ರಾಜಕೀಯ

ಶಾಸಕರ ರಾಜೀನಾಮೆ, ರಾಜಕೀಯ ಕ್ಷಿಪ್ರ ಬೆಳವಣಿಗೆ ಬಗ್ಗೆ ಟ್ರಬಲ್ ಶೂಟರ್ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು

Srinivas Rao BV
ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬಿಜೆಪಿ ಬಲೆಗೆ ಬೀಳುವುದಿಲ್ಲ ಎಂಬ ನಂಬಿಕೆ ಇದ್ದು, ವಾಸ್ತವಂಶ ಏನು ಎಂಬುದು ಇನ್ನೂ ತಿಳಿಯಬೇಕಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ ಶೀವಕುಮಾರ್‌ ತಿಳಿಸಿದ್ದಾರೆ. 
ಮೈತ್ರಿ ಪಕ್ಷದ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ಕನಕಪುರದ ನಿವಾಸದಲ್ಲಿ ದಿಡೀರ್‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಸುಭದ್ರವಾಗಿ ಇರಲಿದೆ. ಯಾವುದೇ ಅತೃಪ್ತಿ ಇದ್ದರು ಸರಿ ಮಾಡುತ್ತೇವೆ. ಇಂದಿನ ನನ್ನ ಪ್ರವಾಸ ರದ್ದು ಮಾಡಿ ಬೆಂಗಳೂರಿಗೆ ಹೋಗುತ್ತಿದ್ದೇನೆ. ಸಂಜೆ ಬೆಂಗಳೂರಿನ ಎಲ್ಲ ಶಾಸಕರನ್ನು, ಕೆಲ ಕಾರ್ಪೋರೇಟರ್‌ಗಳನ್ನು ಪಕ್ಷದ ಪ್ರಮುಖರ ಜತೆ ಮಾತನಾಡಲಿದ್ದೇನೆ ಎಂದು ಹೇಳಿದರು. 
SCROLL FOR NEXT