ಶ್ರೀರಾಮುಲು 
ರಾಜಕೀಯ

ಓವೈಸಿ ಏನು ದೊಡ್ಡ ಮನುಷ್ಯನಾ? : ಸಚಿವ ಬಿ. ಶ್ರೀರಾಮುಲು ಪ್ರಶ್ನೆ

ರಾಜ್ಯದಲ್ಲಿ ಬೀದರ್, ಹುಬ್ಬಳ್ಳಿ, ಬೆಂಗಳೂರಿನಲ್ಲಿ ಓವೈಸಿ ಸಮ್ಮು ಖದಲ್ಲಿ ಅಮೂಲ್ಯ ಲಿಯೋನ್​,ಇಂದು ವಿದ್ಯಾ ಪಾಕಿಸ್ತಾನ ಜಿಂದಾ ಬಾದ್ ಅಂದಿದ್ದಾರೆ, ಅವರೆಲ್ಲಾ ಭಾರತ್ ಮಾತಾ ಕೀ ಜೈ ಅನ್ನಬೇಕೇ ಹೊರತು, ಪಾಕಿಸ್ತಾನ್​ ಕೀ ಜೈ ಅನ್ನಬಾರದು ಎಂದು ಆರೋಗ್ಯ ಸಚಿವ ಬಿ.ಶ್ರೀರಾ ಮುಲು ಅವರು ಎಚ್ಚರಿಕೆ ನೀಡಿದ್ದಾರೆ.

ಬಳ್ಳಾರಿ: ರಾಜ್ಯದಲ್ಲಿ ಬೀದರ್, ಹುಬ್ಬಳ್ಳಿ, ಬೆಂಗಳೂರಿನಲ್ಲಿ ಓವೈಸಿ ಸಮ್ಮು ಖದಲ್ಲಿ ಅಮೂಲ್ಯ ಲಿಯೋನ್​,ಇಂದು ವಿದ್ಯಾ ಪಾಕಿಸ್ತಾನ ಜಿಂದಾ ಬಾದ್ ಅಂದಿದ್ದಾರೆ, ಅವರೆಲ್ಲಾ ಭಾರತ್ ಮಾತಾ ಕೀ ಜೈ ಅನ್ನಬೇಕೇ ಹೊರತು, ಪಾಕಿಸ್ತಾನ್​ ಕೀ ಜೈ ಅನ್ನಬಾರದು ಎಂದು ಆರೋಗ್ಯ ಸಚಿವ ಬಿ.ಶ್ರೀರಾ ಮುಲು ಅವರು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರಿಗೆ ಕಾಂಗ್ರೆಸ್ ನಾಯಕರು ಬೆಂಬಲಿಸುತ್ತಿದ್ದಾರೆ.  ಅಸಾದುದ್ದೀನ್ ಓವೈಸಿ ಎಂತಹ ದೊಡ್ಡ ಮನುಷ್ಯನೋ ನನಗೆ ಗೊತ್ತಿಲ್ಲ, ಪಾಕಿಸ್ತಾನಕ್ಕೆ ಜೈ ಅಂತ ಘೋಷಣೆ ಕೂಗಿಸಿದ ತಕ್ಷಣ ದೊಡ್ಡ ಮನುಷ್ಯರಾಗಿ ಬಿಡ್ತಾರಾ(?) ನಾವೇಲ್ಲಾ ಹಿಂದೂ ನಾಯಕರು ಕೈ ಕಟ್ಟಿಕೊಂಡು ಕುಳಿತಿಲ್ಲ,ನಾವೂ ಕೂಡ ಘೋಷಣೆ ಕೂಗಿ ಸುತ್ತೇವೆ ಎಂದು ಅಸಾದುದ್ದೀನ್ ಓವೈಸಿಗೆ ವಾರ್ನಿಂಗ್ ಕೊಟ್ಟರು.

ಇನ್ನು ಕಾಂಗ್ರೆಸ್​ ವೋಟ್​ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಈ ದೇಶದಲ್ಲಿರೋರು ಭಾರತ್ ಮಾತಾ ಕೀ ಜೈ ಅನ್ನಬೇಕು. ಸದನದಲ್ಲಿ ಇವರ ಪರ ಕಾಂಗ್ರೆಸ್​ನವರು ಮಾತನಾಡುತ್ತೀರಿ. ಎಸ್ಡಿಪಿಐ, ಪಿಎಫ್​ಐ ಸಂಘಟನೆಯವರನ್ನು ನಿಷೇಧ ಮಾಡಬೇಕೆಂದು ನಾವು ಪ್ರಯತ್ನ ಮಾಡುತ್ತಿದ್ದರೇ, ತನ್ವೀರ್ ಸೇಠ್ ಮೇಲೆ, ಹ್ಯಾರಿಸ್ ಮೇಲೆ ಹಲ್ಲೆ ಮಾಡಿದ್ದಾರೆ. ಇಂಥವರನ್ನು ನೀವು ಬೆಂಬಲಿಸುತ್ತೀರಿ, ಕಾಂಗ್ರೆಸ್ ಈಗ ಧೂಳಿಪಟ ಆಗಿದೆ ಎಂದು ಕಾಂಗ್ರೆಸ್​ ವಿರುದ್ಧ ಗುಡುಗಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!