ಕೆ.ಶಿವಲಿಂಗೇಗೌಡ 
ರಾಜಕೀಯ

'8 ತಿಂಗಳಿಂದ ಸಿಎಂರನ್ನು ಗೋಳಾಡಿಸುತ್ತಿದ್ದೀರಿ, ಇಲ್ಲಿಗೆ ನಿಲ್ಲಿಸದಿದ್ದರೇ ಶಾಪ ತಟ್ಟುತ್ತದೆ'

ಮನೆಯಿಂದ ಹೊರಟರೆ ಹೆಂಡತಿ, ಮಕ್ಕಳು ಅನುಮಾನದಿಂದ ನೋಡುತ್ತಾರೆ ಎಂದು ಮಂಗಳವಾರ ವಿಧಾನಸಭೆಯ ಕಲಾಪದಲ್ಲಿ ಜೆಡಿಎಸ್‌ನ ಶಿವಲಿಂಗೇಗೌಡ ಅವರು ...

ಬೆಂಗಳೂರು: ಮನೆಯಿಂದ ಹೊರಟರೆ ಹೆಂಡತಿ, ಮಕ್ಕಳು ಅನುಮಾನದಿಂದ ನೋಡುತ್ತಾರೆ ಎಂದು  ಮಂಗಳವಾರ ವಿಧಾನಸಭೆಯ ಕಲಾಪದಲ್ಲಿ ಜೆಡಿಎಸ್‌ನ ಶಿವಲಿಂಗೇಗೌಡ ಅವರು ಮೇಲಿನ ಸಾಲು ಉಲ್ಲೇಖೀಸುವ ಮೂಲಕ ಶಾಸಕರ ಸ್ಥಿತಿ ಬಗ್ಗೆ ಬೆಳಕು ಚೆಲ್ಲಲು ಯತ್ನಿಸಿದರು. 
ಈ ಹಿಂದೆ ಶಾಸಕರ ಬಗ್ಗೆ ಅಪಾರ ಗೌರವವಿತ್ತು.ಇಂದು ಅದು ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಮನೆಯಿಂದ ಹೊರಟರೆ ಹೆಂಡತಿ, ಮಕ್ಕಳು ಅನುಮಾನದಿಂದ ನೋಡುತ್ತಾರೆ. ಏನೇನೋ ಡೀಲ್‌ ನಡೆಯುತ್ತಿದೆ ಎಂದು ಅಪಪ್ರಚಾರ ನಡೆಯುತ್ತಿದೆ. ಗೌರವದಿಂದ ಹೋಗಿ ಬನ್ನಿ ಎನ್ನುತ್ತಾರೆ. ಇವರು ಯಾರೊಬ್ಬರನ್ನೂ ಬಿಟ್ಟಿಲ್ಲ. ತರಹೇವಾರಿ ಆಮಿಷ ಒಡ್ಡಲಾಗುತ್ತಿದೆ ಎಂದು ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದರು.
ಸಮ್ಮಿಶ್ರ ಸರ್ಕಾರವನ್ನು ತೆಗೆಯಲು ಎಷ್ಟು ವಿದ್ಯಮಾನ ನಡೆಸು ವುದು? 8 ತಿಂಗಳಿನಿಂದ ನಡೆಯುತ್ತಲೇ ಇದೆ. ಸ್ವಲ್ಪ ವಾದರೂ ಆತ್ಮಗೌರವ ಇಲ್ಲವೇ? 8 ತಿಂಗಳಿನಿಂದ ಮುಖ್ಯಮಂತ್ರಿಗಳು ಇಷ್ಟೊಂದು ಗೋಳು ಹೊಯ್ದುಕೊಂಡರೆ ಶಾಪ ತಟ್ಟದೇ ಬಿಡುತ್ತದೆಯೇ? ನಿಮಗೆ ಶಾಪ ತಟ್ಟಲಿದೆ. ನಿಮ್ಮ ನಾಟಕಕ್ಕೆ ತೆರೆ ಎಳೆಯಿರಿ. ಕೆಟ್ಟ ಕೆಲಸ ವಿರೋಧಿಸಿ ಎಂದು ಶಿವಲಿಂಗೇಗೌಡ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

SCROLL FOR NEXT