ರಾಜಕೀಯ

ಶ್ರೀಗಳದ್ದು ಮಾತ್ರವಲ್ಲ ನನ್ನ ಫೋನ್ ಕೂಡ ಕದ್ದಾಲಿಕೆಯಾಗಿದೆ: ಶಾಮನೂರು ಶಿವಶಂಕರಪ್ಪ

Raghavendra Adiga

ದಾವಣಗೆರೆ: ರಂಭಾಪುರಿ ಶ್ರೀಗಳ ದೂರವಾಣಿ ಮಾತ್ರವಲ್ಲ ತಮ್ಮ ಫೋನ್ ಕೂಡ ಕದ್ದಾಲಿಕೆಯಾಗಿದೆ ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದ್ದಾರೆ.

ದಾವಣಗೆರೆಯಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಂಭಾಪುರಿ ಶ್ರೀಗಳ ಫೋನ್ ಕದ್ದಾಲಿಕೆಯಾಗಿದೆ ಎನ್ನುತ್ತಿದ್ದಾರೆ. ಅವರದ್ದು ಮಾತ್ರವಲ್ಲ ತಮ್ಮ ಫೋನ್ ಕೂಡ ಕದ್ದಾಲಿಕೆಯಾಗಿದೆ. ತಮ್ಮ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಕೂಡ ನಡೆದಿದೆ ಎಂದರು.

ಒಕ್ಕಲಿಗ ಸ್ವಾಮೀಜಿಗಳ ಫೋನ್ ಕದ್ದಾಲಿಕೆಯೂ ಆಗಿದೆ. ಅದೆಲ್ಲಾ ಈಗ ಯಾಕೆ ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಇಷ್ಟಕ್ಕೂ ಫೋನ್ ಕದ್ದಾಲಿಕೆ ಮಾಡುವುದರಿಂದ ಏನಾಗತ್ತೆ? ಏನನ್ನೂ ಮಾಡೋಕಾಗಲ್ಲ ಎಂದು ಅವರು ತಮ್ಮಲ್ಲಿನ ಅಸಮಾಧಾನ ಹೊರಹಾಕಿದರು.

SCROLL FOR NEXT