

ಯು.ಟಿ ಖಾದರ್ ಕ್ರಿಯಾಶೀಲ ಸಚಿವ: ಸೋನಿಯಾ ಗಾಂಧಿ ಶಹಬ್ಬಾಸ್ ಗಿರಿ

Shilpa D

ನವದೆಹಲಿ: ಸಂಪುಟ ಪುನಾರಚನೆ ವೇಳೆ ಆರೋಗ್ಯ ಸಚಿವ ಯು.ಟಿ ಖಾದರ್ ಅವರನ್ನು ಕೈ ಬಿಟ್ಟು ಅವರ ಖಾತೆಯನ್ನು ಶಾಸಕ ಹ್ಯಾರಿಸ್ ಅವರಿಗೆ ನೀಡಲಾಗುತ್ತದೆ ಎಂಬ ವದಂತಿಗಳು ಕೇಳಿ ಬಂದಿದ್ದವು. ಆರೋಗ್ಯ ಸಚಿವ ಯುಟಿ ಖಾದರ್ ಕ್ರಿಯಾಶೀಲ ಸಚಿವ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಶಹಬ್ಬಾಸ್ ಗಿರಿ ನೀಡಿದ್ದಾರೆ.

ಜೊತೆಗೆ ಯುಟಿ ಖಾದರ್ ಅವರನ್ನು ಸಂಪುಟದಲ್ಲಿ ಮುಂದುವರಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸೋನಿಯಾ ಗಾಂಧಿ ಸೂಚನೆ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.ಕ್ರಿಯಾಶೀಲ ಸಚಿವರನ್ನು ಸಂಪುಟದಿಂದ ಕೈಬಿಡಬಾರದು ಎಂದು ಸೋನಿಯಾ ಗಾಂಧಿ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ. ಸಚಿವ ಸಂಪುಟ ಪುನಾರಚನೆಯಲ್ಲಿ ಕೈಬಿಡಲಿರುವ ಪಟ್ಟಿಯಲ್ಲಿ ಯುಟಿ ಖಾದರ್ ಅವರ ಹೆಸರೂ ಕೂಡಾ ಇತ್ತು ಎನ್ನಲಾಗಿದೆ.

ಯುಟಿ ಖಾದರ್ ತಮ್ಮ ಕ್ರಿಯಾಶೀಲ ಸಚಿವ, ಮೂರು ವರ್ಷಗಳ ಅವಧಿಯಲ್ಲಿ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅಂತಹ ಸಚಿವರನ್ನು ಕೈ ಬಿಡಲು ಸಾಧ್ಯವೇ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

SCROLL FOR NEXT