ರಾಜಕೀಯ

ಬೆಂಗಳೂರು: ಕುಮಾರಸ್ವಾಮಿ ಸಂಪಾದಕತ್ವದ 'ಜನತಾ ಪತ್ರಿಕೆ' ಲೋಕಾರ್ಪಣೆ

Nagaraja AB

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಸಂಪಾದಕತ್ವದ 'ಜನತಾ ಪತ್ರಿಕೆ' ಲೋಕಾರ್ಪಣೆಯಾಗಿದೆ. ನಗರದ ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಪತ್ರಕರ್ತ  ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ರಾಮಯ್ಯ ಇಂದು  'ಜನತಾ ಪತ್ರಿಕೆ ' ಯನ್ನು ಲೋಕಾರ್ಪಣೆ ಮಾಡಿದರು.

ಜೆಡಿಎಸ್  ಪರೋಚ್ಚ ನಾಯಕ,  ಮಾಜಿ ಪ್ರಧಾನಿ   ಹೆಚ್.ಡಿ.ದೇವೇಗೌಡ , ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  

ಪಕ್ಷದ ಕಾರ್ಯಕ್ರಮಗಳು, ದೇವೇಗೌಡ ಮತ್ತು ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಕಾಲಘಟ್ಟದಲ್ಲಿ ಜಾರಿಗೆ ತಂದ ಜನಪರ ಯೋಜನೆಗಳು, ಪ್ರಸಕ್ತ ರಾಜಕೀಯ ವಿದ್ಯಮಾನಗಳು, ನಾಡು ನುಡಿಯ ಬಗ್ಗೆ ಬೆಳಕು ಚೆಲ್ಲುವ ಲೇಖನಗಳು ಪತ್ರಿಕೆಯಲ್ಲಿ ಮೂಡಿ ಬರಲಿವೆ. 

SCROLL FOR NEXT