ಬೆಂಗಳೂರು: ನಿರಂತರ ಪ್ರಚಾರದಿಂದ ದಣಿದಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಅವರು ಪುತ್ರ ನಿಖಿಲ್ ಜೊತೆ ಸಿಂಗಾಪುರಕ್ಕೆ ತೆರಳಿದ್ದಾರೆ.
ಕಮಾರ ಪರ್ವದ ಮೂಲಕ ರಾಜ್ಯ ಪ್ರವಾಸ ಮಾಡಿದ್ದ ಎಚ್ಡಿಕೆ ಅವರು ಪ್ರಚಾರದ ಕೊನೆ ದಿನಗಳಲ್ಲಿ ತೀವ್ರವಾಗಿ ಬಳಲಿದ್ದರು. ಹೀಗಾಗಿ ನಿನ್ನೆ ಸಂಜೆ 7 ಗಂಟೆಗೆ ಸಿಂಗಾಪೂರ್ ಗೆ ತೆರಳಿದ್ದಾರೆ
ಹೃದ್ರೋಗಿಯಾಗಿರುವ ಅವರು ವಿಶೇಷ ಪರೀಕ್ಷೆಗಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಮಂಗಳವಾರ ಫಲಿತಾಂಶ ಪ್ರಕಟವಾಗಲಿದ್ದು, ಸೋಮವಾರ ರಾತ್ರಿ ಇಬ್ಬರೂ ಬೆಂಗಳೂರಿಗೆ ವಾಪಾಸಾಗಲಿದ್ದಾರೆ ಎಂದು ತಿಳಿದು ಬಂದಿದೆ.