ವಿಧಾನಸೌಧ ಮತ್ತು ವಿಕಾಸ ಸೌಧ 
ರಾಜಕೀಯ

ನನಗೆ ಪೂರ್ವದ ದ್ವಾರ, ನನಗೆ ಬೇಕು ಉತ್ತರದ ಬಾಗಿಲು: 'ವಾಸ್ತು' ಕೊಠಡಿಗಾಗಿ ನೂತನ ಶಾಸಕರ ದುಂಬಾಲು!

ಶನಿವಾರ ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರ ರಚನೆಯಾಗುತ್ತಿದ್ದು, ವಿಧಾನಸೌಧ, ವಿಕಾಸಸೌಧ, ಶಾಸಕರ ಗೃಹ ಹಾಗೂ ಮಿನಿಸ್ಟರ್ಸ್ ಕ್ವಾರ್ಟರ್ಸ್‌ನಲ್ಲಿ ಉತ್ತಮ ಕೊಠಡಿಗಳನ್ನು ಪಡೆದುಕೊಳ್ಳಲು ಪೈಪೋಟಿ ಆರಂಭವಾಗಿದೆ.

ಬೆಂಗಳೂರು: ಶನಿವಾರ ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರ ರಚನೆಯಾಗುತ್ತಿದ್ದು, ವಿಧಾನಸೌಧ, ವಿಕಾಸಸೌಧ, ಶಾಸಕರ ಗೃಹ ಹಾಗೂ ಮಿನಿಸ್ಟರ್ಸ್ ಕ್ವಾರ್ಟರ್ಸ್‌ನಲ್ಲಿ ಉತ್ತಮ ಕೊಠಡಿಗಳನ್ನು ಪಡೆದುಕೊಳ್ಳಲು ಪೈಪೋಟಿ ಆರಂಭವಾಗಿದೆ.

ಉತ್ತರದ ಕಡೆಗೆ ಇರುವ ಹೈಕೋರ್ಟ್ ಮತ್ತು ಪೂರ್ವಕ್ಕೆ ರಾಜಭವನ ಎದುರಿಗಿರುವ ಕೊಠಡಿಗಳಿಗೆ ಬೇಡಿಕೆ ಹೆಚ್ಚಿದೆ.  ಶಾಸಕರ ಬೆಂಬಲಿಗರು ಕಳೆದ ಕೆಲವು ದಿನಗಳಿಂದ ಶಾಸಕರ ಭವನದ ಕೊಠಡಿಗಳಲ್ಲಿ ಉತ್ತಮವಾದವರನ್ನು ಹಿಡಿಯಲು ಕಸರತ್ತು ನಡೆಸುತ್ತಿದ್ದಾರೆ. ಶಾಸಕರ ಭವನದಲ್ಲಿ 224 ಶಾಸಕರು ಮತ್ತು 75 ಎಂಎಲ್‌ಸಿಗಳಿಗೆ ಸುಮಾರು 300 ಕೊಠಡಿಗಳಿವೆ.

'ಶನಿವಾರ ಹಿಂದಿನ ಸರಕಾರದಿಂದ ಸಂಪೂರ್ಣ ಹಸ್ತಾಂತರ ಆಗುವುದರಿಂದ ವಿಧಾನಸೌಧ ಮತ್ತು ವಿಕಾಸಸೌಧದ ಬಹುತೇಕ ಕಚೇರಿಗಳು, ಎಲ್‌ಎಚ್‌ನಲ್ಲಿ ಕೊಠಡಿಗಳು ಮತ್ತು ಸಚಿವರ ಕ್ವಾಟರ್ಸ್‌ಗಳು ಖಾಲಿಯಾಗಲಿವೆ. ಅದರ ನಂತರ ಕೆಲವನ್ನು ಹಸ್ತಾಂತರಿಸಲಾಗುವುದು ಎಂದು ವಿಧಾನಸೌಧದ ಮೂಲಗಳು ತಿಳಿಸಿವೆ.

ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಅಂದರೆ ಮೇ 13 ರಿಂದ ಎಲ್ಲಾ ನಾಮಫಲಕಗಳನ್ನು ತೆಗೆದು ಕೀಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಮತ್ತು ಸಂಬಂಧಿಸಿದ ಸಚಿವಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಈ ಎಲ್ಲ ಜಾಗಗಳಲ್ಲಿ ಅಧಿಕಾರಿಗಳು ದಾಸ್ತಾನು ಪರಿಶೀಲಿಸಿದ್ದು, ಹೊಸದಾಗಿ ಬಣ್ಣ ಹಚ್ಚಿದ ಬಳಿಕ ಕೊಠಡಿಗಳನ್ನು ಹೊಸ ಶಾಸಕರಿಗೆ ಹಸ್ತಾಂತರಿಸಲಾಗುವುದು ಎಂದು ಮತ್ತೊಂದು ಮೂಲಗಳು ತಿಳಿಸಿವೆ.

ಮೂರು ಪಕ್ಷಗಳ ಬಹುತೇಕ ಶಾಸಕರು ತಮ್ಮ ಅಸೆಂಬ್ಲಿ ಸ್ಥಾನಗಳನ್ನು ಉಳಿಸಿಕೊಂಡಿದ್ದು, ಶಾಸಕರ ಭವನದ ತಮ್ಮ ಹಿಂದಿನ ಕೊಠಡಿಗಳನ್ನು ಇಟ್ಟುಕೊಂಡಿದ್ದಾರೆ. ಹೊಸ ವಿಧಾನಸಭೆಯ ಮೊದಲ ಅಧಿವೇಶನವನ್ನು ಮೇ 23 ಅಥವಾ 24 ರಂದು ಕರೆಯುವ ಸಾಧ್ಯತೆಯಿದೆ, ಅದಕ್ಕೂ ಮೊದಲು ಕೊಠಡಿ ಹಂಚಿಕೆ  ಕಾರ್ಯ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT