9 ಜುಲೈ 2019 ರಂದು ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಸದಸ್ಯರೊಂದಿಗೆ ಬಿಜೆಪಿ ಕರ್ನಾಟಕ ಮುಖ್ಯಸ್ಥ ಬಿ.ಎಸ್.ಯಡಿಯೂರಪ್ಪ 
ರಾಜಕೀಯ

ರಾಜಕೀಯ ಬಿಕ್ಕಟ್ಟು: ಅಂತರ ಕಾಯ್ದುಕ್ಪೊಂಡ ಅಮಿತ್ ಶಾ, ಬಿಎಸ್ ವೈ ಹೆಗಲಿಗೆ ಪೂರ್ಣಹೊಣೆ

ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದಿನದಿನಕ್ಕೆ ಹೊಸ ತಿರುವು ತೆಗೆದುಕೊಳ್ಳುತ್ತಿದೆ. ಅದೇ ವೇಳೆ ಬಿಜೆಪಿ ಕೇಂದ್ರ ರಾಜಕೀಯ ನಾಯಕರು ಎಚ್ ಡಿ ಕುಮಾರಸ್ವಾಮಿ ಸರ್ಕಾರದ ಬಿಕ್ಕಟ್ಟಿನಿಂದ ತಮ್ಮದೇ ಅಂತರ ಕಾಯ್ದುಕೊಂಡಿದ್ದು ....

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದಿನದಿನಕ್ಕೆ ಹೊಸ ತಿರುವು ತೆಗೆದುಕೊಳ್ಳುತ್ತಿದೆ. ಅದೇ ವೇಳೆ ಬಿಜೆಪಿ ಕೇಂದ್ರ ರಾಜಕೀಯ ನಾಯಕರು  ಎಚ್ ಡಿ ಕುಮಾರಸ್ವಾಮಿ ಸರ್ಕಾರದ ಬಿಕ್ಕಟ್ಟಿನಿಂದ ತಮ್ಮದೇ ಅಂತರ ಕಾಯ್ದುಕೊಂಡಿದ್ದು ಯಾವುದೇ ತೀರ್ಮಾನ ತೆಗೆದುಕೊಳ್ಲಲು ರಾಜ್ಯ ಬಿಜೆಪಿ ನಾಯಕರಿಗೇ ಸ್ವತಂತ್ರ ಅವಕಾಶ ಕಲ್ಪೊಇಸಿದ್ದಾರೆ. ಇದೇ ವೇಳೆ ಮೈತ್ರಿ ಸರ್ಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಪರ ನಿಲುವು ತಾಳಿದೆ ಎನ್ನಲಾಗುತ್ತಿದ್ದು ಇದು ಕೇಂದ್ರ ನಾಯಕರಿಗೆ  ಸವಾಲಾಗಿ ಪರಿಣಮಿಸಿದೆ.
"ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಶ್ವಾಸಮತ ಸಾಬೀತಿಗೆ ವಿಳಂಬ ಮಾಡುವ ಮೂಲಕ ಕಲಾಪದ ಸಮಯವನ್ನು ನುಂಗಿಹಾಕುತ್ತಿದೆ. ಆದರೆ ಅಂತಿಮವಾಗಿ ಸರ್ಕಾರ ಕುಸಿಯುತ್ತದೆ ಇದನ್ನು ತಡೆಯಲು ಸಾಧ್ಯವಾಗುವುದಿಲ್ಲ"ಬಿಜೆಪಿಯ ಹಿರಿಯ ಕಾರ್ಯಕರ್ತರೊಬ್ಬರು ಹೇಳಿದರು.
ರಾಷ್ಟ್ರಮಟ್ಟದ ಬಿಜೆಪಿ ವರಿಷ್ಟರು ಕರ್ನಾಟಕದ ವ್ಯವಹಾರವನ್ನು  ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಬಿಟ್ಟಿದೆ. ಪಕ್ಷದ ಮುಖ್ಯಸ್ಥ ಅಮಿತ್ ಶಾ, ರಾಜ್ಯದ ಬೆಳವಣಿಗೆಗಳಿಂದ ದೂರವುಳಿದಿದ್ದಾರೆ.
ಅದಾಗ್ಯೂ ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ನಲ್ಲಿ ಇದೀಗ ರಾಷ್ಟ್ರೀಯ ನಾಯಕತ್ವದ ಗೊಂದಲವಿದ್ದು ಇದು ರಾಜ್ಯ ರಾಜಕೀಯದ ಮೇಲೆ ಪರಿಣಾಮ ಬೀರಲಿದೆ ಎಂದು ಬಿಜೆಪಿಯ ಹಿರಿಯ ನಾಯಕರು ಹೇಳುತ್ತಾರೆ. ಇದರ ಫಲವಾಗಿ, ಉತ್ತಮ ರಾಜಕೀಯ ಅವಕಾಶಗಳಿಗಾಗಿ ದೇಶಾದ್ಯಂತ ಹಲವಾರು ಕಾಂಗ್ರೆಸ್ ನಾಯಕರು ಬಿಜೆಪಿ ಕದ ತಟ್ಟುತ್ತಿದ್ದಾರೆ.
“ಲೋಕಸಭಾ ಚುನಾವಣಾ ತೀರ್ಪು ಕಾಂಗ್ರೆಸ್-ಜೆಡಿ (ಎಸ್) ಮೈತ್ರಿ ರಾಜಕೀಯವಾಗಿ ಹೊಂದುವುದಿಲ್ಲ ಎಂದು ನಿರೂಪಿಸಿದೆ. ಬಿಜೆಪಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದ ನಂತರ ಮೈತ್ರಿ ಪಾಳಯದಲ್ಲಿ ರಾಜಕೀಯ ಅಸ್ಥಿರತೆ ಸಹಜವಾಗಿತ್ತು.ಏಕೈಕ ಅತಿದೊಡ್ಡ ಪಕ್ಷವಾಗಿರುವುದರಿಂದ, ಮೈತ್ರಿ ಸರ್ಕಾರವು ವಿಶ್ವಾಸಮತ ಕಳೆದುಕೊಂಡ ನಂತರ ಬಿಜೆಪಿ ಅಧಿಕಾರಕ್ಕೇರುವ ಸ್ವಾಭಾವಿಕ ಹಕ್ಕುದಾರ ಪಕ್ಷವಾಗಲಿದೆ."
ಕರ್ನಾಟಕ ವಿಧಾನಸಭೆಯ ಅಧಿಕಾರಾವಧಿಯಲ್ಲಿ ನಾಲ್ಕು ವರ್ಷಗಳು ಉಳಿದಿರುವಾಗಲೇ" ಬಂಡಾಯ ಶಾಸಕರಲ್ಲಿ ಹೆಚ್ಚಿನವರು ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸಾರ್ಹ ಸಾಧ್ಯತೆ ಹೊಂದಿದ್ದಾರೆ.ಇದು ರಾಜ್ಯಕ್ಕೆ ರಾಜಕೀಯ ಸ್ಥಿರತೆಯನ್ನು ಒದಗಿಸುತ್ತದೆ" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT