ವಿಶ್ವೇಶ್ವರ ಹೆಗಡೆ ಕಾಗೇರಿ 
ರಾಜಕೀಯ

ಸದನದ ಸಮಯ ಹಾಳು ಮಾಡುವ ಸದಸ್ಯರ ಪಟ್ಟಿ ಸಿದ್ದ: ಶೂನ್ಯವೇಳೆಯಲ್ಲಿ ಸ್ಪೀಕರ್ ಕಾಗೇರಿ ಗರಂ!

ವಿಧಾನಸಭೆಯ ಕಾರ್ಯಕಲಾಪಗಳಿಗೆ ಪದೇ, ಪದೇ ಅಡ್ಡಿಪಡಿಸುವ, ಸದನವನ್ನು ಹೀಗೆ ತಮ್ಮ ಮೂಗಿನ ನೇರಕ್ಕೆ ನಡೆಸಬೇಕು ಎಂದು ನಿಯಂತ್ರಣ ಮಾಡಿ, ಅನುಚಿತವಾಗಿ ವರ್ತಿಸಿ ಸದನದ ಸಮಯ ಹಾಳು ಮಾಡುವ ಸದಸ್ಯರ ಪಟ್ಟಿ ಸಿದ್ದವಾಗಿದೆ.

ಬೆಂಗಳೂರು: ವಿಧಾನಸಭೆಯ ಕಾರ್ಯಕಲಾಪಗಳಿಗೆ ಪದೇ, ಪದೇ ಅಡ್ಡಿಪಡಿಸುವ, ಸದನವನ್ನು ಹೀಗೆ ತಮ್ಮ ಮೂಗಿನ ನೇರಕ್ಕೆ ನಡೆಸಬೇಕು ಎಂದು ನಿಯಂತ್ರಣ ಮಾಡಿ, ಅನುಚಿತವಾಗಿ ವರ್ತಿಸಿ ಸದನದ ಸಮಯ ಹಾಳು ಮಾಡುವ ಸದಸ್ಯರ ಪಟ್ಟಿ ಸಿದ್ದವಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗುರುವಾರ ಎಚ್ಚರಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಶೂನ್ಯವೇಳೆಯಲ್ಲಿ ಜೆಡಿಎಸ್ ಸದಸ್ಯರಾದ ಶಿವಲಿಂಗೇಗೌಡ, ಅನ್ನದಾನಿ, ಬಂಡೆಪ್ಪ ಕಾಶಂಪೂರ್ ಮತ್ತಿತರರು ಎದ್ದು ವಿಷಯ ಪ್ರಸ್ತಾಪಿಸಲು ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದಾಗ ಸ್ಪೀಕರ್ ಕಾಗೇರಿ ಗರಂ ಆದರು.

ಸದನದ ಕಾರ್ಯಕಲಾಪಗಳನ್ನು ನಡೆಸುವ ಗುರುತರ ಹೊಣೆಗಾರಿಕೆ ನನ್ನ ಮೇಲಿದೆ. ಆದರೆ, ಸದನದ ನಾಯಕರ ಸಹಕಾರ ಇಲ್ಲದೇ ನಾನೊಬ್ಬನೇ ಏಕಾಂಗಿಯಾಗಿ ನಿರ್ವಹಣೆ ಮಾಡುವುದು ಸಾಧ್ಯವಿಲ್ಲ. ಬಹಳ ಭಾರವಾದ ಮನಸ್ಸಿನಿಂದ ಅನುಚಿತ ಸದಸ್ಯರಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಇದು ನನಗೆ ಸಂತೋಷ, ನೆಮ್ಮದಿ, ಸಮಾಧಾನ ಕೊಡುವ ವಿಚಾರ ಅಲ್ಲ. ಆದರೆ ಸದಸ್ಯರು ಮೀತಿ ವರ್ತಿಸಿದರೆ ನಾನು ಮೌನಕ್ಕೆ ಶರಣಾಗಲಾರೆ. ಕಠಿಣ ಕ್ರಮ ಜರುಗಿಸುವುದಾಗಿ ಸ್ಪೀಕರ್ ನೇರ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

SCROLL FOR NEXT