ರಾಜಕೀಯ

'ಅರಸು ಕಾಲದಲ್ಲಿಯೂ ನಾವು ವಿರೋಧಿ ಬಣದಲ್ಲಿದ್ದೆವು; ಹಿಂದುಳಿದ ವರ್ಗದ ಹಿತವೆಂದರೆ ಒಂದು ಪ್ರಬಲ ಜಾತಿಗೆ ಅಧಿಕಾರ ಕೊಡುವುದಲ್ಲ'

Shilpa D

ಬೆಂಗಳೂರು: ಸಿಎಂ ಸಿದ್ದರಾಮಯ್ಯ  ವಿರುದ್ಧ ಪರೋಕ್ಷವಾಗಿ ಮತ್ತೆ ಅಸಮಾಧಾನ ಹೊರಹಾಕಿರುವ ಕಾಂಗ್ರೆಸ್‌ ನಾಯಕ ಬಿ.ಕೆ.ಹರಿಪ್ರಸಾದ್‌ ಹಿಂದುಳಿದ ವರ್ಗದ ಹಿತವೆಂದರೆ ಅಲ್ಲಿರುವ ಒಂದು ಪ್ರಬಲ ಜಾತಿಗೆ ಅಧಿಕಾರ ಕೊಡುವುದಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಅರಸು ಜನ್ಮ ದಿನಾಚರಣೆ ಪ್ರಯುಕ್ತ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೀಗೆ ಹೇಳಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತೊಂದು ಸಭೆಗೆ ತೆರಳಬೇಕಿದ್ದರಿಂದ ವೇದಿಕೆಯಿಂದ ನಿರ್ಗಮಿಸಿದ್ದರು.

ಹಿಂದುಳಿದ ವರ್ಗಗಳಲ್ಲಿ ಹಲವು ಸಣ್ಣ ಸಣ್ಣ ಜಾತಿಗಳಿವೆ. ಇಂಥ ಸಮಾಜಗಳನ್ನು ಗುರುತಿಸಿ ಅಧಿಕಾರ ನೀಡಬೇಕು. ಅರಸು ಕಾಲದಲ್ಲಿ ನಾವು ವಿರೋಧಿ ಬಣದಲ್ಲಿದ್ದೆವು. ಹಾಗಿದ್ದರೂ ನಮ್ಮನ್ನು ಕರೆದು ನೀವು ಕಪಿಗಳು. ನಿಮ್ಮ ಕಪಿಚೇಷ್ಟೆಯಿಂದ ಪ್ರತಿಪಕ್ಷಗಳಿಗೆ ಅನುಕೂಲವಾಗುತ್ತದೆ ಎನ್ನುತ್ತಿದ್ದರು. ಎಲ್ಲರನ್ನೂ ಜತೆಗೆ ಕರೆದೊಯ್ಯುತ್ತಿದ್ದರು. ಈಗ ಒಟ್ಟಿಗೆ ಕರೆದೊಯ್ಯುವುದಿರಲಿ. ವಿರೋಧಿಸುವವರನ್ನು ಶತ್ರುಗಳಂತೆ ನೋಡುತ್ತಾರೆ ಎಂದು ಆಕ್ಷೇಪಿಸಿದರು.

ದೇವರಾಜ ಅರಸು ಅಧಿಕಾರದಲ್ಲಿದ್ದಾಗ ಕಾರ್ಯಕರ್ತರ ಮದುವೆಗೆ ಹೋಗಲಾಗದಿದ್ದರೂ ತಮ್ಮ ರಾಜಕೀಯ ಸಲಹೆಗಾರರ ಬಳಿ 10-15 ಸಾವಿರ ರೂ. ಕೊಟ್ಟು ಕಳಿಸುತ್ತಿದ್ದರು. ಕಾರ್ಯಕರ್ತರ ರಕ್ಷಣೆಯಾಗಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಸಂಕಷ್ಟ ಬರಲಿದೆ ಎಂದು ಎಚ್ಚರಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೂ ಚುರುಕು ಮುಟ್ಟಿಸಿದ ಹರಿಪ್ರಸಾದ್‌, ''ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸುವುದಾಗಿ ನಾವು ಮಾತು ಕೊಟ್ಟಿದ್ದೆವು. ಅಧಿಕಾರಕ್ಕೆ ಬಂದ ಮೇಲೆ ನಮ್ಮ ಅಧ್ಯಕ್ಷರು ಇದನ್ನು ಮರೆತಂತಿದೆ. ವಿವಿಗಳಲ್ಲಿ ಚುನಾವಣೆಯಾದರೆ ಲೀಡರ್‌ಗಳು ಜನ್ಮ ತಳೆಯುತ್ತಾರೆ. ಇಲ್ಲದಿದ್ದರೆ ಲೀಡರ್‌ಗಳ ಹಿಂದೆ ಓಡಾಡುವವರೇ ನಾಯಕರಾಗುತ್ತಾರೆ.

ಅಶೋಕ್‌ ಪಟ್ಟಣ್‌ ಗ್ರಾಜುಯೇಟ್‌ ಅಲ್ಲ. ಆದರೂ ಲೀಡರ್‌ ಅರಸು ಕಾಲದಲ್ಲಿ 5 ಸಾವಿರ ಜನಸಂಖ್ಯೆಯಿರುವ ಸಮಾಜದವರನ್ನೂ ಗುರುತಿಸಿ ಬೋರ್ಡ್‌ ಮೆಂಬರ್‌ ಮಾಡುತ್ತಿದ್ದರು ಎಂದು ನೆನಪಿಸಿದರು

SCROLL FOR NEXT