ರಾಜಕೀಯ

ವಿಶ್ವಾಸಮತಕ್ಕೆ ಬಿಜೆಪಿಯೂ ಸಿದ್ಧವಿದೆ, ಆದರೆ ಜು.15 ರಂದೇ ಆಗಬೇಕು: ಯಡಿಯೂರಪ್ಪ

Srinivas Rao BV
ಬೆಂಗಳೂರು: ಸಿಎಂ ಕುಮಾರಸ್ವಾಮಿ ವಿಶ್ವಾಸಮತಯಾಚನೆಗೆ ಮುಂದಾಗಿದ್ದು ಜು.15 (ಸೋಮವಾರದಂದೇ) ಸದನದಲ್ಲಿ ಈ ಪ್ರಕ್ರಿಯೆ ನಡೆಸಬೇಕೆಂದು ವಿಪಕ್ಷ ನಾಯಕ ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಹುಮತವನ್ನು ಕಳೆದುಕೊಂಡಿದ್ದು ಸರ್ಕಾರದ ಪತನ ನಿಶ್ಚಿತವಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
16 ಶಾಸಕರು ರಾಜೀನಾಮೆ ನೀಡಿದ್ದು, ಸೋಮವಾರದಂದೇ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸಬೇಕು, ಮುಖ್ಯಮಂತ್ರಿಗಳು ಬದ್ಧತೆಯನ್ನು ಪೂರೈಸಬೇಕೆಂದು ಸೋಮವಾರ ನಡೆಯಲಿರುವ ವ್ಯವಹಾರ ಸಲಹಾ ಸಮಿತಿಯಲ್ಲಿ ಒತ್ತಾಯಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.
SCROLL FOR NEXT