ಮಂಡ್ಯ: ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಮಗಿರುವ ಗೌರವವನ್ನು ವ್ಯಕ್ತಪಡಿಸಿದ್ದಾರೆ. 2014ರಲ್ಲಿ ಬಿಜೆಪಿ 276 ಸೀಟುಗಳನ್ನು ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ತಾವು ಲೋಕಸಭೆಯಿಂದ ನಿವೃತ್ತಿ ಹೊಂದುವುದಾಗಿ ಸವಾಲು ಹಾಕಿದ್ದರು.
ಅದರಂತೆ ಬಿಜೆಪಿ ಗೆದ್ದಾಗ ದೇವೇಗೌಡರು ತಮ್ಮ ಮಾತಿಗೆ ಬದ್ಧರಾಗಿ ನಿವೃತ್ತಿ ಹೊಂಡುವ ಆಶಯ ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ನರೇಂದ್ರ ಮೋದಿ, ದೇವೇಗೌಡರನ್ನು ಖುದ್ದಾಗಿ ಆಮಂತ್ರಿಸಿದ್ದರು.
ಇದನ್ನೂ ಓದಿ: ಸೋಮವಾರ ನವದೆಹಲಿಯಲ್ಲಿ ನರೇಂದ್ರ ಮೋದಿ- ಪುತಿನ್ ಮಹತ್ವದ ಮಾತುಕತೆ: ಭದ್ರತೆ, ವ್ಯಾಪಾರ ಕ್ಷೇತ್ರದ ಯೋಜನೆಗಳಿಗೆ ಅಂಕಿತ
ಎಲ್ಲಾ ಸಂಭ್ರಮ ಮುಗಿದ ನಂತರ ತಾವು ಮೋದಿಯನ್ನು ಭೇಟಿಯಾಗಲು ಅಪಾಯಿಂಟ್ ಮೆಂಟ್ ಪಡೆದೆ. ಭೇಟಿ ದಿನದಂದು ನನ್ನನ್ನು ಬರಮಾಡಿಕೊಳ್ಳಲು ಮೋದಿಯವರೇ ಬಂದಿದ್ದರು ಎಂದು ದೇವೇಗೌಡರು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲಿರುವ ಉತ್ತರಾಖಂಡ್ ರಾಜ್ಯಕ್ಕೆ 18 ಸಾವಿರ ಕೋಟಿ ರೂ. ಮೊತ್ತದ ಯೋಜನೆ ಘೋಷಿಸಿದ ಪ್ರಧಾನಿ ಮೋದಿ
ಆ ಸಂದರ್ಭದಲ್ಲಿ ನಿವೃತ್ತಿ ಹೊಂದದಂತೆ ಮೋದಿ ತಮ್ಮ ಮನವೊಲಿಸಿದರು ಎಂದು ದೇವೇಗೌಡರು ಮೆಲುಕು ಹಾಕಿದ್ದಾರೆ.