ಎಚ್.ಡಿ ದೇವೇಗೌಡ 
ರಾಜಕೀಯ

ನನ್ನ ಸ್ನೇಹಿತ ಇಬ್ರಾಹಿಂ ನಂಬಿಕೆ ಕಳೆದುಕೊಂಡು ಹತಾಶರಾಗಿದ್ದಾರೆ: ದೇವೇಗೌಡ

ನನ್ನ ಸ್ನೇಹಿತ ಸಿಎಂ ಇಬ್ರಾಹಿಂ ಇತ್ತೀಚಿನ ದಿನಗಳಲ್ಲಿ ನಿರಾಶರಾಗಿದ್ದಾರೆ, ಹತಾಶರಾಗಿ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ...

ಮೈಸೂರು: ನನ್ನ ಸ್ನೇಹಿತ ಸಿಎಂ ಇಬ್ರಾಹಿಂ ಇತ್ತೀಚಿನ ದಿನಗಳಲ್ಲಿ ನಿರಾಶರಾಗಿದ್ದಾರೆ, ಹತಾಶರಾಗಿ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.

ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ಉಪಕುಲಪತಿ ಕೆ.ಎಸ್ ರಂಗಪ್ಪ ಅವರ ಬೀಳ್ಕೋಡುಗೆ ಸಮಾರಂಭದಲ್ಲಿ ದೇವೇಗೌಡ ಭಾಗವಹಿಸಿದ್ದರು. ಇಬ್ರಾಹಿಂ ಅವರು, ದಶಕದ ಹಿಂದೆ ಸಿದ್ದರಾಮಯ್ಯ ಅವರ ಜೊತೆ ಇಬ್ರಾಹಿಂ ಜೆಡಿಎಸ್ ತೊರೆದಿದ್ದರು.

ಅದಾದ ನಂತರ ಇದೇ ಮೊದಲ ಬಾರಿಗೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿರುವ ಇಬ್ರಾಹಿಂ ನನ್ನ ಜೊತೆ ವೇದಿಕೆ ಹಂಚಿಕೊಂಡಿರುವುದು ಅವರು ಜೆಡಿಎಸ್ ಗೆ ಮರಳಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತಿದೆ ಎಂದು ದೇವೇಗೌಡ ಹೇಳಿದರು. ತೀವ್ರ ಅಸಂತೋಷಗೊಂಡಿರುವ ಇಬ್ರಾಹಿಂ ತಮಗೆ ಉತ್ತಮವಾದದ್ದು ಯಾವುದು ಎಂದು ತಿಳಿದುಕೊಂಡು ಅದನ್ನು ಆರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇನ್ನೂ ಮೈಸೂರು ವಿವಿ ಕುಲಪತಿ ರಂಗಪ್ಪ ಅವರ ಬಗ್ಗೆ ಮಾತನಾಡಿದ ದೇವೇಗೌಡ ರಂಗಪ್ಪ ಅವರ  ವ್ಯಕ್ತಿತ್ವಕ್ಕೆ ಧಕ್ಕೆ ತರಲು ಕೆಲವರು ಅವರ ವಿರುದ್ಧ ಪಿತೂರಿ ಮಾಡಿದರು, ಅವರ ವಿರುದ್ಧ ಮಾತನಾಡುವವರು ಒಮ್ಮೆ ಮೈಸೂರು ವಿವಿ ಕ್ಯಾಂಪಸ್ ಮತ್ತು ಮುಕ್ತ ವಿವಿ ಸುತ್ತಾಡಿದರೇ ರಂಗಪ್ಪ ಅವರ ದೂರದೃಷ್ಟಿ ಎಂಥಹದ್ದು ಎಂಬುದು ತಿಳಿಯುತ್ತದೆ ಎಂದು ಹೇಳಿದರು.

ತೀರಾ ಬಡ ಕುಟುಂಬದಿಂದ ಬಂದ ರಂಗಪ್ಪ ಅವರು, ಅತ್ಯದ್ಭುತವಾದ ಸಾಧನೆ ಮಾಡಿದ್ದಾರೆ. ಹೀಗಾಗಿ ಮುಂದೆಯು ವೈಜ್ಞಾನಿಕ ಕ್ಷೇತ್ರದಲ್ಲಿ ತಮ್ಮ ಸಂಶೋಧನೆ ಮುಂದುವರಿಸಬೇಕು ಎಂದು ಅವರು ಸಲಹೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಒಂದು ವೇಳೆ ಬದುಕಿದ್ದರೆ, ಹುಡುಕಿ ಕೊಲ್ಲುತ್ತೇವೆ': ಬೆಂಜಮಿನ್ ನೆತನ್ಯಾಹು ಸಾವಿನ ವದಂತಿಗಳ ನಡುವೆ ಇರಾನ್ ಎಚ್ಚರಿಕೆ!

ತಮಿಳುನಾಡಿನಲ್ಲಿ ಬದಲಾದ ರಾಜಕೀಯ ಸಮೀಕರಣ; ಬಿಜೆಪಿ ಪಾಳಯಕ್ಕೆ TVK ವಿಜಯ್?: ಡಿಸಿಎಂ ಹುದ್ದೆ ಆಫರ್!

IPL 2026: ಇದಾದ ಬಳಿಕವೇ ಸಂಪೂರ್ಣ ವೇಳಾಪಟ್ಟಿ ಪ್ರಕಟ- BCCI

ಇರಾನ್ ಶರಣಾಗತಿಗೆ ಟ್ರಂಪ್ ಒತ್ತಾಯ: ಹೊಸ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಬಗ್ಗೆ ಹೇಳಿದ್ದೇನು?

ಜಮ್ಮು-ಕಾಶ್ಮೀರ: ಉರಿ ಸೆಕ್ಟರ್ ನಲ್ಲಿ ಒಳನುಸುಳುವಿಕೆ ಯತ್ನ, ಪಾಕ್ ಉಗ್ರನ ಹತ್ಯೆ!

SCROLL FOR NEXT