ರಾಮಲಿಂಗಾರೆಡ್ಡಿ, ಕೆ.ಜೆ ಜಾರ್ಜ್, ಮತ್ತು ದಿನೇಶ್ ಗುಂಡೂರಾವ್ 
ರಾಜಕೀಯ

ಇನ್ನೂ ನಿರ್ಧಾರವಾಗಿಲ್ಲ ರೆಡ್ಡಿ, ಜಾರ್ಜ್ ಭವಿಷ್ಯ: ಸಮ್ಮಿಶ್ರ ಸರ್ಕಾರದ ಸಂಭಾವ್ಯ ಸಚಿವರಿವರು!

ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಹಲವು ಕಾಂಗ್ರೆಸ್ ನಾಯಕರು ಮಂತ್ರಿಗಿರಿಗಾಗಿ ಲಾಬಿ ನಡೆಸಲು ದೆಹಲಿಗೆ ತೆರಳಿದ್ದಾರೆ....

ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಹಲವು ಕಾಂಗ್ರೆಸ್ ನಾಯಕರು ಮಂತ್ರಿಗಿರಿಗಾಗಿ ಲಾಬಿ ನಡೆಸಲು ದೆಹಲಿಗೆ ತೆರಳಿದ್ದಾರೆ. ರಾಜ್ಯ ನಾಯಕರು ತಯಾರಿಸಿರುವ ಸಚಿವರ ಪಟ್ಟಿಯ ಕೆಲವು ಶಾಸಕರಿಗೆ ಹೈಕಮಾಂಡ್ ಈಗಾಗಲೇ ಅನುಮತಿ ನೀಡಿದೆ.
ಆದರೆ ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಕೆಲ ಕಾಂಗ್ರೆಸ್ ನಾಯಕರಿಗೆ ಸಚಿವ ಸ್ಥಾನ ನೀಡಬೇಕೆ ಬೇಡವೇ ಎಂಬ ಬಗ್ಗೆ ಲೆಕ್ಕಾಚಾರ ನಡೆಯುತ್ತಿದೆ. ಆರು ಶಾಸಕರಿಗೆ ಸಚಿವರಾಗಲು ಹೈಕಮಾಂಡ್ ಒಪ್ಪಿಗೆ ನೀಡಿದೆ.  ಸಿದ್ದರಾಮಯ್ಯ ಸಂಪುಟದ ಪ್ರಮುಖ ಸಚಿವರುಗಳಾಗಿದ್ದ ಶಿವನಾಂದ ಪಾಟೀಲ್, ಪ್ರಿಯಾಂಕ್ ಖರ್ಗೆ,  ಯು.ಟಿ ಖಾದರ್, ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ಕೆ.ಎಚ್ ಮುನಿಯಪ್ಪ ಪುತ್ರಿ ರೂಪಕಲಾ ಶಶಿಧರ್, ಸ್ವತಂತ್ರ್ಯ ಅಭ್ಯರ್ಥಿ ಆರ್. ಶಂಕರ್ ಅವರುಗಳಿಗೆ ಸಚಿವ ಸ್ಥಾನ ನೀಡಲು ಗ್ರೀನ್ ಸಿಗ್ನಲ್ ದೊರಕಿದೆ.
ಇನ್ನೂ ಹಿರಿಯ ನಾಯಕರುಗಳಾದ ರಾಮಲಿಂಗಾ ರೆಡ್ಡಿ, ಕೆ.ಜೆ ಜಾರ್ಜ್.ಎಂ.ಬಿ ಪಾಟೀಲ್ ಮತ್ತು ಎಸ್ .ಆರ್ ಪಾಟೀಲ್ ಅವರುಗಳಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆ ಬೇಡವೇ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ಮೂಲಗಳು ತಿಳಿಸಿವೆ, ಕೆ.ಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಸಚಿವ ಹುದ್ದೆಯನ್ನು ನೀಡಬೇಕು ಎಂದು, ಡಿ.ಕೆ ಶಿವಕುಮಾರ್ ಕೋರಿದ್ದಾರೆ ಎಂದು ತಿಳಿದು ಬಂದಿದೆ. ಜಾತಿ , ಸಮುದಾಯ ಹಾಗೂ ಜಿಲ್ಲಾವಾರು ಪ್ರಾತಿನಿದ್ಯದ ಆಧಾರದ ಮೇಲೆ  ಸಂಪುಟ ಹಂಚಿಕೆ ಮಾಡಲು ಕಾಂಗ್ರೆಸ್ ಕಸರತ್ತು ನಡೆಸಿದೆ,
ಕಾಂಗ್ರೆಸ್ ಪಕ್ಷಕ್ಕೆ 22 ಸಚಿವ ಸ್ಥಾನಗಳು ದೊರೆಯಲಿದ್ದು, ಡಿ.ಕೆ ಶಿವಕುಮಾರ್, ದಿನೇಶ್ ಗುಂಡೂರಾವ್, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ರಾಮಲಿಂಗಾ ರೆಡ್ಡಿ ಮತ್ತಿತರು ಜಾತಿ ಆಧಾರದ ಮೇಲೆ ತಮಗೆ ಪ್ರಾತಿನಿದ್ಯ ನೀಡಬೇಕೆಂದು ಬಯಸಿದ್ದಾರೆ. ಇನ್ನೂ ಮತ್ತೊಬ್ಬ ಸ್ವತಂತ್ರ್ಯ ಅಭ್ಯರ್ಥಿಯಾದ ಎಚ್. ನಾಗೇಶ್ ಗೂ ಕೂಡ ಸಚಿವ ಹುದ್ದೆ ನೀಡುವ ಭರವಸೆ ನೀಡಿದ್ದು, ಬಿಜೆಪಿಗೆ ಬೆಂಬಲ ನೀಡದಂತೆ ಸೂಚಿಸಲಾಗಿದೆ,
ಕಾಂಗ್ರೆಸ್ ನ ಸಂಭಾವ್ಯ ಸಚಿವರುಗಳಿವರು
ಪಿ,.ಟಿ ಪರಮೇಶ್ವರ್ ನಾಯಕ್- ಹಡಗಲಿ
ಶಿವಾನಂದ ಪಾಟೀಲ್- ಬಸವನ ಬಾಗೇವಾಡಿ
ರಾಜಶೇಖರ್ ಪಾಟೀಲ್- ಹುಮ್ನಾಬಾದ್
ಬಿ.ಕೆ ಸಂಗಮೇಶ್ವರ್ - ಭದ್ರಾವತಿ
ಆರ್. ಶಂಕರ್- ಸ್ವತಂತ್ರ್ಯ ಶಾಸಕ ರಾಣೆ, ಬೆನ್ನೂರು
ರೂಪಕಲಾ ಎಂ- ಕೆಜಿಎಫ್
ಪ್ರಿಯಾಂಕ್ ಖರ್ಗೆ- ಚಿತ್ತಾಪುರ
ಯು.ಟಿ ಖಾದರ್- ಮಂಗಳೂರು
ಸತೀಶ್ ಜಾರಕಿಹೊಳಿ- ಯಮನಕರಡಿ
ಡಿ.ಕೆ ಶಿವಕುಮಾರ್- ಕನಕಪುರ
ಸಿಎಸ್ ಶಿವಳ್ಳಿ- ಕುಂದಗೋಳ
ಸಚಿವ ಸ್ಥಾನಕ್ಕೆ ಪರಿಗಣಿಸಲ್ಪಟ್ಟಿರುವ ಶಾಸಕರು
ದಿನೇಶ್ ಗುಂಡೂರಾವ್- ಗಾಂಧಿನಗರ
ಆರ್.ವಿ ದೇಶಪಾಂಡೆ, - ಹಳಿಯಾಳ
ಕೆ,ಜೆ ಜಾರ್ಜ್- ಸರ್ವಜ್ಞ ನಗರ
ಎಚ್. ನಾಗೇಶ್- ಸ್ವತಂತ್ರ್ಯ ಶಾಸಕ, ಮುಳಬಾಗಿಲು
ರಾಮಲಿಂಗಾರೆಡ್ಡಿ- ಬಿಟಿಎಂ ಲೇಔಟ್
ಡಾ.ಕೆ. ಸುಧಾಕರ್- ಚಿಕ್ಕಬಳ್ಳಾಪುರ
ರೋಷನ್ ಬೇಗ್- ಶಿವಾಜಿನಗರ
ಟಿ.ರಘುಮೂರ್ತಿ-ಚಳ್ಳಕೆರೆ
ಕೃಷ್ಣ ಬೈರೇಗೌಡ- ಬ್ಯಾಟರಾಯನಪುರ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

SCROLL FOR NEXT