ಶ್ರೀರಾಮುಲು 
ರಾಜಕೀಯ

ಓವೈಸಿ ಏನು ದೊಡ್ಡ ಮನುಷ್ಯನಾ? : ಸಚಿವ ಬಿ. ಶ್ರೀರಾಮುಲು ಪ್ರಶ್ನೆ

ರಾಜ್ಯದಲ್ಲಿ ಬೀದರ್, ಹುಬ್ಬಳ್ಳಿ, ಬೆಂಗಳೂರಿನಲ್ಲಿ ಓವೈಸಿ ಸಮ್ಮು ಖದಲ್ಲಿ ಅಮೂಲ್ಯ ಲಿಯೋನ್​,ಇಂದು ವಿದ್ಯಾ ಪಾಕಿಸ್ತಾನ ಜಿಂದಾ ಬಾದ್ ಅಂದಿದ್ದಾರೆ, ಅವರೆಲ್ಲಾ ಭಾರತ್ ಮಾತಾ ಕೀ ಜೈ ಅನ್ನಬೇಕೇ ಹೊರತು, ಪಾಕಿಸ್ತಾನ್​ ಕೀ ಜೈ ಅನ್ನಬಾರದು ಎಂದು ಆರೋಗ್ಯ ಸಚಿವ ಬಿ.ಶ್ರೀರಾ ಮುಲು ಅವರು ಎಚ್ಚರಿಕೆ ನೀಡಿದ್ದಾರೆ.

ಬಳ್ಳಾರಿ: ರಾಜ್ಯದಲ್ಲಿ ಬೀದರ್, ಹುಬ್ಬಳ್ಳಿ, ಬೆಂಗಳೂರಿನಲ್ಲಿ ಓವೈಸಿ ಸಮ್ಮು ಖದಲ್ಲಿ ಅಮೂಲ್ಯ ಲಿಯೋನ್​,ಇಂದು ವಿದ್ಯಾ ಪಾಕಿಸ್ತಾನ ಜಿಂದಾ ಬಾದ್ ಅಂದಿದ್ದಾರೆ, ಅವರೆಲ್ಲಾ ಭಾರತ್ ಮಾತಾ ಕೀ ಜೈ ಅನ್ನಬೇಕೇ ಹೊರತು, ಪಾಕಿಸ್ತಾನ್​ ಕೀ ಜೈ ಅನ್ನಬಾರದು ಎಂದು ಆರೋಗ್ಯ ಸಚಿವ ಬಿ.ಶ್ರೀರಾ ಮುಲು ಅವರು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರಿಗೆ ಕಾಂಗ್ರೆಸ್ ನಾಯಕರು ಬೆಂಬಲಿಸುತ್ತಿದ್ದಾರೆ.  ಅಸಾದುದ್ದೀನ್ ಓವೈಸಿ ಎಂತಹ ದೊಡ್ಡ ಮನುಷ್ಯನೋ ನನಗೆ ಗೊತ್ತಿಲ್ಲ, ಪಾಕಿಸ್ತಾನಕ್ಕೆ ಜೈ ಅಂತ ಘೋಷಣೆ ಕೂಗಿಸಿದ ತಕ್ಷಣ ದೊಡ್ಡ ಮನುಷ್ಯರಾಗಿ ಬಿಡ್ತಾರಾ(?) ನಾವೇಲ್ಲಾ ಹಿಂದೂ ನಾಯಕರು ಕೈ ಕಟ್ಟಿಕೊಂಡು ಕುಳಿತಿಲ್ಲ,ನಾವೂ ಕೂಡ ಘೋಷಣೆ ಕೂಗಿ ಸುತ್ತೇವೆ ಎಂದು ಅಸಾದುದ್ದೀನ್ ಓವೈಸಿಗೆ ವಾರ್ನಿಂಗ್ ಕೊಟ್ಟರು.

ಇನ್ನು ಕಾಂಗ್ರೆಸ್​ ವೋಟ್​ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಈ ದೇಶದಲ್ಲಿರೋರು ಭಾರತ್ ಮಾತಾ ಕೀ ಜೈ ಅನ್ನಬೇಕು. ಸದನದಲ್ಲಿ ಇವರ ಪರ ಕಾಂಗ್ರೆಸ್​ನವರು ಮಾತನಾಡುತ್ತೀರಿ. ಎಸ್ಡಿಪಿಐ, ಪಿಎಫ್​ಐ ಸಂಘಟನೆಯವರನ್ನು ನಿಷೇಧ ಮಾಡಬೇಕೆಂದು ನಾವು ಪ್ರಯತ್ನ ಮಾಡುತ್ತಿದ್ದರೇ, ತನ್ವೀರ್ ಸೇಠ್ ಮೇಲೆ, ಹ್ಯಾರಿಸ್ ಮೇಲೆ ಹಲ್ಲೆ ಮಾಡಿದ್ದಾರೆ. ಇಂಥವರನ್ನು ನೀವು ಬೆಂಬಲಿಸುತ್ತೀರಿ, ಕಾಂಗ್ರೆಸ್ ಈಗ ಧೂಳಿಪಟ ಆಗಿದೆ ಎಂದು ಕಾಂಗ್ರೆಸ್​ ವಿರುದ್ಧ ಗುಡುಗಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT