ಗೋಪಾಲಯ್ಯ, ನೆ,ಲ ನರೇಂದ್ರ ಬಾಬು, ಎಚ್.ಎಸ್ ಮಂಜುನಾಥ್ 
ರಾಜಕೀಯ

ಮಹಾಲಕ್ಷ್ಮಿ ಲೇಔಟ್ ನಲ್ಲಿ ಹಳೇಯ ವೈರಿಗಳ ಬಿಗ್ ಫೈಟ್: ಇಬ್ಬರಿಗೂ ಗೆಲುವು ಕಬ್ಬಿಣದ ಕಡಲೆ!

ಮಹಾಲಕ್ಷ್ಮಿ ಲೇಔಟ್ ವಿಧಾನಸಭೆ ಕ್ಷೇತ್ರ ಜೆಡಿಎಸ್ ಹಾಲಿ ಶಾಸಕ ಗೋಪಾಲಯ್ಯ ಮತ್ತು ಮಾಜಿ ಶಾಸಕ ನೆ.ಲ ನರೇಂದ್ರ ಬಾಬು ನಡುವೆ ಜಿದ್ದಾಜಿದ್ದಿನ .

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭೆ ಕ್ಷೇತ್ರ ಜೆಡಿಎಸ್ ಹಾಲಿ ಶಾಸಕ ಗೋಪಾಲಯ್ಯ ಮತ್ತು ಮಾಜಿ ಶಾಸಕ ನೆ.ಲ ನರೇಂದ್ರ ಬಾಬು ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದೆ.
50ರ ಆಸುಪಾಸಿನಲ್ಲಿರುವ ಇಬ್ಬರು ಹಿರಿಯ ನಾಯಕರ ವಿರುದ್ಧ ಕಾಂಗ್ರೆಸ್ ಯುವ ನಾಯಕ ಮಂಜುನಾಥ್ ಎಚ್ಎಸ್ ಅವರನ್ನು ಕಣಕ್ಕಿಳಿಸಿದೆ, ಎನ್ ಎಸ್ ಯ ಐ ಅಧ್ಯಕ್ಷರಾಗಿರುವ ಮಂಜುನಾಥ್ ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಮುಖಂಡರಾಗಿದ್ದಾರೆ, ಇಲ್ಲಿ ಯಾರೋಬ್ಬರ ಗೆಲುವು ಸುಲಭವಾಗಿಲ್ಲ, ಏಕೆಂದರೇ ಮಹಾಲಕ್ಷ್ಮಿ ಲೇಔಟ್ ಸಮಸ್ಯೆಗಳ ಸರಮಾಲೆಯನ್ನೇ ಹಾಸಿ ಹೊದ್ದಿಕೊಂಡಿದೆ. 
ಮಧ್ಯಮ ವರ್ಗ ಹಾಗೂ ಬಡಜನರೇ ಹೆಚ್ಚಾಗಿರುವ ಮಹಾಲಕ್ಷ್ಮಿ ಲೇಔಟ್ ನಲ್ಲಿ ರಾಜಕಾಲುವೆಗಳ ದುಸ್ಥಿತಿ, ಕಸದ ಸಮಸ್ಯೆ ತಾಂಡವವಾಡುತ್ತಿದೆ.
ವೃಷಭಾವತಿ ಕಣಿವೆಗೆ ಕಸು ಸುರಿಯಲಾಗುತ್ತಿದ್ದು, ಅದರ ಸಮೀಪವಿರುವ ವಸತಿ ಪ್ರದೇಶದ ಜನರ ಜೀವನ ಶೋಚನೀಯವಾಗಿದೆ, ಅದನ್ನು ಹೊರತು ಪಡಿಸಿದರೇ ಇಲ್ಲಿನ ಪ್ರದೇಶ ರೋಗಗಳ ಉತ್ಪದನಾ ಕೇಂದ್ರವಾಗಿದೆ
ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ, ಮಹಾಲಕ್ಷ್ಮಿ ಲೇಔಟ್ ನಲ್ಲಿ  53 ಪಾರ್ಕ್ ಗಳಿದ್ದು, ಸರಿಯಾದ ನಿರ್ವಹಣೆಯಿಲ್ಲದೇ ಅವುಗಳಲ್ಲಿ ಹಲವು ಪಾರ್ಕ್ ಗಳು ಕಾರ್ಯ ನಿರ್ವಹಿಸುತ್ತಿಲ್ಲ, ಕಿರಿದಾದ ರಸ್ತೆ ಹಾಗೂ ಟ್ರಾಫಿಕ್ ಸಮಸ್ಯೆ ಮತ್ತು ಕುಡಿಯುವ ನೀರಿನ ಸಮಸ್ಯೆ ಪ್ರಮುಖವಾಗಿವೆ.
ರಾಜಾಜಿನಗರ ವಾರ್ಡ್ ನಿಂದ ನೆ,ಲ ನರೇಂದ್ರ ಬಾಬು ಮೂರು ಬಾರಿ ಕೌನ್ಸಿಲರ್ ಆಗಿ ಆರಿಸಿ ಬಂದಿದ್ದರು. ಜೊತೆಗೆ 2 ಬಾರಿ ಶಾಸಕರಾಗಿದ್ದರು, ಅದಾದ ನಂತರ ಕಾಂಗ್ರೆಸ್ ತೊರೆದ ಅವರು ಆರು ತಿಂಗಳ ಹಿಂದೆ ಬಿಜೆಪಿ ಸೇರಿದ್ದಾರೆ, 2013ರ ವಿಧಾನಸಭೆ ಚುನಾವಣೆಯಲ್ಲಿ ಬಾಬು ಸೋತ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಅವರನ್ನು ನಿರ್ಲಕ್ಷ್ಯಿಸಲಾಗಿತ್ತು.
ಹಲವು ಸಿನಿಮಾ ಹಾಗೂ ಟಿ, ವಿ ಧಾರಾವಾಹಿಗಳಲ್ಲಿ ನಟಿಸಿರುವ ಬಾಬು ಮಹಿಳಾ ಸಬಲೀಕರಣ ಗುಂಪುಗಳ ಜೊತೆ ಕೈ ಜೋಡಿಸಿದ್ದಾರೆ, ನರೇಂದ್ರ ಬಾಬು ಅವರಿಗೆ ಟಿಕೆಟ್ ನೀಡಿದ್ದಕ್ಕೆ ಬಿಜೆಪಿ ಹಲವು ನಿಷ್ಠಾವಂತ ಕಾರ್ಯಕರ್ತರು  ಮತ್ತು ಟಿಕೆಟ್ ಆಕಾಂಕ್ಷಿಗಳ ವಿರೋಧ ಎದುರಿಸಬೇಕಾಯಿತು,
ವೃಷಬಾವತಿ ನಗರದ ಜೆಡಿಎಸ್ ಕಾರ್ಪೋರೇಟರ್ ಗೋಪಾಲಯ್ಯ. 2013 ರಲ್ಲಿ ಆಶ್ಚರ್ಯಕರ ರೀತಿಯಲ್ಲಿ ಗೆಲುವು ಸಾಧಿಸಿದ್ದರು. ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಯಿಂದಾಗಿ ಗೋಪಾಲಯ್ಯ ಪತ್ನಿ ಎಸ್. ಪಿ ಹೇಮಲತಾ 2015 ರಲ್ಲಿ ಉಪ ಮೇಯರ್ ಪಟ್ಟ ಅಲಂಕರಿಸಿದ್ದರು. ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಗೋಪಾಲಯ್ಯ ಮತ್ತೆ ಗೆಲ್ಲುವ ಆತ್ಮ ವಿಶ್ವಾಸದಲ್ಲಿದ್ದಾರೆ.
ಕ್ಷೇತ್ರದಲ್ಲಿರುವ ಕುಡಿಯುವ ನೀರು ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು 2 ವರ್ಷದಲ್ಲಿ ಬಗೆಹರಿಸುವುದಾಗಿ ಗೋಪಾಲಯ್ಯ ಭರವಸೆ ನೀಡಿದ್ದಾರೆ, ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ನಿಷ್ಠಾವಂತ ಶಿಷ್ಯನಾಗಿರುವ ಮಂಜುನಾಥ್, ತಮ್ಮನ್ನು ಗೆಲ್ಲಿಸಿದರೇ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲು ರಾತ್ರಿ ದುಡಿಯುವುದಾಗಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT