ರಾಜಕೀಯ

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ನಿರ್ಧಾರ ಪ್ರಕಟಿಸಿದ ಕಳಲೆ ಕೇಶವಮೂರ್ತಿ

Shilpa D

ಮೈಸೂರು: ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರುತ್ತಿರುವುದಾಗಿ ಪ್ರಕಟಿಸಿರುವ ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ ಕಳೆದ ಒಂದು ತಿಂಗಳಿಂದ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ.

ನಂಜನಗೂಡಿನ ಯಾತ್ರಿ ನಿವಾಸದಲ್ಲಿ ಮಾತನಾಡಿದ ಕೇಶವಮೂರ್ತಿ, ತಾವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ಉಪಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ  ಹಾಗೂ ಮಾಜಿ ಸಿಎಂ ಕುಮಾರ ಸ್ವಾನಿ ಅವರೊಂದಿಗೆ ಚರ್ಚಿಸಿಯೇ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದಾಗಿ ಪ್ರಕಟಿಸಿದ್ದಾರೆ. ಮಾಜಿ ಸಚಿವ ಡಿ.ಟಿ ಜಯಕುಮಾರ್, ಕೆ. ಬಿ ಶಿವಯ್ಯ  ಹಾಗೂ ಎಂ. ಮಹದೇವ್ ಅವರಿಗೆ ತನ್ನ ಧನ್ಯವಾದ ಹೇಳಿರುವ ಕೇಶಮೂರ್ತಿ, ನಂಜನಗೂಡು ಉಪ ಚುನಾವಣೆಯಲ್ಲಿ ಜನ ತಮಗೆ ಅರಸಿ ಹಾರೈಸಬೇಕು ಎಂದು ಕೇಳಿಕೊಂಡಿದ್ದಾರೆ.

SCROLL FOR NEXT