ಬೆಂಗಳೂರು: ರಾಜ್ಯ ಸಂಪುಟದಲ್ಲಿ ಖಾಲಿ ಇರುವ ಹುದ್ದೆಗಳನ್ನು ಸದ್ಯದಲ್ಲಿಯೇ ಭರ್ತಿ ಮಾಡಲಾಗುವುದೇ ಹೊರತು ಸಂಪುಟ ಪುನರ್ರಚನೆ ಇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.
ಸದ್ಯದಲ್ಲಿಯೇ ಮಾಜಿ ಸಚಿವ ರಾಮಲಿಂಗಾ ರೆಡ್ಡಿಯವರ ಜೊತೆ ಮಾತುಕತೆ ನಡೆಸಿ ಅವರ ಅಸಮಾಧಾನದ ಬಗ್ಗೆ ಕೇಳಲಾಗುವುದು, ಸಂಪುಟ ಪುನರ್ರಚನೆ ವೇಳೆ ತಮಗೆ ಸಚಿವ ಹುದ್ದೆ ನೀಡಲಾಗುವುದು ಎಂದು ಅವರಿಗೆ ಹೇಳಿದ್ದೆ. ಆದರೆ ನಾವು ಈಗ ಸಂಪುಟ ಪುನರ್ರಚನೆ ಮಾಡುವುದಿಲ್ಲ. ಪುನರ್ರಚನೆ ವೇಳೆ ರಾಮಲಿಂಗಾ ರೆಡ್ಡಿಯವರಿಗೆ ಸಚಿವ ಸ್ಥಾನ ದೊರಕಲಿದೆ ಎಂದರು.