ಸಿಎಂ ಬಸವರಾಜ ಬೊಮ್ಮಾಯಿ 
ರಾಜಕೀಯ

ಗತಿಗೆಟ್ಟ ಸರ್ಕಾರ ನಡೆಸಲು ಸಿಎಂ ಬೊಮ್ಮಾಯಿಗೆ ನಾಚಿಕೆ ಎನಿಸುವುದಿಲ್ಲವೇ? ಕಾಂಗ್ರೆಸ್ ಕಟು ಟೀಕೆ

ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗುಂಡಿಗೆ ವಾಹನ ಸವಾರರು ಬಿದ್ದು ನಡೆಯುತ್ತಿರುವ ಅವಾಂತರಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ದ ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗುಂಡಿಗೆ ವಾಹನ ಸವಾರರು ಬಿದ್ದು ನಡೆಯುತ್ತಿರುವ ಅವಾಂತರಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ದ ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಈ ಕುರಿತ ಕನ್ನಡ ಪ್ರಭ ಆನ್ ಲೈನ್ ಪತ್ರಿಕೆಯ ವರದಿಯೊಂದನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ರಸ್ತೆ ಗುಂಡಿಗಳಿಗೆ ದಿನಕ್ಕೊಂದು ಹೆಣ ಬೀಳ್ತಿವೆ. ಜನರ ಸಾವುಗಳನ್ನು ಶೇ. 40 ಕಮಿಷನ್ ಸರ್ಕಾರ ಮರದ ಎಲೆಗಳು ಉದುರಿದಂತೆ ಲಘುವಾಗಿ ಪರಿಗಣಿಸಿದೆ ಎಂದು ಆರೋಪಿಸಿದೆ.

ರಸ್ತೆ ಗುಂಡಿಗಳಿಗೆ ದಿನಕ್ಕೊಂದು ಹೆಣ ಬೀಳ್ತಿವೆ, ಜನರ ಸಾವುಗಳನ್ನು #40PercentSarkara ಮರದ ಎಲೆಗಳು ಉದುರಿದಂತೆ ಲಘುವಾಗಿ ಪರಿಗಣಿಸಿದೆ.

ಹೈಕೋರ್ಟ್ ಹಲವು ಬಾರಿ ಚಾಟಿ ಬೀಸಿದರೂ ರಸ್ತೆ ಗುಂಡಿಗಳನ್ನ ಮುಚ್ಚದ ಸರ್ಕಾರ ಬಂಡತನದ ಪರಮಾವಧಿಗೆ ತಲುಪಿದೆ.@BSBommai ಅವರೇ, ಇಂತಹ ಗತಿಗೆಟ್ಟ ಸರ್ಕಾರ ನಡೆಸಲು ನಾಚಿಕೆ ಎನಿಸುವುದಿಲ್ಲವೇ?#SayCM pic.twitter.com/95kGj2W9x5

ಹೈಕೋರ್ಟ್ ಹಲವು ಬಾರಿ ಚಾಟಿ ಬೀಸಿದರೂ ರಸ್ತೆ ಗುಂಡಿಗಳನ್ನು ಮುಚ್ಚದ ಸರ್ಕಾರ ಬಂಡತನದ ಪರಮಾವಧಿಗೆ ತಲುಪಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಇಂತಹ ಗತಿಗೆಟ್ಟ ಸರ್ಕಾರ ನಡೆಸಲು ನಾಚಿಕೆ ಎನಿಸುವುದಿಲ್ಲವೇ? ಎಂದು ಪ್ರಶ್ನಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT