ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ(ಸಂಗ್ರಹ ಚಿತ್ರ) 
ರಾಜಕೀಯ

ಸ್ಕೌಂಡ್ರಲ್ ಯಾರು? ತಮಗಿರುವ ವಿದ್ವತ್ತಿನಿಂದ ಇದಕ್ಕೆ ಉತ್ತರಿಸಬೇಕು: ಸ್ಪೀಕರ್ ಕಾಗೇರಿಗೆ ರಮೇಶ್ ಕುಮಾರ್ ಪ್ರಶ್ನೆ  

ವಿಧಾನಸಭಾ ಕಲಾಪದಲ್ಲಿ ಗಂಭೀರ ಚರ್ಚೆ, ವಿಷಯ ಮಂಡನೆಗಳ ಹೊರತಾಗಿಯೂ ಆಗಾಗ್ಗೆ ಹಲವಾರು ರಸವತ್ತಾದ ಮಾತುಕತೆಗಳೂ ನಡೆಯುತ್ತವೆ.

ಬೆಂಗಳೂರು: ವಿಧಾನಸಭಾ ಕಲಾಪದಲ್ಲಿ ಗಂಭೀರ ಚರ್ಚೆ, ವಿಷಯ ಮಂಡನೆಗಳ ಹೊರತಾಗಿಯೂ ಆಗಾಗ್ಗೆ ಹಲವಾರು ರಸವತ್ತಾದ ಮಾತುಕತೆಗಳೂ ನಡೆಯುತ್ತವೆ.

ಅಂತೆಯೇ ಇಂದಿನ ಕಲಾಪದಲ್ಲಿಯೂ ಮಾಜಿ ಸ್ವೀಕರ್, ಕಾಂಗ್ರೆಸ್ ಶಾಸಕ “ಸ್ಕೌಂಡ್ರಲ್ಸ್” ಪ್ರಸಂಗವೊಂದನ್ನು ಹಂಚಿಕೊಂಡು ಸಭೆ ನಕ್ಕು ಹಗುರಾಗುವಂತೆ ಮಾಡಿದರು. ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಖ್ಯಾತ ವಕೀಲ ರಾಮ್ ಜೇಠ್ಮಲಾನಿಯವರನ್ನು ಕರೆಸಲಾಗಿತ್ತು. ಆ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿದ್ದವರು ರಮೇಶ್ ಕುಮಾರ್.

“ನಾನು ಅಧ್ಯಕ್ಷನಾಗಿದ್ದ ಕಾರಣ ನನ್ನ ಭಾಷಣ ಕಡೆಯಲ್ಲಿತ್ತು. ಈ ನಡುವೆ ರಾಮ್ ಜೇಠ್ಮಲಾನಿ ತಮ್ಮ ಮುಖ್ಯ ಭಾಷಣದಲ್ಲಿ “ಆಲ್ ದಿಸ್ ಸ್ಕೌಂಡ್ರಲ್ಸ್ ಆಫ್ ಕಾಂಗ್ರೆಸ್ ಪಾರ್ಟಿ” ಎಂದು ಮಾತು ಶುರು ಮಾಡಿ ಪಕ್ಷವನ್ನು ಸಾಕಷ್ಟು ಬಣ್ಣಿಸಿದರು. “ನನಗೆ ಲಾ ಪಾ ಏನೂ ಗೊತ್ತಿಲ್ಲ. ಹೀಗಾಗಿ ಎಲ್ಲ ಪಕ್ಷಗಳಲ್ಲೂ ಸ್ಕೌಂಡ್ರಲ್ಸ್ ಇರುತ್ತಾರೆ. ಈ ಎಲ್ಲಾ ಸ್ಕೌಂಡ್ರಲ್ಸ್ ಗಳಿಗೆ ಅಡ್ವೊಕೇಟ್ ಆಗಿ ತಾವು ಲಭ್ಯವಿದ್ದೀರಿ ಎಂದೆ” ಎಂದರು. ಈ ಮಾತಿಗೆ ಸದಸ್ಯರೆಲ್ಲರ ಮೊಗದಲ್ಲಿ ನಗೆ ಚಿಮ್ಮಿತ್ತು.

ಬಳಿಕ, “ಸ್ಕೌಂಡ್ರಲ್ ಯಾರು, ಲುಮಿನರಿ ಯಾರು ಎಂಬುದು ನನಗಿನ್ನೂ ಸ್ಪಷ್ಟವಾಗಿಲ್ಲ. ತಮಗಿರುವ ವಿದ್ವತ್ತಿನಿಂದ ಇದಕ್ಕೆ ಉತ್ತರಿಸಬೇಕು” ಎಂದು ಸ್ಪೀಕರ್ ಕಾಗೇರಿಯವರನ್ನು ಕೇಳಿದರು. ಆಗಲಿ. ಸದನದ ಹೊರತಾಗಿ ಹೊರಗೆ ನಾವಿಬ್ಬರೂ ಸಿಕ್ಕಾಗ ಈ ಬಗ್ಗೆ ಚರ್ಚಿಸೋಣವಂತೆ ಎಂದು ಕಾಗೇರಿ ಹೇಳಿದಾಗ ರಮೇಶ್ ಕುಮಾರ್ ಸುಮ್ಮನಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT