ರಾಜಕೀಯ

'ನಮ್ಮ ವಂಶಕ್ಕೆ ರಾಜಕೀಯ ಶಕ್ತಿ ಕೊಟ್ಟ ರಾಮನಗರದಿಂದಲೇ ನಿಖಿಲ್ ರಾಜಕೀಯ ಪುನರಾರಂಭ'

Shilpa D

ರಾಮನಗರ: ಮಂಡ್ಯ ಲೋಕಸಭಾ ಚುನಾವಣೆ ಸೋಲಿನ ಕಹಿ ಬಳಿಕ ನಿಖಿಲ್​ ಕುಮಾರಸ್ವಾಮಿ ರಾಜಕೀಯ ಭವಿಷ್ಯ, ಈಗ ಮದುವೆ ಮೂಲಕ ರಾಮನಗರ ಕ್ಷೇತ್ರದಿಂದ ಪುನರ್​ ಆರಂಭವಾಗಲಿದೆ ಎಂದು ಜೆಡಿಎಸ್​ ವರಿಷ್ಠ ಎಚ್.ಡಿ.  ದೇವೇಗೌಡ ಭವಿಷ್ಯ ನುಡಿದಿದ್ದಾರೆ. 

ನಿಖಿಲ್​-ರೇವತಿ ಮದುವೆ ಸ್ಥಳ ವೀಕ್ಷಣೆ ಬಳಿಕ ಮಾತನಾಡಿದ ಅವರು,  ರಾಮನಗರ ನನಗೆ ಹಾಗೂ ಕುಮಾರಸ್ವಾಮಿಗೆ ಕರ್ಮಭೂಮಿ ಆಯಿತು. ಈಗ ಇದೇ ಭೂಮಿ ನಿಖಿಲ್​ಗೆ ರಾಜಕೀಯ ನೆಲೆ ನೀಡುವ ಭರವಸೆ ಇದೆ ಎಂದರು.

ನಿಖಿಲ್​ ರಾಜಕೀಯದಲ್ಲಿ ದೈವದ ಆಟ ನಡೆಯಿತು. ಅವನ ರಾಜಕೀಯ ಮಂಡ್ಯದಿಂದ ಆರಂಭಿಸಬೇಕು ಎಂಬ ಉದ್ದೇಶವಿರಲಿಲ್ಲ. ಆಕಸ್ಮಿಕವಾಗಿ ಆತ ಅಲ್ಲಿ ನಿಂತ. ಮತ್ತೆ ಈಗ ಆ ತಪ್ಪು ಮಾಡುವುದಿಲ್ಲ. ಮಂಡ್ಯದಲ್ಲಿ ನಾವು ಪಕ್ಷವನ್ನು ಮಾತ್ರ ಕಟ್ಟುತ್ತೇವೆ. ರಾಮನಗರದಿಂದಲೇ ಹೊಸದಾಗಿ ಆತ ವೈವಾಹಿಕ ಜೀವನದ ಜೊತೆ ರಾಜಕೀಯ ಭವಿಷ್ಯ ಉದಯವಾಗಲಿದೆ ಎಂದರು.

ರಾಮನಗರ ನನಗೆ, ಕುಮಾರಸ್ವಾಮಿಗೆ ರಾಜಕೀಯ ಶಕ್ತಿಕೊಟ್ಟ ಸ್ಥಳ. ಇಲ್ಲಿಂದಲೇ ನಾನು ಸಿಎಂ ಆಗಿ ಪ್ರಧಾನಿಯಾದೆ. ನಮ್ಮ ವಂಶಕ್ಕೆ ರಾಜಕೀಯದಲ್ಲಿ ಎರಡನೇ ಶಕ್ತಿ ಕೊಟ್ಟ ಸ್ಥಳವಿದು. ಇಲ್ಲಿಂದಲೇ ನಿಖಿಲ್​ ಕೂಡ ರಾಜಕೀಯವಾಗಿ ಬೆಳೆಯಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ.

SCROLL FOR NEXT