ರಾಜಕೀಯ

ಪ್ರಧಾನಿಗೆ ಮಾರ್ಯಾದೆ ಕೊಡದ ಸಿದ್ದರಾಮಯ್ಯ ಅನಾಗರಿಕ: ಶ್ರೀನಿವಾಸ ಪ್ರಸಾದ್‌

Nagaraja AB

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿಗೆ ಮಾರ್ಯಾದೆ ಕೊಡದ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ  ಸಿದ್ದರಾಮಯ್ಯ ಅನಾಗರಿಕ, ಭಂಡ, ಹುಂಬ ಮನುಷ್ಯ ಎಂದು ಮಾಜಿ ಸಚಿವ ಶ್ರೀನಿವಾಸ್‌ ಪ್ರಸಾದ್‌ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ ಪ್ರಸಾದ್‌, ಪ್ರಧಾನಿ  ನರೇಂದ್ರ ಮೋದಿಗೆ ಕನಿಷ್ಠ ಮರ್ಯಾದೆ ಕೊಡುವ ಜ್ಞಾನ ಆತನಿಗಿಲ್ಲ. ಪ್ರಧಾನಮಂತ್ರಿ ಎಂದರೆ 120 ಕೋಟಿ ಜನರ ಪ್ರತಿನಿಧಿ. ಇದನ್ನು ಸಿದ್ದರಾಮಯ್ಯ ಮರೆತಿದ್ದಾರೆ ಎಂದು ಕಿಡಿಕಾರಿದರು.
ಪ್ರಧಾನಿ ಬಗ್ಗೆ ಹೇಗೆ ಮಾತನಾಡಬೇಕು ಎಂಬುದು ತಿಳಿಯದಷ್ಟು  ಸಿದ್ದರಾಮಯ್ಯ ಅನಾಗರಿಕ, ಸಂಸ್ಕೃತಿ ಇಲ್ಲದವ ಎಂದು ಏಕವಚನದಲ್ಲಿಯೇ ಟೀಕಿಸಿದರು.ಸಿದ್ದರಾಮಯ್ಯ ಒಬ್ಬ ಉಡಾಫೆ ಮನುಷ್ಯ. ಈತ ಈ ರೀತಿ ಮಾತನಾಡುವುದರಿಂದಲೇ ಚಾಮುಂಡೇಶ್ವರಿಯಲ್ಲಿ ಜನರು ಸೋಲಿಸಿದ್ದು ಎಂದರು.
ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರಕಾರ ಉಳಿಯುವುದಿಲ್ಲ. ಈಗಾಗಲೇ ಉಭಯ ಪಕ್ಷಗಳವರು ಆರೋಪ -ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಶ್ರೀನಿವಾಸಪ್ರಸಾದ್‌ ತಿಳಿಸಿದರು.
SCROLL FOR NEXT