ರಾಜಕೀಯ

ಜೆಡಿಎಸ್​ ಶಾಸಕ ಮಲ್ಲಿಕಾರ್ಜುನ ಖೂಬಾ ರಾಜಿನಾಮೆ: ಬಿಜೆಪಿ ಸೇರುವ ಸಾಧ್ಯತೆ

Shilpa D
ಹಾವೇರಿ: ಬಸವಕಲ್ಯಾಣದ ಜೆಡಿಎಸ್​ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಮಂಗಳವಾರ ಸ್ಪೀಕರ್​ ಕೆ.ಬಿ ಕೋಳಿವಾಡ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದಲ್ಲಿರುವ ಸ್ಪೀಕರ್ ಕೆ.ಬಿ ಕೋಳಿವಾಡ ಅವರ ನಿವಾಸಕ್ಕೆ ತೆರಳಿ ರಾಜೀನಾಮೆ  ನೀಡಿದ್ದಾರೆ.
ಬಿಜೆಪಿಗೆ ಸೇರುವ ಕುರಿತು ಕ್ಷೇತ್ರದಲ್ಲಿ ಯಾರದ್ದೂ ವಿರೋಧವಿಲ್ಲ. ಕ್ಷೇತ್ರದ ಬಿಜೆಪಿ ಮುಖಂಡರು ನನ್ನ ಜೊತೆಗಿದ್ದಾರೆ. ನಾಳೆ ನನ್ನ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದವರು ಬಿಜೆಪಿಯವರಲ್ಲ. ಅವರೆಲ್ಲ ಕಾಂಗ್ರೆಸ್ ನವರು. ಅವರ ಮೇಲೆ ಈಗಾಗಲೆ ಪ್ರಕರಣವೂ ದಾಖಲಾಗಿದೆ. ಬಸವ ಕಲ್ಯಾಣಕ್ಕೆ ರಾಹುಲ್, ಸಿಎಂ ಸಿದ್ದರಾಮಯ್ಯ ಯಾರು ಬಂದರೂ ಸರಿಯೇ ನನ್ನ ಗೆಲವು ಖಚಿತ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ.
SCROLL FOR NEXT