ರಾಜಕೀಯ

ಉಗ್ರಪ್ಪಗೆ ಕಾನೂನು ಘಟಕದ ಜವಾಬ್ದಾರಿ, ಮಾಧ್ಯಮ, ಸಂಪರ್ಕ ಘಟಕದಿಂದ ಕೊಕ್

Lingaraj Badiger

ಬೆಂಗಳೂರು: ಕಾಂಗ್ರೆಸ್ ವಿವಿಧ ಘಟಕಗಳ ವ್ಯವಹಾರದ ಉಸ್ತುವಾರಿಯನ್ನು ಹಿರಿಯ ಮುಖಂಡ ಕೆ.ಸಿ.ವೇಣುಗೋಪಾಲ್ ಅವರಿಗೆ ನೀಡಲಾಗಿದೆ. 

ಕಾನೂನು ಮಾನವ ಹಕ್ಕು ಮತ್ತು ಆರ್.ಟಿ.ಐ ಘಟಕ ಪೊನ್ನಣ್ಣ, ಮಾಧ್ಯಮ ಮತ್ತು ಸಂಪರ್ಕ ಘಟಕಕ್ಕೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರನ್ನು ಬದಲಾಯಿಸಿ ಹಿರಿಯ ಮುಖಂಡರಾದ ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್ ಅವರನ್ನು ನೇಮಿಸಲಾಗಿದೆ. ಉಗ್ರಪ್ಪಗೆ ಕಾನೂನು ಘಟಕದ ಜವಾಬ್ದಾರಿ ನೀಡಲಾಗಿದೆ.

ಮಾಹಿತಿ ತಂತ್ರಜ್ಞಾನ ಘಟಕಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ, ಇಡೀ ರಾಜ್ಯದ ಕಾಂಗ್ರೆಸ್ ಪಕ್ಷದ ಆಸ್ತಿ ಮತ್ತು ಉಪಕರಣದ ಜವಾಬ್ದಾರಿಯನ್ನು ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ನೀಡಲಾಗಿದ್ದು, ಬೆಂಗಳೂರು ವಿಭಾಗದ ಜವಾಬ್ದಾರಿಯನ್ನು ಶಾಸಕ ರಾಮಲಿಂಗಾರೆಡ್ಡಿ ಅವರಿಗೆ ವಹಿಸಲಾಗಿದೆ.

SCROLL FOR NEXT