ವಿಧಾನಸಭೆ (ಸಂಗ್ರಹ ಚಿತ್ರ) 
ರಾಜಕೀಯ

ಮುಗಿಯದ 'ವಿಶ್ವಾಸ': ಕೊನೆಯಾಗದ ರೆಸಾರ್ಟ್ ವಾಸ: ಶಾಸಕರಿಗೆ ನಿತ್ಯವೂ ವನವಾಸ!

ವಿಶ್ವಾಸ ಮತಯಾಚನೆ ವಿಳಂಭವಾಗುತ್ತಿರುವುದರಿಂದ ಕೇವಲ ನಾಗರಿಕರು ಮಾತ್ರ ತಾಳ್ಮೆ ಕಳೆದುಕೊಳ್ಳುತ್ತಿಲ್ಲ, ಶಾಸಕರು ಕೂಡ ತಮ್ಮ ಸಹನೆ ಕಳೆದು ಕೊಳ್ಳುತ್ತಿದ್ದಾರೆ. ...

ಬೆಂಗಳೂರು: ವಿಶ್ವಾಸ ಮತಯಾಚನೆ ವಿಳಂಭವಾಗುತ್ತಿರುವುದರಿಂದ ಕೇವಲ ನಾಗರಿಕರು ಮಾತ್ರ ತಾಳ್ಮೆ ಕಳೆದುಕೊಳ್ಳುತ್ತಿಲ್ಲ, ಶಾಸಕರು ಕೂಡ ತಮ್ಮ ಸಹನೆ ಕಳೆದು ಕೊಳ್ಳುತ್ತಿದ್ದಾರೆ. 
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಉಂಟಾಗಿರುವ ಬಿಕ್ಕಟ್ಚಟಿನಿಂದಾಗಿ ಶಾಸಕರು ತಮ್ಮ ಸ್ವಕ್ಷೇತ್ರಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ, ಹಲವು ಪ್ರದೇಶಗಳಲ್ಲಿ ಬರ ಪರಿಸ್ಥಿತಿ ಕೆಲ ಸ್ಥಗಳಲ್ಲಿ ಪ್ರವಾಹದಿಂದಾಗಿ ಜನರು ಕಂಗೆಟ್ಟು ಹೋಗಿದ್ದಾರೆ,
ಪರಿಸ್ಥಿತಿ ಹೀಗಿರುವಾಗ ಯಾವೊಬ್ಬ ಜನಪ್ರತಿನಿಧಿಗಳು ಜನರ ಕುಂದುಕೊರತೆಗಳನ್ನು ಆಲಿಸಲು ಬರುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಇದು, ಆಯ್ಕೆಯಾದ ಶಾಸಕರ ವಿರುದ್ಧ ಸೋತ ಅಭ್ಯರ್ಥಿಗಳಿಗೆ ಮುಖಂಡರಿಗೆ ವರವಾಗಿ ಪರಿಣಮಿಸಿದ್ದು, ಈ ಸಮದ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ರೆಸಾರ್ಟ್ ನಲ್ಲಿರುವ ಶಾಸಕರ ಮೊಬೈಲ್ ರೀಚ್ ಆಗುತ್ತಿಲ್ಲ, ಹೀಗಾಗಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಾಗುತ್ತಿಲ್ಲ,  ಹೀಗಾಗ ಶಾಸಕರು ತಮ್ಮ ಆಪ್ತ ಸಹಾಯಕರ ಕೈಯ್ಯಲ್ಲಿ ಮೊಬೈಲ್ ಕೊಟ್ಟಿದ್ದಾರೆ, ತುರ್ತು  ಇರುವ ಸಮಸ್ಯೆಗಳನ್ನು  ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ.
ಹೆಚ್ಚಿನ ಮಳೆಯಿಂದಾಗಿ ಕರಾವಳಿ ಭಾಗದಲ್ಲಿ ಪ್ರವಾಹ ಪರಿಸ್ಥಿತ ಎದುರಾಗಿದೆ, ಆದರೆ ಇತ್ತೀಚಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ನಾವು  ಅಸಹಾಯಕರಾಗಿದ್ದೇವೆ ಎಂದು ತಿಳಿಸಿದ್ದಾರೆ.
ನಾವು ಇಲ್ಲಿ ಹೇಗೆ ಇದ್ದೇವೆ ಎಂಬುದು ನಮಗೆ ಗೊತ್ತು, ನಮ್ಮ ನಾಯಕರುಗಳ ನಿರ್ದೇಶನದ ಮೇರೆಗೆ ನಾವು ಇಲ್ಲಿದ್ದೇವೆ, ಆದರೆ ಕೆಲವು ನಾವು ರೆಸಾರ್ಟ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ ಶಾಸಕರೊಬ್ಬರು ತಿಳಿಸಿದ್ದಾರೆ
ಮಂಗಳವಾರ ನಮ್ಮ ಊರಿನಲ್ಲಿ ಚಾಮುಂಡೇಶ್ವರಿ ಹಬ್ಬವಿದೆ, ಕಳೆದ 2 ವಾರಗಳಿಂದ ನಾನು ಕ್ಷೇತ್ರದಿಂದ ಹೊರಗಿದ್ದೇನೆ, ಒಂದು ವೇಳೆ ಹಬ್ಬಕ್ಕೆ ನಾನು ಹೋಗಲು ಸಾಧ್ಯವಾಗದಿದ್ದರೇ ನನ್ನ ಕ್ಷೇತ್ರದ ಮತದಾರರಿಗೆ ಏನು ಉತ್ತರ ನೀಡಲಿ ಎಂದು  ಬಿಜೆಪಿ ಶಾಸಕ ನಾಗೇಂದ್ರ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT