ರಾಜಕೀಯ

ಉಪಚುನಾವಣೆ ಫಲಿತಾಂಶ: ಠೇವಣಿಯೂ ಸಿಗದೆ ಆಘಾತದಲ್ಲಿ ಜೆಡಿಎಸ್

Manjula VN

ಬೆಂಗಳೂರು: ಉಪಚುನಾವಣೆಗೆ ಪಕ್ಷದ ಪ್ರಮುಖ ನಾಯಕರಾದ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಸೇರಿ ಹಲವು ನಾಯಕರೇ ಪ್ರಚಾರ ನಡೆಸಿದ್ದರೂ, ಜೆಡಿಎಸ್'ಗೆ ಠೇವಣಿಯೂ ಸಿಗದೆ ಪಕ್ಷದ ನಾಯಕತ್ವಕ್ಕೆ ಭಾರೀ ಹಿನ್ನಡೆಯುಂಟಾಗಿದೆ.

2023ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ನಡುವಲ್ಲೇ ಉಪಚುನಾಣೆಯ ಭಾರೀ ಸೋಲಿಗೆ ಜೆಡಿಎಸ್ ಆಘಾತಗೊಂಡಿದೆ.

ಹಿಂದಿನ ಚುನಾವಣೆಯಲ್ಲಿ ಸಿಂದಗಿ ಕ್ಷೇತ್ರವನ್ನು ಗೆದ್ದುಕೊಂಡಿದ್ದ ಜೆಡಿಎಸ್‌ಗೆ ಆ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಕಾಂಗ್ರೆಸ್'ನ ಸಾಂಪ್ರದಾಯಿಕ ಮತಗಳೂ ಕೂಡ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ಬಾರಿ ಮನಗೂಳಿಯವರಿಗೆ ಕ್ಷೇತ್ರದಲ್ಲಿದ್ದ ವರ್ಚಸ್ಸು ಹಾಗೂ ಜನಪ್ರಿಯತೆಯ ಆಧಾರದ ಮೇಲೆ ಜೆಡಿಎಸ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿತ್ತು.

ಚುನಾವಣೆ ಸೋಲಿನ ಬಳಿಕ ಮಾತನಾಡಿದ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು, ಇಂತಹ ಫಲಿಲಾಂಶವನ್ನು ನಿರೀಕ್ಷಿಸಿರಲಿಲ್ಲ. ಪಕ್ಷವು ತನ್ನ ಕಾರ್ಯಕರ್ತರ ಬೇಡಿಕೆಯಂತೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಿತ್ತು ಎಂದು ಹೇಳಿದ್ದಾರೆ.

ಇನ್ನು ಚುನಾವಣಾ ಫಲಿತಾಂಶ ರಾಜಕೀಯ ತಜ್ಞರ ನಿರೀಕ್ಷೆಗಳು ಕೂಡ ಉಲ್ಟಾ ಆಗುವಂತ ಮಾಡಿದೆ. ಎರಡೂ ಕ್ಷೇತ್ರಗಳ ಚುನಾವಣೆಯಲ್ಲಿ ಜೆಡಿಎಸ್'ಗೆ ಸಾಂಪ್ರದಾಯಿಕ ಮತಗಳು ವರದಾನವಾಗಲಿದ್ದು, ಇದ ಬಿಜೆಪಿಗೆ ಸಹಾಯಕವಾಗಲಿದೆ ಎಂದು ಹೇಳಿದ್ದರು. ಆದರೆ, ಫಲಿತಾಂಶ ಈ ನಿರೀಕ್ಷೆಗಳು ತಲೆಕೆಳಗಾಗುವಂತೆ ಮಾಡಿದೆ. ಪ್ರಸ್ತುತದ ಫಲಿತಾಂಶ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭಾ ಚುನಾಣೆಯಲ್ಲಿ ಜೆಡಿಎಸ್ ಹಾನಗಲ್ ಹಾಗೂ ಸಿಂದಗಿಯಲ್ಲಿ ಯಾವುದೇ ಅಭ್ಯರ್ಥಿಯನ್ನೂ ನಿಲ್ಲಿಸಿದಿರುವ ನಿರ್ಧಾರಕ್ಕೆ ಬರಬಹುದು ಎಂದು ಸ್ಥಳೀಯ ನಾಯಕರು ಹೇಳಿದ್ದಾರೆ.

SCROLL FOR NEXT