ಮೈಸೂರು: ಮಾಜಿ ಸಚಿವ ಎಚ್.ವಿಶ್ವನಾಥ್ ಜೆಡಿಎಸ್ ಸೇರ್ಪಡೆಗೊಂಡಿದ್ದು ಹುಣಸೂರಿನಿಂದ ಕಣಕ್ಕಿಳಿಯಲಿದ್ದಾರೆ, ಹೀಗಾಗಿ ವಿಶ್ವನಾಥ್ ಪ್ರತಿನಿಧಿಸುತ್ತಿದ್ದ ಕೆ.ಆರ್ ನಗರ ವಿಧಾನಸಭಾ ಕ್ಷೇತ್ರಕ್ಕಾಗಿ ಲಾಬಿ ಆರಂಭವಾಗಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಂಸದೆ ರಮ್ಯಾ ಸೇರಿದಂತೆ ಹಲವು ನಾಯಕರು ಕೆ.ಆರ್ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಲಾಬಿ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸದ್ಯಾ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಘಟಕದಲ್ಲಿ ಸಕ್ರಿಯರಾಗಿರುವ ರಮ್ಯ ರಾಜ್ಯ ರಾಜಕೀಯಕ್ಕೆ ಎಂಟ್ರಿ ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಮಂಡ್ಯದಲ್ಲಿ ಬಾಡಿಗೆ ನಿವಾಸ ಮಾಡಿರುವ ರಮ್ಯಾ ಸೋಷಿಯಲ್ ಮೀಡಿಯಾ ಹೊಣೆಗಾರಿಕೆಯಿಂದಾಗಿ ನಗರದಿಂದ ದೂರ ಉಳಿದಿದ್ದಾರೆ.
ಮಂಡ್ಯ ಲೋಕಸಭಾ ವ್ಯಾಪ್ತಿಗೆ ಬರುವ ಕೆ.ಆರ್ ನಗರ ವಿಧಾನ ಸಭೆಯಿಂದ ರಮ್ಯ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಒಕ್ಕಲಿಗ ಸಮುದಾಯದವರಾಗಿರುವ ರಮ್ಯಾ, ದಲಿತ, ಕುರುಬ ಸಮುದಾಯದ ನಂತರ ಹೆಚ್ಚಿನ ಪ್ರಾಬಲ್ಯ ಪಡೆದಿರುವ ಒಕ್ಕಲಿಗ ಮಂದಿ ಹೆಚ್ಚಿನ ಪ್ರಮಾಣದಲ್ಲಿರುವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.
ಸಿದ್ದರಾಮಯ್ಯ, ಯತೀಂದ್ರ ಮತ್ತು ಎಸ್ .ಕೆ ಸೋಮಶೇಖರ್ ಕುರುಬ ಜಾತಿಗೆ ಸೇರಿದ್ದು, ಕಾಂಗ್ರೆಸ್ ನಿಂದ ಸ್ಪರ್ಧಿಸಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ನಾಲ್ಕನೇ ಟಿಕೆಟ್ ಅನ್ನು ಕುರುಬರಿಗೆ ನೀಡುವುದು ಸುಲಭ ಸಾಧ್ಯವಿಲ್ಲ, ಮೈಸೂರು ಜಿಲ್ಲೆಯ 10 ವಿಧಾನಸಭೆ ಕ್ಷೇತ್ರಗಳಲ್ಲಿ 3 ಮೀಸಲಾತಿ ಕ್ಷೇತ್ರಗಳು. ಹೀಗಾಗಿ ಉಳಿದ ಕ್ಷೇತ್ರಗಳಲ್ಲಿ ಬೇರೆ ಜಾತಿ, ಸಮುದಾಯಗಳ ನಾಯಕರನ್ನು ಕಣಕ್ಕಿಳಿಸಬೇಕೆಂದು ಕಾಂಗ್ರೆಸ್ ಹೊಣೆಯಾಗಿದೆ.ಹೀಗಾಗಿ ನಾಲ್ಕನೇ ಟಿಕೆಟ್ ಕೂಡ ಕುರುಬ ಜಾತಿಗೆ ಸೇರಿದವರಿಗೆ ಕೊಡಬೇಕೆಂದು ಚೌಕಾಶಿ ಮಾಡುವಂತಿಲ್ಲ, ಕೆ.ಆರ್ ನಗರ ಕ್ಷೇತ್ರದಿಂದ ಮೂರನೇ ಬಾರಿ ಶಾಸಕರಾಗಲು ಜೆ.ಡಿಎಸ್ ನ ಸಾ.ರಾ ಮಹೇಶ್ ತಂತ್ರ ರೂಪಿಸುತ್ತಿದ್ದಾರೆ.
ಇದನ್ನು ಹೊರತು ಪಡಿಸಿ, ಡಿ.ಕೆ ಶಿವಕುಮಾರ್ ಆಪ್ತರಾಗಿರುವ ಹೊಸಹಳ್ಳಿ ವೆಂಕಟೇಶ್ ಕೂಡ ವಿಧಾನಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನೂ ಹಲವು ಕುರುಬ ಸಮುದಾಯದ ಮುಖಂಡು ತಮ್ಮದೇ ಜಾತಿಗೆ ಸೇರಿದ ನಾಯಕನಿಗೆ ಸಿಎಂ ಸಿದ್ದರಾಮಯ್ಯ ಜನರಲ್ ಕೆಟಗರಿಯಲ್ಲಿ ಟಿಕೆಟ್ ನೀಡಲಿದ್ದಾರೆ ಎಂದು ಭರವಸೆ ಇಟ್ಟಿದ್ದಾರೆ.
ಕಾಂಗ್ರೆಸ್ ನಿಂದ ಪರಾಭವಗೊಂಡಿದ್ದ ದೊಡ್ಡ ಸ್ವಾಮಿ ಗೌಡ ಮತ್ತು ಅವರ ಪುತ್ರ ಜಿಲ್ಲ ಪಂಚಾಯಿತಿ ಸದಸ್ಯ ರವಿಶಂಕರ್ ಗೌಡ ಟಿಕೆಟ್ ಗಾಗಿ ಲಾಬಿ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos