ರಾಜಕೀಯ

ವಾಸ್ತು ದೋಷ: ಅನುಗ್ರಹದಲ್ಲಿ ಉಳಿದುಕೊಳ್ಳಲು ಹೆಚ್‍ಡಿ ಕುಮಾರಸ್ವಾಮಿ ಹಿಂದೇಟು?

Vishwanath S
ಬೆಂಗಳೂರು: ಸದ್ಯ ರಾಜ್ಯದ 25ನೇ ಮುಖ್ಯಮಂತ್ರಿಯಾಗಲಿರುವ ಜೆಡಿಎಸ್ ನ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಅಧಿಕೃತ ನಿವಾಸ ಅನುಗ್ರಹದಲ್ಲಿ ಉಳಿದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸರ್ಕಾರಿ ಬಂಗಲೆ ಅನುಗ್ರಹದಲ್ಲಿ ವಾಸ್ತು ಸರಿಯಿಲ್ಲ ಎಂದು ಕೆಲ ಸೂಚನೆಗಳು ಕೆಲ ವಾಸ್ತು ತಜ್ಞರಿಂದ ಬಂದ ಹಿನ್ನೆಲೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರು ಅನುಗ್ರಹದಲ್ಲಿ ಉಳಿದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. 
ಕುಮಾರಸ್ವಾಮಿ ಅವರು ಸಿಎಂ ಅಧಿಕೃತ ನಿವಾಸ ಅನುಗ್ರಹದಲ್ಲಿ ಉಳಿಯುವುದಕ್ಕೂ ಮುನ್ನ ಕೆಲ ವಾಸ್ತುತಜ್ಞರು ಮನೆಯನ್ನು ಪರಿಶೀಲಿಸಿ, ಮನೆಯ ವಾಸ್ತು ಸರಿಯಿಲ್ಲ. ಇದು ಕುಮಾರಸ್ವಾಮಿ ಅವರ ಏಳಿಗೆಗೆ ತೊಂದರೆಯಾಗುತ್ತದೆ. ಇದರಿಂದಾಗಿ ಕುಮಾರಸ್ವಾಮಿ ಅವರ ಈ ಮನೆಯಿಂದ ದೂರ ಇರುವುದೇ ಉತ್ತಮ ಎಂದು ವಾಸ್ತುತಜ್ಞರು ಹೇಳಿದ್ದಾರೆ. 
ಇನ್ನೊಂದೆಡೆ ಅನುಗ್ರಹದಲ್ಲಿ ಮುಖ್ಯಮಂತ್ರಿ, ಮಂತ್ರಿಯಾದವರು ನೆಲೆಸಿದರೇ ಅವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಯಿದ್ದು ಇದರಿಂದಾಗಿ ಮತ್ತೆರಡು ಅಧಿಕೃತ ನಿವಾಸಗಳಾದ ಕಾವೇರಿ ಅಥವಾ ಕೃಷ್ಣದಲ್ಲಿ ಇರಲು ಬಯಸುತ್ತಾರೆ.
SCROLL FOR NEXT