ರಾಜಕೀಯ

ಸಕ್ಕರೆ ನಾಡಿನಲ್ಲಿ ಪಿಎಂ ಮಿಂಚಿನ ಸಂಚಾರ: ದಳಪತಿಗಳ ಭದ್ರಕೋಟೆ ಛಿದ್ರಗೊಳಿಸಲು ಮೋದಿ ರೋಡ್ ಶೋ ಬ್ರಹ್ಮಾಸ್ತ್ರ!

Shilpa D

ಮೈಸೂರು: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಕ್ಕಲಿಗ ಭದ್ರಕೋಟೆಯಲ್ಲಿ ಬಿಜೆಪಿಗೆ ಚುನಾವಣಾ ಭವಿಷ್ಯವನ್ನು ಹೆಚ್ಚಿಸಲು ಮತ್ತೊಂದು ಅವಕಾಶವಾಗಿದೆ. 

ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಗೆದ್ದಿರುವ ಜೆಡಿಎಸ್ ಭದ್ರಕೋಟೆಯಲ್ಲಿ ಮೋದಿ 1.8 ಕಿಮೀ  ರೋಡ್‌ಶೋ ನಡೆಸಿದರು. ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಗೆಲುವು ಸಾಧಿಸುವ ಮತ್ತೊಂದು ಅಂಶವಾಗಿದೆ, ಹೀಗಾಗಿ ಈ ಪ್ರಯೋಜನ ಪಡೆಯಲು ಬಿಜೆಪಿ ಮುಂದಾಗಿದೆ.

ಪಿಇಎಸ್ ಸ್ಟೇಡಿಯಂನಲ್ಲಿ ಹೆಲಿಕಾಪ್ಟರ್ ಇಳಿಸಿದ ಮೋದಿ, ಬಿಎಂ ರಸ್ತೆಯಲ್ಲಿ ರೋಡ್ ಶೋಗೆ ಪ್ರವೇಶಿಸಿದಾಗ, ಡೋಲು ಬಾರಿಸುವ ಕಲಾವಿದರ ತಂಡ ಅವರನ್ನು ಸ್ವಾಗತಿಸಿತು. ರಸ್ತೆಯ ಇಕ್ಕೆಲಗಳಲ್ಲಿ ಮಕ್ಕಳು ಮತ್ತು ಮಹಿಳೆಯರು ಸಾಲುಗಟ್ಟಿ ನಿಂತಿದ್ದ ಪ್ರಧಾನಿಯನ್ನು ಕಣ್ತುಂಬಿಕೊಂಡರು.

ಮಂಡ್ಯಕ್ಕೆ ಮೊದಲ ಬಾರಿಗೆ ಬಂದಿರುವ ಮೋದಿ ಅವರನ್ನು ನೋಡಲು ಕುಟುಂಬ ಸದಸ್ಯರೊಂದಿಗೆ ಬಂದಿದ್ದೇನೆ ಎಂದು ಯಲಿಯೂರು ಗ್ರಾಮದ ದೀಪಾ ಹೇಳಿದರು. "ಕಳೆದ ನಾಲ್ಕು ದಿನಗಳಲ್ಲಿ, ಮಕ್ಕಳು ಪ್ರಧಾನ ಮಂತ್ರಿಯನ್ನು ನೋಡಲು ಉತ್ಸುಕರಾಗಿದ್ದರು" ಎಂದು ಅವರು ಹೇಳಿದರು.

ಕಿಸಾನ್ ಸಮ್ಮಾನ್ ನಿಧಿಗಾಗಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇವೆ ಎಂದು ಅರಕೆರೆಯ ಬಂಡೆಗೌಡ ಹೇಳಿದರು. “ಕೇಂದ್ರ ಸರ್ಕಾರವು ಬಡವರು ಮತ್ತು ರೈತರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿರುವುದು ನಮಗೆ ಸಂತೋಷ ತಂದಿದೆ. ರಸಗೊಬ್ಬರದ ಬೆಲೆಯನ್ನು ಕಡಿತಗೊಳಿಸಬೇಕು ಮತ್ತು ಕೃಷಿ ವೆಚ್ಚವನ್ನು ಕಡಿಮೆ ಮಾಡಬೇಕು ಎಂಬುದು ನಮ್ಮ ಏಕೈಕ ವಿನಂತಿಯಾಗಿದೆ ಎಂದು ಅವರು ಹೇಳಿದರು.

ಮೈಸೂಗರ್‌ ಕಾಮಗಾರಿಗೆ ಚಾಲನೆ ನೀಡಿ ಹೆದ್ದಾರಿ ಪೂರ್ಣಗೊಳಿಸಿದ ಬಿಜೆಪಿ ಸರ್ಕಾರದ ಬಗ್ಗೆ ಹೆಮ್ಮೆ ಇದೆ. ಸರಕಾರ ಪ್ರತಿ ಟನ್ ಕಬ್ಬಿಗೆ ಕನಿಷ್ಠ 3,500 ರೂ.ಗಳಷ್ಟು ಹೆಚ್ಚಿಸಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕಿರುಗಾವಲು ಗ್ರಾಮಸ್ಥ ಬಸವಣ್ಣ ಹೇಳಿದರು.

ಬೆಳಗ್ಗೆ 10.30ರ ವರೆಗೆ ಜನರು ಕಡಿಮೆ ಸಂಖ್ಯೆಯಲ್ಲಿ ಇದ್ದರು, ಇದರಿಂದ ಬಿಜೆಪಿ ಮುಖಂಡರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು, ನಂತರ ಬಸ್‌ಗಳಲ್ಲಿ ಪಟ್ಟಣಕ್ಕೆ  ಜನಸಾಗರವೇ ಹರಿದು ಬರಲಾರಂಭಿಸಿತು. ಉರಿಗೌಡ-ದೊಡ್ಡ ನಂಜೇಗೌಡರ ಹೆಸರಿನಲ್ಲಿ ಕಮಾನು ನಿರ್ಮಿಸಿ ಟಿಪ್ಪು ಸುಲ್ತಾನ್ ಅವರನ್ನು ಕೊಂದವರು ಎಂದು ಬಿಂಬಿಸಲು  ಹೊರಟ ಬಿಜೆಪಿ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿತ್ತು. 

ಸಂಜೆಯೊಳಗೆ ಕಮಾನು ತೆಗೆಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್, ಜೆಡಿಎಸ್, ರೈತ ಸಂಘ, ಇತರೆ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಬಿಜೆಪಿಯವರು ಆ ಕಮಾನಿಗೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹೆಸರನ್ನಿಟ್ಟು ಶ್ರೀಗಳ ಚಿತ್ರಗಳನ್ನು ತೆಗೆಸಿದರು.

SCROLL FOR NEXT