ಬೆಂಗಳೂರು: ಅತೃಪ್ತ ಶಾಸಕರು ತಮಗೆ ಕರೆ ಮಾಡಿದ್ದರು, ಆದರೆ ನಾನು ಆ ಕರೆ ಸ್ವೀಕರಿಸಲಿಲ್ಲ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಅವರಿಗೆ ನಾನು ಬೆಂಗಳೂರಿಗೆ ಬಂದು ಉತ್ತರ ನೀಡುತ್ತೇನೆ ಎಂದು ಮುಂಬೈನಲ್ಲಿರುವ ರೆಬೆಲ್ ಶಾಸಕ ಎಂಬಿಟಿ ನಾಗರಾಜ್ ಹೇಳಿದ್ದಾರೆ.
ಅತೃಪ್ತ ಶಾಸಕರು ತಮಗೆ ಕರೆ ಮಾಡಿದ್ದರು, ಆದರೆ ನಾನು ಆ ಕರೆ ಸ್ವೀಕರಿಸಲಿಲ್ಲ ಎಂಬ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಈ ಕುರಿತು ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಮುಂಬೈನಲ್ಲಿರುವ ರೆಬೆಲ್ ಶಾಸಕ ಎಂಬಿಟಿ ನಾಗರಾಜ್ ಅವರು, 'ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ನ ಹಿರಿಯ ಮುಖಂಡರಾದ ಸಿದ್ದರಾಮಯ್ಯ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮಾಧ್ಯಮದ ಮುಂದೆ ಸುಳ್ಳು ಸುಳ್ಳು ಮಾಹಿತಿಗಳನ್ನು ನೀಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
'ನಾವು ಯಾವುದೇ ಕಾರಣಕ್ಕೂ ಭಯ ಬೀಳುವುದಿಲ್ಲ. ನಮ್ಮನ್ನು ಅನರ್ಹ ಮಾಡಲಿ, ಏನೇ ಮಾಡಲಿ. ನಾವು ಯಾವುದಕ್ಕೂ ಬೆದರುವುದಿಲ್ಲ. ಇತ್ತೀಚೆಗೆ ಸಿದ್ದರಾಮಯ್ಯ ಅವರು ಸುಳ್ಳು ಸುಳ್ಳು ಮಾಹಿತಿಯನ್ನು ಮಾಧ್ಯಮದ ಮುಂದೆ ನೀಡುತ್ತಿದ್ದಾರೆ. ಅವರೊಬ್ಬ ಕಾಂಗ್ರೆಸ್ನ ಹಿರಿಯ ನಾಯಕರಾಗಿ ಹೀಗೆ ಹೇಳಿಕೆಗಳನ್ನು ನೀಡುವುದು ಅವರ ಘನತೆಗೆ ಸರಿಹೊಂದುವುದಿಲ್ಲ. ಅವರು ತಿಳಿದುಕೊಂಡಿರುತ್ತಾರೆ ಇದರಿಂದ ನನ್ನ ಘಟನೆ ಇನ್ನೂ ಹೆಚ್ಚಾಗುತ್ತದೆ ಎಂದು. ಆದರೆ, ಇದರಿಂದ ಅವರೇ ತಮ್ಮ ಘನತೆ ಕಳೆದುಕೊಳ್ಳುತ್ತಾರೆ. ನಾವು ರಾಜೀನಾಮೆ ನೀಡಿರುವ ಶಾಸಕರು ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಶೀಘ್ರದಲ್ಲೇ ಬೆಂಗಳೂರಿಗೆ ಬಂದು ಎಲ್ಲವನ್ನೂ ಸುದ್ದಿಗೋಷ್ಠಿಯಲ್ಲಿ ಬಹಿರಂಗ ಮಾಡುತ್ತೇವೆ' ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos