ತೆಂಗಿನ ಕಾಯಿ ಚಿಹ್ನೆ 
ರಾಜಕೀಯ

ತೆಂಗಿನಕಾಯಿ ಚಿಹ್ನೆ ಪಡೆಯುವಲ್ಲಿ ವಿಫಲರಾದ ಪಕ್ಷೇತರ ಅಭ್ಯರ್ಥಿಗೆ ಟ್ರಾಕ್ಟರ್ ಗುರುತು

ತೆಂಗಿನ ಕಾಯಿಯನ್ನು ಪಕ್ಷದ ಚಿಹ್ನೆಯನ್ನಾಗಿ ಪಡೆದುಕೊಳ್ಳಲು ವಿಫಲರಾದ ದೇವದುರ್ಗದ ಪಕ್ಷೇತರ ಅಭ್ಯರ್ಥಿ ಕರೇಮ್ಮ ಜಿ. ನಾಯಕ್ ಅವರಿಗೆ ಟ್ರಾಕ್ಟರ್ ದೊರೆಯುವ ಸಾಧ್ಯತೆ ಇದೆ. ತೆಂಗಿನ ಕಾಯಿ ಚಿಹ್ನೆಗಾಗಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯ ನಡುವೆ ಏ.27 ಜಟಾಪಟಿ ನಡೆದಿತ್ತು.

ರಾಯಚೂರು : ತೆಂಗಿನ ಕಾಯಿಯನ್ನು ಪಕ್ಷದ ಚಿಹ್ನೆಯನ್ನಾಗಿ ಪಡೆದುಕೊಳ್ಳಲು ವಿಫಲರಾದ  ದೇವದುರ್ಗದ ಪಕ್ಷೇತರ ಅಭ್ಯರ್ಥಿ ಕರೇಮ್ಮ ಜಿ. ನಾಯಕ್  ಅವರಿಗೆ ಟ್ರಾಕ್ಟರ್ ದೊರೆಯುವ ಸಾಧ್ಯತೆ ಇದೆ. ತೆಂಗಿನ ಕಾಯಿ  ಚಿಹ್ನೆಗಾಗಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯ ನಡುವೆ ಏ.27 ಜಟಾಪಟಿ ನಡೆದಿತ್ತು.

ಈ ಬಾರಿಯ ಚುನಾವಣೆಗಾಗಿ ತೆಂಗಿನಕಾಯಿಯನ್ನು ಪಕ್ಷದ ಚಿಹ್ನೆಯಾಗಿ ಬಳಸಿಕೊಳ್ಳಲು  ಪಕ್ಷೇತರ ಅಭ್ಯರ್ಥಿ ಕರೇಮ್ಮ ಜಿ. ನಾಯಕ್  ನಿರ್ಧರಿಸಿದ್ದು, ಚುನಾವಣಾಧಿಕಾರಿ ದೇವದುರ್ಗ ಕೂಡಾ ಸಮ್ಮತಿ ನೀಡಿದ್ದರು. ಆದರೆ, ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ ನಂತರ ಅದನ್ನು ಹಿಂಪಡೆಯಲಾಗಿದೆ.

ಆ ಚಿಹ್ನೆ ಕೆಜೆಪಿಗೆ ಸೇರಿದ್ದು ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಜನಪ್ರಿಯವಾದ ಚಿಹ್ನೆ ಪಡೆಯುವಲ್ಲಿ ವಿಫಲವಾಗಿರುವುದಾಗಿ  ಎಂದು ಕರೇಮ್ಮ ಹೇಳಿದ್ದಾರೆ.

ಚಿಹ್ನೆಗಳಿದ್ದ ಪುಸ್ತಕದಲ್ಲಿದ್ದ ತೆಂಗಿನ ಕಾಯಿಯನ್ನು ಪಡೆಯಲು ನಿರ್ಧರಿಸಿ ಚುನಾವಣಾಧಿಕಾರಿ ಮೊಹಮ್ಮದ್ ಇರ್ಪಾನ್ ಅವರಿಗೆ  ಹೇಳಿದ ನಂತರ ಅವರು ಆ ಚಿಹ್ನೆಯನ್ನೇ ನೀಡಿದ್ಜರು. ಆ ಪ್ರಕ್ರಿಯೆ ಮುಗಿದ ನಂತರ ಅವರ ಬೆಂಬಲಿಗರು  ಆ ಚಿಹ್ನೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರಿಯಗೊಳಿಸಿದ್ದಾರೆ.

 ಈ ವಿಷಯ ತಿಳಿದ ಬಿಜೆಪಿ ಆಕ್ಷೇಪಣೆ ಸಲ್ಲಿಸಿದ್ದು, ಆ ಚಿಹ್ನೆಯನ್ನು ಕರೇಮ್ಮ ಅವರಿಗೆ ನೀಡದಂತೆ ಚುನಾವಣಾದಿಕಾರಿಗಳಿಗೆ ತಿಳಿಸಿದ್ದಾರೆ.  ಇದರಿಂದಾಗಿ ಕರೇಮ್ಮ ಈಗ ಟ್ರಾಕ್ಟರ್ ಚಿಹ್ನೆ ಆಯ್ಕೆ ಮಾಡಿದ್ದಾರೆ, ಆದರೂ , ಚುನಾವಣಾಧಿಕಾರಿಗಳು ಇನ್ನೂ ಅಂತಿಮಗೊಳಿಸಿಲ್ಲ ಎಂದು ಕರೇಮ್ಮ ಹೇಳಿದ್ದಾರೆ.

 ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಚುನಾವಣಾಧಿಕಾರಿ , ತೆಂಗಿನಕಾಯಿ ಚಿಹ್ನೆ ಕೆಜೆಪಿಯದ್ದು ಎಂಬುದು ಗೊತ್ತಿರಲಿಲ್ಲ. ಕರೇಮ್ಮ ಅವರಿಗೆ ಟ್ರಾಕ್ಟರ್ ಸಿಹ್ನೆ ನೀಡುವುದಾಗಿ ಹೇಳಿದ್ದಾರೆ.

ಮೇ 12 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಸೋಲಿಸಿ ಗೆದ್ದು ಬರುವುದಾಗಿ ಕರೇಮ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT