ಸಾಂದರ್ಭಿಕ ಚಿತ್ರ 
ರಾಜಕೀಯ

ಚುನಾವಣಾ ಫಲಿತಾಂಶದ ಮೇಲೆ ಮತದಾನದ ಪ್ರಭಾವ ಜೋರು: ಮತದಾರ ಪ್ರಭುವಿನ ಅಂತಿಮ ನಾಡಿಮಿಡಿತ ಅರಿತವರು ಯಾರು?

ಮೇ 10 ರಂದು ನಡೆಯುವ ಮತದಾನದ ಪ್ರಮಾಣವು ಕರ್ನಾಟಕ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ಕೊನೆಯ ಮತ್ತು ಅತಿ ಪ್ರಮುಖ ಅಂಶವಾಗಿದೆ.

ಬೆಂಗಳೂರು: ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವೆಂದೇ ಪರಿಗಣಿತವಾಗಿರುವ ಮತದಾನ ಪ್ರಕ್ರಿಯೆಗೆ ಒಂದು ದಿನ ಬಾಕಿಯಿದೆ. ಮೇ 10 ರಂದು ನಡೆಯುವ ಮತದಾನದ ಪ್ರಮಾಣವು ಕರ್ನಾಟಕ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ಕೊನೆಯ ಮತ್ತು ಅತಿ ಪ್ರಮುಖ ಅಂಶವಾಗಿದೆ.

ಮತದಾನದ ಪ್ರಮಾಣ ಹೆಚ್ಚಾದರೆ, ಅನಿರೀಕ್ಷಿತ ಫಲಿತಾಂಶವೂ ಹೆಚ್ಚು, ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು, ವಿಶೇಷವಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮತದಾರರ ಮೇಲೆ ತಮ್ಮ ಗಮನ ಕೇಂದ್ರೀಕರಿಸಿವೆ  ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಸುಮಾರು 100  ಹಾಗೂ ಕಾಂಗ್ರೆಸ್‌ನ ರಾಷ್ಟ್ರೀಯ ಪಕ್ಷಗಳ ನಾಯಕರು ಸೇರಿ ಸುಮಾರು 50  ಕಡೆ ವ್ಯಾಪಕ ಪ್ರಚಾರ ನಡೆಸಿದ್ದಾರೆ.

ಪ್ರಾದೇಶಿಕ ಜೆಡಿಎಸ್ ತನ್ನ ಪಂಚರತ್ನ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಸಂಚರಿಸಿ ಪ್ರಾರಂಭದಲ್ಲಿಯೇ ಪ್ರಚಾರವನ್ನು ಪ್ರಾರಂಭಿಸಿತು, ಆದರೆ ಆಮ್ ಆದ್ಮಿ ಪಕ್ಷ (ಎಎಪಿ) ಕೇವಲ ನಗರ ಪ್ರದೇಶಗಳಲ್ಲಿ ವ್ಯಾಪಕ ಪ್ರಚಾರ ನಡೆಸಿತು. ಒಟ್ಟಿನಲ್ಲಿ, ಇಂತಹ ನಿರಂತರ ಪ್ರಚಾರವು ಈ ಬಾರಿಯ ಮತದಾನದ ಮೇಲೆ ಅಭೂತಪೂರ್ವ ಪರಿಣಾಮ ಬೀರಬಹುದು.

2013ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ.70.23ರಷ್ಟು ಮತದಾನವಾಗಿತ್ತು, 2018ರಲ್ಲಿ ಶೇ.72.13ರಷ್ಟು ಮತದಾನವಾಗಿದ್ದು, ಇದು 1952ರ ನಂತರ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಮಾಣದ್ದಾಗಿತ್ತು.

ಅಧಿಕಾರ-ವಿರೋಧಿ ಮತ್ತು ಇತರ ವಿಷಯಗಳು ಒಂದು ಪಾತ್ರವನ್ನು ವಹಿಸಿದವು, ಏಕೆಂದರೆ ಜನರು ತಪ್ಪದೆ ಮತ ಚಲಾಯಿಸಲು ಕಾರಣವನ್ನು ಕಂಡುಕೊಂಡರು, ಒಬ್ಬ ನಾಯಕನ ಪರಿಗಣನೆ ಮತ್ತು ಹಣದ ಹಂಚಿಕೆಯೂ ಪ್ರಭಾವ ಬೀರಿತು.

ಪಕ್ಷಗಳು ಮತದಾರರನ್ನು ಮತಗಟ್ಟೆಗಳಿಗೆ ಕರೆತರಬೇಕು, ಇಲ್ಲದಿದ್ದರೆ ಹೆಚ್ಚಿನ ಮತದಾರರು ಪ್ರತಿಪಕ್ಷಗಳಿಗೆ ಸಹಾಯ ಮಾಡುವ ಸಾಧ್ಯತೆಯಿದೆ, ಏಕೆಂದರೆ ಆಡಳಿತ ವಿರೋಧಿ ಅಂಶವು ಪ್ರಮುಖ  ಕಾರಣವಾಗಿದೆ ಎಂದು ಆಂಧ್ರಪ್ರದೇಶದ ಅಮರಾವತಿಯ ಕಾಂಗ್ರೆಸ್ ಪರ ವ್ಯಕ್ತಿ ಶ್ರೀನಿವಾಸ್ ಹೇಳಿದ್ದಾರೆ, ಹಲವು ದಿನಗಳಿಂದ ಅವರು ಇಲ್ಲಿಯೇ ಬೀಡುಬಿಟ್ಟಿದ್ದಾರೆ.

2020 ರಲ್ಲಿ ಶೇಕಡಾ 57 ರಷ್ಟು ಮತದಾನವಾಗಿದ್ದ ಬಿಹಾರದಲ್ಲಿ ಪ್ರತಿಪಕ್ಷವಾದ ರಾಷ್ಟ್ರೀಯ ಜನತಾ ದಳ ಮತ್ತು 2022 ರಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (61 ಶೇಕಡಾ ಮತದಾನ) ಆಡಳಿತ ವಿರೋಧಿ ಅಂಶದ ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ.

ಆದರೆ ಆಂಧ್ರಪ್ರದೇಶದಲ್ಲಿ 2019 ರಲ್ಲಿ ವೈಎಸ್‌ಆರ್ ಕಾಂಗ್ರೆಸ್ 80.39 ರಷ್ಟು ಮತ ಪಡೆದಿತ್ತು, 2021 ರಲ್ಲಿ ತಮಿಳುನಾಡಿನಲ್ಲಿ ಶೇಕಡಾ 73.63 ರಷ್ಟು ಮತದಾನವಾಗಿರುವುದರಿಂದ ಡಿಎಂಕೆ ಸಂಪೂರ್ಣ ಬಹುಮತ ಗಳಿಸಿತು ಎಂದು ಅವರು ವಿಶ್ಲೇಷಿಸಿದ್ದಾರೆ.

ಮತದಾರರ ಮತದಾನವು ಖಂಡಿತವಾಗಿಯೂ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ಆದರೆ ಇದು ಹಳೆಯ ಮೈಸೂರು, ಕಲ್ಯಾಣ ಕರ್ನಾಟಕ, ಕರಾವಳಿ, ಮುಂಬೈ-ಕರ್ನಾಟಕ ಮತ್ತು ಮಧ್ಯ ಕರ್ನಾಟಕದಂತಹ ಕ್ಷೇತ್ರ ಮತ್ತು ಪ್ರದೇಶಗಳನ್ನು ಅವಲಂಬಿಸಿರುತ್ತದೆ ಎಂದು ಸಂದೀಪ್ ಶಾಸ್ತ್ರಿ ಹೇಳಿದರು.

ಆಡಳಿತ ವಿರೋಧಿ ಅಲೆ ಇದ್ದರೆ, ಮತದಾನದ ಪ್ರಮಾಣವು ಅಧಿಕವಾಗಿರುತ್ತದೆ ಮತ್ತು ಆಡಳಿತ ಪಕ್ಷಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಆದರೆ, ಅದನ್ನು ಸಾಬೀತುಪಡಿಸಲು ಯಾವುದೇ ಪ್ರಾಯೋಗಿಕ ಡೇಟಾ ಇಲ್ಲ, ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT