ಪ್ರಿಯಾಂಕಾ ಗಾಂಧಿ 
ರಾಜಕೀಯ

ಆರಂಭದಲ್ಲಿ ಭಾರತೀಯ ಸಂಪ್ರದಾಯ ಕಲಿಯಲು ಕಷ್ಟಪಟ್ಟ ಸೋನಿಯಾ ಗಾಂಧಿಗೆ ರಾಜಕೀಯ ಇಷ್ಟವಿರಲಿಲ್ಲ: ಪ್ರಿಯಾಂಕಾ ಗಾಂಧಿ

ಆರಂಭದಲ್ಲಿ ಭಾರತೀಯ ಸಂಪ್ರದಾಯ ಕಲಿಯಲು ಕಷ್ಟಪಟ್ಟ ಸೋನಿಯಾ ಗಾಂಧಿ ಅವರಿಗೆ ರಾಜಕೀಯವನ್ನು ಇಷ್ಟಪಟ್ಟಿರಲಿಲ್ಲ ಎಂದು  ಅವರ ಪುತ್ರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ತಿಳಿಸಿದರು.

ಬೆಂಗಳೂರು: ಆರಂಭದಲ್ಲಿ ಭಾರತೀಯ ಸಂಪ್ರದಾಯ ಕಲಿಯಲು ಕಷ್ಟಪಟ್ಟ ಸೋನಿಯಾ ಗಾಂಧಿ ಅವರಿಗೆ ರಾಜಕೀಯವನ್ನು ಇಷ್ಟಪಟ್ಟಿರಲಿಲ್ಲ ಎಂದು  ಅವರ ಪುತ್ರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ತಿಳಿಸಿದರು.

ಕೆಪಿಸಿಸಿ ಆಯೋಜಿಸಿದ್ದ ಮಹಿಳಾ ಕೇಂದ್ರಿತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ತಾನು ಇಬ್ಬರು ಧೈರ್ಯಶಾಲಿ ಮತ್ತು ಬಲಿಷ್ಠ ಮಹಿಳೆಯರಾದ ಅಜ್ಜಿ ಇಂದಿರಾ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಅವರಿಂದ ಬೆಳೆದಿರುವುದಾಗಿ ಹೇಳಿದರು. 

ಇಂದಿರಾ ಗಾಂಧಿ ತಮ್ಮ 33 ವರ್ಷದ ಮಗ ಸಂಜಯ್ ಗಾಂಧಿ ಅವರನ್ನು ಕಳೆದುಕೊಂಡಾಗ ತನಗೆ ಎಂಟು ವರ್ಷ ವಯಸ್ಸಾಗಿತ್ತು ಎಂದು ನೆನಪಿಸಿಕೊಂಡ ಪ್ರಿಯಾಂಕಾ ಗಾಂಧಿ,  ಸಂಜಯ್ ಗಾಂಧಿ ಮರಣದ ಮರು ದಿನವೇ ಅವರು ರಾಷ್ಟ್ರದ ಸೇವೆಗಾಗಿ ಕೆಲಸಕ್ಕೆ ಹೋದರು ಮತ್ತು ಅದು ಅವರ ಕರ್ತವ್ಯ ಪ್ರಜ್ಞೆ ಮತ್ತು ಅವರ ಆಂತರಿಕ ಶಕ್ತಿಯಾಗಿತ್ತು. ಇಂದಿರಾ ಗಾಂಧಿ ಸಾಯುವವರೆಗೂ ರಾಷ್ಟ್ರ ಸೇವೆಯನ್ನು ಮುಂದುವರೆಸಿದರು ಎಂದು ತಿಳಿಸಿದರು.

ಸೋನಿಯಾ ಗಾಂಧಿ 21ನೇ ವಯಸ್ಸಿನಲ್ಲಿ ರಾಜೀವ್ ಗಾಂಧಿ ಅವರನ್ನು ಪ್ರೀತಿಸಿ, ಮದುವೆಯಾಗಲು ಇಟಲಿಯಿಂದ ಭಾರತಕ್ಕೆ ಬಂದರು. ಇಲ್ಲಿನ ಸಂಪ್ರದಾಯ ಕಲಿಯಲು ಸಾಕಷ್ಟು ಹೋರಾಟ ನಡೆಸಿದ್ದಾರೆ. ಎಲ್ಲಾವನ್ನು ಇಂದಿರಾ ಗಾಂಧಿ ಅವರಿಂದ ಕಲಿತ ಸೋನಿಯಾ ಗಾಂಧಿ 44 ನೇ ವಯಸ್ಸಿನಲ್ಲಿ  ಪತಿಯನ್ನು ಕಳೆದುಕೊಂಡರು. ತದ ನಂತರ ರಾಜಕೀಯ ಇಷ್ಟಪಡದಿದ್ದರೂ ದೇಶ ಸೇವೆಯ ಹಾದಿ ಹಿಡಿದರು ಮತ್ತು ಈಗ ಅವರಿಗೆ 76 ವರ್ಷ ವಯಸ್ಸಿನಲ್ಲಿಯೂ ದೇಶ ಸೇವೆ ಮಾಡುತ್ತಿರುವುದಾಗಿ ಪ್ರಿಯಾಂಕಾ ಗಾಂಧಿ ಹೇಳಿದರು.

"ನಿಮ್ಮ ಜೀವನದಲ್ಲಿ ನಿಮಗೆ ಏನಾಗಲಿ, ಅದು ವಿಷಯವೇ ಅಲ್ಲ. ನೀವು ಎಷ್ಟೇ ದೊಡ್ಡ ದುರಂತವನ್ನು ಎದುರಿಸುತ್ತಿರಲಿ, ಅದನ್ನು ಎದುರಿಸುವುದರಲ್ಲಿ ಮುಳುಗಿದ್ದರೂ ಅದು ದೊಡ್ಡ ವಿಚಾರವೇ ಅಲ್ಲ. ಮನೆಯಲ್ಲಾಗಲಿ ಅಥವಾ ಕೆಲಸದಲ್ಲಾಗಲಿ ಅಥವಾ ಹೊರಗಾಗಲಿ, ನಿಮಗಾಗಿ ಎದ್ದುನಿಂತು ಹೋರಾಡುವ ಸಾಮರ್ಥ್ಯ ಹೊಂದಬೇಕು ಎಂಬುದನ್ನು ಇಂದಿರಾಗಾಂಧಿ ಅವರಿಂದ ಸೋನಿಯಾ ಗಾಂಧಿ ಕಲಿತಿರುವುದಾಗಿ ಪ್ರಿಯಾಂಕಾ ಗಾಂಧಿ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

SCROLL FOR NEXT