ಸಂಗ್ರಹ ಚಿತ್ರ 
ರಾಜಕೀಯ

ಅಮೆರಿಕದಲ್ಲಿ ನೆಲೆಸಲು ಮುಂದಾಗಿದೆಯೇ ಸಚಿವ ಎಂಬಿ ಪಾಟೀಲ್ ಕುಟುಂಬ?

ಕರ್ನಾಟಕದ ನೀರಾವರಿ ಸಚಿವ ಎಂಬಿ ಪಾಟೀಲ್ ಅವರ ಕುಟುಂಬಸ್ಥರು ಅಮೆರಿಕದಲ್ಲಿ ನೆಲೆಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಬೆಂಗಳೂರು: ಕರ್ನಾಟಕದ ನೀರಾವರಿ ಸಚಿವ ಎಂಬಿ ಪಾಟೀಲ್ ಅವರ ಕುಟುಂಬಸ್ಥರು ಅಮೆರಿಕದಲ್ಲಿ ನೆಲೆಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಖಾಸಗಿ ಸುದ್ದಿವಾಹಿನಿ ಸುವರ್ಣಾ ನ್ಯೂಸ್ ವರದಿ ಮಾಡಿರುವಂತೆ ಲಿಂಗಾಯತ ಧರ್ಮದ ಮುಂಚೂಣಿ ಹೋರಾಟಗಾರ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರ ಕುಟುಂಬಸ್ಥರು ಅಮೆರಿಕ ಗ್ರೀನ್ ಕಾರ್ಡ್ ಗೆ ಅರ್ಜಿ ಹಾಕಿದ್ದಾರೆ ಎನ್ನಲಾಗಿದೆ. ವರದಿಯಲ್ಲಿರುವಂತೆ ಎಂಬಿ ಪಾಟೀಲ್ ಅವರ ಪತ್ನಿ ಆಶಾ ಪಾಟೀಲ್ ಅವರು ಅಮೆರಿಕ ಗ್ರೀನ್ ಕಾರ್ಡ್​ ಪಡೆಯಲು ಯತ್ನಿಸಿದ್ದಾರೆ ಎನ್ನಲಾಗಿದೆ. 
ಪಾಟೀಲ್ ಕುಟುಂಬ ವಿದೇಶದಲ್ಲಿ ಬಂಡವಾಳ ಹೂಡಲು ಆಸಕ್ತವಾಗಿದೆ ಎಂದು ಹೇಳಲಾಗಿದ್ದು, ಅಮೆರಿಕದಲ್ಲಿ ಕನಿಷ್ಠ 10 ಜನರಿಗೆ ಪೂರ್ಣ ಪ್ರಮಾಣದ ಉದ್ಯೋಗ ಕೊಟ್ಟರೆ, ಗ್ರೀನ್ ಕಾರ್ಡ್ ಸಿಗಲಿದೆ. ಅಲ್ಲದೇ ಅಲ್ಲಿಯೇ ಶಾಶ್ವತವಾಗಿ ನೆಲೆಸಲು ಅವಕಾಶ ಸಿಗಲಿದೆ. ಅದಕ್ಕೆ ಅಲ್ಲಿ 3.35 ಕೋಟಿ ರೂಪಾಯಿ ಪ್ರಾರಂಭಿಕ ಹಣ ಹೂಡಲೂ ಪಾಟೀಲ್ ಕುಟುಂಬ ಸಿದ್ಧವಿದೆ ಎನ್ನಲಾಗಿದೆ. 
ಗ್ರೀನ್ ಕಾರ್ಡ್ ಗಾಗಿ ಪಾಟೀಲ್ ಕುಟುಂಬ ಈಗಾಗಲೇ ಗ್ರೀನ್ ಕಾರ್ಡ್ ಕೊಡಿಸುವ ವಿದೇಶಿ ಕಂಪನಿಗೆ 33 ಲಕ್ಷ 50 ಸಾವಿರ ರೂಪಾಯಿ ಕೊಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.  ಪರವಾನಗಿ ಕಲ್ಪಿಸುವ ಮತ್ತೊಂದು ಕಂಪನಿಗೆ 10 ಲಕ್ಷ ರೂಪಾಯಿ​​​​​ ಸಂದಾಯ ಮಾಡಿದ್ದಾರೆ. ಈ ಸಂಬಂಧವಾಗಿ LCR ಪಾರ್ಟ್ ನರ್ಸ್ (LLC)ಹಾಗೂ ಬರ್ನ್ ಸೆನ್ & ಲೊವಿ (LLP)ಎಂಬ ಎರಡು ಕಂಪನಿಗಳಿಗೆ ಪರವಾನಗಿ ಕೊಡಿಸಲು ಹಣ ಸಂದಾಯ ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇನ್ನು ಈ ವರದಿಗೆ ಸಂಬಂಧಿಸಿದಂತೆ  ಪ್ರತಿಕ್ರಿಯೆ ನೀಡಿರುವ ಸಚಿವ ಎಂಬಿ ಪಾಟೀಲ್, 'ನನ್ನ ಮಗ ಅಮೆರಿಕದಲ್ಲಿ ಓದಿದ್ದು, ಅಲ್ಲಿಯೇ ನೆಲಸಲು ತಯಾರಿ ನಡೆಸುತ್ತಿರುವುದು ಹೌದು. ಆದರೆ, ನನ್ನ ಪತ್ನಿ ಅಂಥಹ ಯಾವುದೇ ಯೋಚನೆ ಮಾಡಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಆರೋಪಕ್ಕೆ ಸಂಬಂಧಿಸಿದಂತೆ ಮಾರ್ಚ್ 25ರಂದು ಖುದ್ದು ಪತ್ನಿ ಹಾಗೂ ಮಗ ಬಂದು ಸುವರ್ಣ ನ್ಯೂಸ್ ಮೂಲಕವೇ ಸ್ಪಷ್ಟನೆ ನೀಡಲಿದ್ದಾರೆಂದು ಪಾಟೀಲ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!