ರಾಜಕೀಯ

ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುವ ಭರದಲ್ಲಿ ದಿನೇಶ್ ಗುಂಡೂರಾವ್ ಯಡವಟ್ಟು?

Shilpa D
ಬೆಂಗಳೂರು:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 71ನೇ ಹುಟ್ಟುಹಬ್ಬಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಶುಭಾಶಯ ಕೋರುವಾಗ ಯಡವಟ್ಟು ಮಾಡಿದ್ದಾರೆ.
ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹುಟ್ಟು ಹಬ್ಬ ಶುಭಾಶಯ ಕೋರಿದ್ದ ದಿನೇಶ್  'ಮಾಜಿ ಮುಖ್ಯಮಂತ್ರಿ ಹಾಗೂ  ಪ್ರಸಕ್ತ ವಿರೋಧ ಪಕ್ಷದ ನಾಯಕರಾಗಿರುವ, ಸದಾ ಬಡವರ ಸ್ನೇಹಿಯಾಗಿರು ಸಿದ್ದರಾಮಯ್ಯ ಅವರಿಗೆ ಹುಟ್ಟು ಹಬ್ಬದ ಶುಭಾಶಯ' ಎಂದು ಬರೆದಿದ್ದರು.
ಕೂಡಲೇ ತಮ್ಮ ತಪ್ಪು ತಿದ್ದುಕೊಂಡ ದಿನೇಶ್ ಅದನ್ನು ಎಡಿಟ್ ಮಾಡಿ ಮತ್ತೆ ಪೋಸ್ಟ್ ಮಾಡಿದರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದಿದ್ದರು. 
ಆದರೆ ದಿನೇಶ್ ಎಡಿಟ್ ಮಾಡುವ ಮೊದಲೇ ಮೊದಲು ಹಾಕಿದ್ದ ಪೋಸ್ಟ್ ಅನ್ನು 61 ಮಂದಿ ಸ್ಕ್ರೀನ್ ಶಾಟ್ ತೆಗೆದುಕೊಂಡು ಶೇರ್ ಮಾಡಿದ್ದರು. ಸಮ್ಮಿಶ್ರ ಸರ್ಕಾರದ ಹಲವು ನಿರ್ಧಾರಗಳನ್ನು ವಿರೋಧಿಸಿ ಸಿಎಂಗೆ ಪತ್ರ ಬರೆದಿದ್ದ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಂತೆ ವರ್ತಿಸಿದ್ದರು, ಆದರೆ ದಿನೇಶ್ ಗುಂಡೂರಾವ್ ಶುಭಾಶಯ ಕೋರುವಾಗ ಅವರನ್ನು ವಿರೋಧ ಪಕ್ಷದ ನಾಯಕ ಎಂದು ಕರೆದಿದ್ದು ಕಾಕತಾಳೀಯವಾಗಿತ್ತು. 
SCROLL FOR NEXT