ಕಾಗೋಡು ತಿಮ್ಮಪ್ಪ 
ರಾಜಕೀಯ

ಸದನದಲ್ಲಿ ಸೀರೆ ಬಿಚ್ಚಬೇಡಿ: ಶಾಸಕ ಕಾರಜೋಳಾಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಸಲಹೆ

ವಿಧಾನಸಭೆಯ ಕಲಾಪದ ವೇಳೆ ಸೀರೆ ಬಿಚ್ಚ ಹೊರಟ ಬಿಜೆಪಿ ಹಿರಿಯ ಶಾಸಕ ಗೋವಿಂದ ಕಾರಜೋಳಾಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಸೀರೆ ಬಿಚ್ಚುವುದು ಬೇಡ ಎಂದು...

ವಿಧಾನಸಭೆ: ವಿಧಾನಸಭೆಯ ಕಲಾಪದ ವೇಳೆ ಸೀರೆ ಬಿಚ್ಚಲು ಮುಂದಾದ ಬಿಜೆಪಿ ಹಿರಿಯ ಶಾಸಕ ಗೋವಿಂದ ಕಾರಜೋಳಾಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಸೀರೆ ಬಿಚ್ಚುವುದು ಬೇಡ ಎಂದು ಸಲಹೆ ನೀಡಿದರು.

ವಿಧಾನಸಭೆ ಕಲಾಪಕ್ಕೆ ಸೀರೆ ತಂದಿದ್ದ ಶಾಸಕ ಗೋವಿಂದ ಕಾರಜೋಳ ಅವರು ಇನ್ನೇನು ಸೀರೆ ಬಿಚ್ಚಬೇಕು ಎನ್ನುವಷ್ಟರಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಅವರು ಈ ರೀತಿ ಸಲಹೆ ನೀಡಿದರು.

ಸದನಕ್ಕೆ ಸೀರೆ ಯಾಕೆ ತಂದಿದ್ದರು ಎಂಬ ಎಲ್ಲರ ಕುತೂಹಲದ ಪ್ರಶ್ನೆಗೆ ಉತ್ತರಿಸಿದ ಕಾರಜೋಳ, ಅಂಗನವಾಡಿ ಸಹಾಯಕಿಯರಿಗೆ ಪ್ರತಿ ವರ್ಷ ಎರಡು ಸೀರೆ ಕೊಡಲು ಸರ್ಕಾರ ಯೋಜನೆ ರೂಪಿಸಿದ್ದು. ಪ್ರತಿ ಸೀರೆಗೆ ರು.300 ರಂತೆ 2.60 ಲಕ್ಷ ಸೀರೆಗಳನ್ನು ಖರೀದಿಸಿದೆ. ಸರ್ಕಾರ ಖರೀದಿಸಿದ ಸೀರೆಗಳು ಅತ್ಯಂತ ಕಳಪೆ ಮಟ್ಟದಿಂದ ಕೂಡಿವೆ. ಮಾರುಕಟ್ಟೆಯಲ್ಲಿ ರುಪಾಯಿ 70 ರಿಂದ 80 ರುಪಾಯಿಗೆ ಈ ಸೀರೆಗಳು ಸಿಗುತ್ತವೆ. ಆದರೆ ಸರ್ಕಾರ ಖರೀದಿ ಮಾಡಿದ ದರವನ್ನು ನೋಡಿದರೆ ಇದರಲ್ಲಿ ಏನೋ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?