ಶಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ ಪಾಟೀಲ್ 
ರಾಜಕೀಯ

ಪಾಟೀಲ್ ಒಬ್ಬ 'ಮಂಗ', ಆತನಿಗೆ ಏನೂ ಗೊತ್ತಿಲ್ಲ: ಶಾಮನೂರು ಶಿವಶಂಕರಪ್ಪ-ಎಂಬಿಪಿ ವಾಕ್ಸಮರ

ಕಾಂಗ್ರೆಸ್‌ನೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಮತ್ತೆ ಬಯಲಾಗುತ್ತಿದೆ. ಕಾಂಗ್ರೆಸ್ ನಾಯಕರಾದ ಎಂ. ಬಿ.ಪಾಟೀಲ್ ಹಾಗೂ ಶಾಮನೂರು ....

ದಾವಣಗೆರೆ: ಕಾಂಗ್ರೆಸ್‌ನೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಮತ್ತೆ ಬಯಲಾಗುತ್ತಿದೆ. ಕಾಂಗ್ರೆಸ್ ನಾಯಕರಾದ ಎಂ. ಬಿ.ಪಾಟೀಲ್ ಹಾಗೂ ಶಾಮನೂರು ಶಿವಶಂಕರಪ್ಪ ಪರಸ್ಪರ ಕಿತ್ತಾಡಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. 
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ  ಶಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ.ಪಾಟೀಲ್‌ ನಡುವೆ ತೀವ್ರ ತರದಲ್ಲಿ ನಿರಂತರ ವಾಕ್ಸಮರ ನಡೆಯುತ್ತಿದೆ. ನಾನು ಬೆಳೆದು ಬಂದಿರೋದು ಅವನಿಗೇನು ಗೊತ್ತು,  ಎಂ.ಬಿ ಪಾಟೀಲ್ ಒಬ್ಬ ಮಂಗ, ಅವನು ಇನ್ನು ಸಣ್ಣ ಹುಡುಗ. ಆತನಿಗೆ ಏನು ಗೊತ್ತಿಲ್ಲ, ನಾನು ಎಲ್ಲೂ ಎಂ.ಬಿ ಪಾಟೀಲ್ ಹೆಸರು ಬಳಸಿಲ್ಲ. ಅವನ ಬಗ್ಗೆ ಏನಾದ್ರು ಮಾತನಾಡುತ್ತೀನಾ? ಜನ ಮಾತನಾಡುವುದನ್ನು ನಾನು ಹೇಳಿದ್ದೇನೆ ಎಂದು ಶಾಮನೂರು ಶಿವಶಂಕರಪ್ಪ ಟೀಕಿಸಿದ್ದಾರೆ.
ಇನ್ನೂ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಂ. ಬಿ ಪಾಟೀಲ್, ಶಾಮನೂರು ಶಿವಶಂಕರಪ್ಪ ಅವರನ್ನು ಬಹಳ ವರ್ಷಗಳಿಂದ ನೋಡಿದ್ದೀನಿ. ಅವರ ಮನಸ್ಸು ಮತ್ತು ಹೃದಯ ಸಂಕುಚಿತವಾದುದ್ದು ಕೀಳು ಮಟ್ಟದ್ದು, ತಾವಾಯ್ತು ತಮ್ಮ ಕುಟುಂಬ ಸ್ವಾರ್ಥಿ, ವಯಸ್ಸಿನಲ್ಲಿ ಹಿರಿಯವರು ಹಣದಲ್ಲಿ ಹಿರಿಯರಿರಬಹುದು. ಅವರಿಗೆ ನನ್ನ ಬೆಳವಣಿಗೆ ನೋಡಿ ಅಸೂಯೆ ನನ್ನ ಮಗ ಮಂತ್ರಿ ಆಗಬೇಕು, ನಾವೇ ಶ್ರೇಷ್ಠ ಎಂಬ ಭ್ರಮೆಯಲ್ಲಿ ಬದುಕುತ್ತಿರುವ ವ್ಯಕ್ತಿ , ಬೇರೆಯವರ ಬಿ ಫಾರಂ ಹರಿದು ಹಾಕಿ ಅಧಿಕಾರಕ್ಕೆ ಬಂದವರು ಎಂದು ಶಾಮನೂರು ಶಿವಶಂಕರಪ್ಪ ವಿರುದ್ಧ  ಕಿಡಿ ಕಾರಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT