ಡಿ ಕೆ ಶಿವಕುಮಾರ್, ಹೆಚ್ ವಿಶ್ವನಾಥ್(ಸಂಗ್ರಹ ಚಿತ್ರ) 
ರಾಜಕೀಯ

ಡಿ ಕೆ ಶಿವಕುಮಾರ್ ಸಂಘಟನಾ ಚತುರ, ಅವರ ಸೌಜನ್ಯವನ್ನು ಮೆಚ್ಚುತ್ತೇನೆ: ಹೆಚ್ ವಿಶ್ವನಾಥ್ 

ಡಿ ಕೆ ಶಿವಕುಮಾರ್ ಪಕ್ಷವನ್ನು ಯಾವ ರೀತಿ ಸಂಘಟನೆ ಮಾಡಬೇಕೆಂದು ಕರಗತ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸೇರಿಕೊಳ್ಳಲು ಇಚ್ಛಿಸುವವರು ಬನ್ನಿ ಎಂದು ಡಿ ಕೆ ಶಿವಕುಮಾರ್ ಕರೆದ ತಕ್ಷಣ ಯಾರೂ ಹೋಗುವುದಿಲ್ಲ. ಆದರೆ ಡಿ ಕೆ ಶಿವಕುಮಾರ್ ಅವರ ಸೌಜನ್ಯ ಬಹಳ ಮುಖ್ಯವಾದುದು ಎಂದು ಬಿಜೆಪಿ ನಾಯಕ ಹೆಚ್ ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು: ಡಿ ಕೆ ಶಿವಕುಮಾರ್ ಪಕ್ಷವನ್ನು ಯಾವ ರೀತಿ ಸಂಘಟನೆ ಮಾಡಬೇಕೆಂದು ಕರಗತ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸೇರಿಕೊಳ್ಳಲು ಇಚ್ಛಿಸುವವರು ಬನ್ನಿ ಎಂದು ಡಿ ಕೆ ಶಿವಕುಮಾರ್ ಕರೆದ ತಕ್ಷಣ ಯಾರೂ ಹೋಗುವುದಿಲ್ಲ. ಆದರೆ ಡಿ ಕೆ ಶಿವಕುಮಾರ್ ಅವರ ಸೌಜನ್ಯ ಬಹಳ ಮುಖ್ಯವಾದುದು ಎಂದು ಬಿಜೆಪಿ ನಾಯಕ ಹೆಚ್ ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನಾಗಿ ರಾಜಕೀಯ ಚಲನವಲನಗಳು ಮತ್ತು ಪರಿಸ್ಥಿತಿಗಳು ಎಲ್ಲದರ ಹಿನ್ನೆಲೆಯಲ್ಲಿ 17 ಜನ ಕಾಂಗ್ರೆಸ್ ನಿಂದ ಬಿಟ್ಟುಹೋಗಿದ್ದವರನ್ನು ಮಾತೃಸಂಸ್ಥೆಗೆ ವಾಪಸ್ ಬನ್ನಿ ಎಂದು ಕರೆಯುವುದು ಡಿ ಕೆ ಶಿವಕುಮಾರ್ ಅವರ ಸೌಜನ್ಯವನ್ನು ತೋರಿಸುತ್ತದೆ ಎಂದರು.

ಡಿ ಕೆ ಶಿವಕುಮಾರ್ ಅವರು ಪಕ್ಷದ ರಾಜ್ಯಾಧ್ಯಕ್ಷನಾಗಿ ಅವರ ಪಕ್ಷದ ಸಂಘಟನೆ, ಚಾತುರ್ಯತೆಗೆ ಮೆಚ್ಚುತ್ತೇನೆ, ಅವರು ಕರೆದು ತಕ್ಷಣ ದಿಢೀರ್ ಎಂದು ಯಾರೂ ಹೋಗುವುದಿಲ್ಲ, ಸಿದ್ದರಾಮಯ್ಯನವರು ಹೇಳಿದಂತೆ ಪ್ರಳಯವೇನು ಆಗುವುದಿಲ್ಲ, ನಾವ್ಯಾರು ಆತುರಾತುರವಾಗಿ ಹೋಗುತ್ತೇವೆ ಎಂಬ ಭಯ ಸಿದ್ದರಾಮಯ್ಯನವರಿಗೆ ಬೇಡ. ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಬಂದಿದ್ದಾಗ ನಾವ್ಯಾರಾದರು ಪ್ರಳಯವಾಗುತ್ತದೆ ಎಂದು ಹೇಳಿದ್ದೆವೇ ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ.

ಅಂದು ಜೆಡಿಎಸ್ ನಲ್ಲಿದ್ದುಕೊಂಡು ಉಪಮುಖ್ಯಮಂತ್ರಿ, ರಾಜ್ಯಾಧ್ಯಕ್ಷರಾಗಿದ್ದ ಸಿದ್ದರಾಮಯ್ಯನವರನ್ನು ಪಕ್ಷದಿಂದ ಹೊರಹಾಕಿದ್ದಾಗ ಇದೇ ಕಾಂಗ್ರೆಸ್ ನಾಯಕರು ಪ್ರೀತಿಯಿಂದ ಬರಮಾಡಿಕೊಂಡಿರಲಿಲ್ಲವೇ, ಸಿದ್ದರಾಮಯ್ಯನವರು ಬಂದರೆ ಪ್ರಳಯವಾಗುತ್ತದೆಯೇ ಎಂದು ಹೇಳಿದ್ದರೇ, ರಾಜಕೀಯದಲ್ಲಿ ಕಾಲಕಾಲಕ್ಕೆ ಸ್ಥಿತ್ಯಂತರವಾಗುತ್ತಿರುತ್ತದೆ, ರಾಜಕಾರಣಿಗಳು ಸೌಜನ್ಯಮೂರ್ತಿಗಳಾಗಬೇಕು, ಬರೀ ದ್ವೇಷ ಸಾಧಿಸಿಕೊಂಡು ಕುಳಿತರೆ ಏನೂ ಆಗುವುದಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT