ರಾಜಕೀಯ

ಮುಖಂಡರು,ಮತದಾರರಿಗೆ ಧಮ್ಕಿ: ಆರೋಪ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ- ಗೋಪಾಲಯ್ಯ ಸವಾಲು

Nagaraja AB

ಬೆಂಗಳೂರು:  ನಾನು ಯಾರಿಗೂ ತೊಂದರೆ ಮಾಡಿಲ್ಲ.ಯಾರಿಗೂ ಧಮ್ಕಿ ಹಾಕಿಲ್ಲ.ಯಾರಾದರೂ ತಮಗೆ ಧಮ್ಕಿ ಹಾಕಿದ್ದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮಹಾಲಕ್ಷ್ಮೀ ಲೇಔಟ್ ಅನರ್ಹ ಶಾಸಕ ಕೆ.ಗೋಪಾಲಯ್ಯ ಅವರು ಸವಾಲು ಹಾಕಿದ್ದಾರೆ.

ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತ ರನ್ನು ಮತ್ತು ಜನರ ಮೇಲೆ ತಾನು ಬೆದರಿಕೆ ಹಾಕುತ್ತಿದ್ದೇನೆಂಬ ಆರೋಪವನ್ನು ತಳ್ಳಿಹಾಕಿದರು.

ನಾನು ಯಾರಿಗಾದರೂ ಬೆದರಿಕೆ ಹಾಕಿದ್ದಕ್ಕೆ ಎಂಬುದರ ಒಂದು ಸಣ್ಣ ನಿದರ್ಶನ ತೋರಿಸಿದರೆ ರಾಜಕಾರಣದಿಂದ ನಿವೃತ್ತನಾಗುತ್ತೇನೆ.ಇದೆಲ್ಲಾ ಕುಮಾರಣ್ಣಗೆ ಗೊತ್ತು.ಚುನಾವಣೆ ಇರುವುದರಿಂದ ಈ ರೀತಿ ಮಾತನಾಡುತ್ತಿದ್ದಾರೆ.ಅವರದ್ದೇ ಸರ್ಕಾರ ಇದ್ದಾಗ ಕ್ಷೇತ್ರಕ್ಕೆ ಏನು ಅನುದಾನ ಕೊಟ್ಟಿದ್ಧಾರೆ ಎಂಬುದು ಜನರಿಗೆ ಗೊತ್ತು ಎಂದು ಗೋಪಾಲಯ್ಯ ಆರೋಪಿಸಿದರು

SCROLL FOR NEXT