ರಾಜಕೀಯ

ಪರಿಷತ್ ಚುನಾವಣೆಗೆ ಪತಿ 'ರೆಬೆಲ್' ಸ್ಪರ್ಧೆ: ಶಿರಾ ಬಿಜೆಪಿ ಅಭ್ಯರ್ಥಿ ಪರ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪ್ರಚಾರ

Shilpa D

ತುಮಕೂರು: ಹಿರಿಯೂರು ಬಿಜೆಪಿ ಶಾಸಕಿ ಹಾಗೂ ಎ.ಕೃಷ್ಣಪ್ಪ ಪುತ್ರಿ ಪೂರ್ಣಿಮಾ ಶ್ರೀನಿವಾಸ್ ಪತಿ ಆಗ್ನೇಯ ಪದವೀಧರ ಕ್ಷೇತ್ರದಿಂದ ಪರಿಷತ್ ಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 

ಇದೇ ವೇಳೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಶಿರಾ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಪ್ರಚಾರದಲ್ಲಿ ತೊಡಗಿದ್ದಾರೆ. 

ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ ಗೌಡ ಅವರ ವಿರುದ್ಧ ಸ್ಪರ್ಧಿಸಿರುವ ಡಿ.ಟಿ ಶ್ರೀನಿವಾಸ್  ಕಳೆದ ಒಂದೂವರೆ ದಶಕದಿಂದ ನಾನು ಮತದಾರರ ಸಂಪರ್ಕದಲ್ಲಿದ್ದೇನೆ,  ಬಿಜೆಪಿ ಟೆಕೆಟ್ ನಾನು ಬಯಸಿದ್ದೆ, ಆದರೆ ಸಿಗಲಿಲ್ಲ, ಎಲ್ಲಾ ಅಹಿಂದಾ ಸುಮುದಾಯದ ಮತದಾರರು ನನ್ನ ಪರವಾಗಿದ್ದಾರೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಅಹಿಂದ ಸಮುದಾಯದ ಮತಗಳು ಮತ್ತು ಹಲವು ಹಿಂದುಳಿದ ವರ್ಗಗಳ ಮುಖಂಡರು ಪಕ್ಷದ ನಿಯಮಗಳನ್ನು ಉಲ್ಲಂಘಿಸಿ ಶ್ರೀನಿವಾಸ್ ಅವರಿಗೆ ಬೆಂಬಲ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT