ರಾಜಕೀಯ

ಕಾಂಗ್ರೆಸ್ ಗುಲಾಮಗಿರಿ ಪಕ್ಷ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Nagaraja AB

ಹುಬ್ಬಳ್ಳಿ: ಕಾಂಗ್ರೆಸ್ ಎನ್ನುವುದೊಂದು ಗುಲಾಮಗಿರಿಯ ಪಕ್ಷ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

 ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಸಿದ್ದರಾಮಯ್ಯ ಅವರ ನಡವಳಿಕೆ  ಹತಾಶ ಭಾವನೆಯನ್ನು ವ್ಯಕ್ತಪಡಿಸುತ್ತಿದೆ. ಮಾಜಿ ಮುಖ್ಯ ಮಂತ್ರಿಗಳಾಗಿದ್ದ ಸಿದ್ದರಾಮಯ್ಯಗೆ ಅವರಾಡುವ ಮಾತುಗಳು ಶೋಭೆ ತರುತ್ತಿಲ್ಲ ಎಂದರು.

ನಮ್ಮ ದೇಶದಲ್ಲಿ ಮೆಕಾಲೆ ಶಿಕ್ಷಣ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಮಕ್ಕಳು ಏರುವುದನ್ನು ತಡೆಯಲಾಗಿದೆ.ಹೀಗಾಗಿ 21ನೇ ಶತಮಾನಕ್ಕೆ ತಕ್ಕಂತೆ ‌ನರೇಂದ್ರ ಮೋದಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲೆಂದು ರಾಷ್ಟ್ರೀಯ ಶಿಕ್ಷಣ ನೀತಿ ತರುತ್ತಿದ್ದಾರೆ. ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿ ಬಿಡಲಿ ಎಂದರು.

ಜನಸಾಮಾನ್ಯರಿಗೆ ಮಕ್ಕಳಿಗೆ ತೊಂದರೆಯಾಗುವಂತಹ ಕೆಲಸವನ್ನು ಹೋರಾಟಗಾರರು ಮಾಡಬಾರದು.ಈ ರೀತಿ ಭಾರತ್ ಬಂದ್ ಮಾಡದೇ ವೈಚಾರಿಕ ಭಿನ್ನಾಭಿಪ್ರಾಯವನ್ನು ಬೇರೆ ರೀತಿ ವ್ಯಕ್ತಪಡಿಸಲಿ ಎಂದು ಇದೇ ವೇಳೆ ಬೊಮ್ಮಾಯಿ ಮನವಿ ಮಾಡಿದರು.

SCROLL FOR NEXT