ರಾಜಕೀಯ

ಜೆಡಿಎಸ್ ಎಂದರೆ 'ಜನತಾದಳ ಸಂಘ ಪರಿವಾರ' ಬಿಜೆಪಿಯ 'ಬಿ' ಟೀಂ ಜೆಡಿಎಸ್: ರಾಹುಲ್ ಗಾಂಧಿ

Vishwanath S
ಮಂಡ್ಯ: ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಭರ್ಜರಿ ರ್ಯಾಲಿಗಳನ್ನು ಮಾಡುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜೆಡಿಎಸ್, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 
ಮಂಡ್ಯಯ ಜಿಲ್ಲೆಯ ಮಲವಳ್ಳಿಯಲ್ಲಿ ನಡೆದ ಕಾಂಗ್ರೆಸ್ ಜನಾಶೀರ್ವಾದ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಜೆಡಿಎಸ್ ಗೆ ಹೊಸ ವ್ಯಾಖ್ಯಾಯನ ಕೊಟ್ಟಿದ್ದು ಜೆಡಿಎಸ್ ಎಂದರೆ ಜನತಾದಳ ಸಂಘ ಪರಿವಾರ ಎಂದು ಹೇಳಿದ್ದಾರೆ. 
ಕರ್ನಾಟಕದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿವೆ. ಅದರ ಜತೆ ಮತ್ತೊಂದು ಪಕ್ಷವಿದೆ ಅದೇ ಬಿಜೆಪಿಯ ಬಿ ಟೀಂ ಜೆಡಿಎಸ್. ಬಿಜೆಪಿಯ ಬಿ ಟೀಂ, ಸಿ ಟೀಂ ಯಾವುದೇ ಇದ್ದರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ.
ಈ ಹಿಂದೆ ನಾನು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಮಾಡಿದ್ದಾಗ ಅವರನ್ನು ರೈತರ ಸಾಲ ಮನ್ನ ಮಾಡುವಂತೆ ಕೇಳಿದ್ದೆ ಆದರೆ ಇಲ್ಲಿಯವರೆಗೂ ಮಾಡಿಲ್ಲ. ಇದೇ ಮಾತನ್ನ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳಿದ 10 ದಿನದಲ್ಲೇ ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದು ಹೇಳಿದರು.
SCROLL FOR NEXT