ಎಚ್.ಡಿ ದೇವೇಗೌಡ 
ರಾಜಕೀಯ

ಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆ ಜೆಡಿಎಸ್ 'ಕೂಡಿಕೆ'ಯ ಹವಣಿಕೆ; ಗೌಡರ ಜಾತ್ಯಾತೀತ ವರ್ಚಸ್ಸಿಗೆ ಧಕ್ಕೆ; ರಾಜಕೀಯ ತಜ್ಞರ ಅಭಿಮತವೇನು?

ಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ವರಿಷ್ಠರು ನಿರ್ಧರಿಸಿದ್ದಾರೆ, ಆದರೆ ಈ ಮೈತ್ರಿಯಿಂದ ದೇವೇಗೌಡರ ದೀರ್ಘಕಾಲದ ಜಾತ್ಯಾತೀತ ವರ್ಚಸ್ಸಿಗೆ ಧಕ್ಕೆ ಬರಲಿದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ.

ಬೆಂಗಳೂರು: ಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ವರಿಷ್ಠರು ನಿರ್ಧರಿಸಿದ್ದಾರೆ, ಆದರೆ ಈ ಮೈತ್ರಿಯಿಂದ ದೇವೇಗೌಡರ ದೀರ್ಘಕಾಲದ ಜಾತ್ಯಾತೀತ ವರ್ಚಸ್ಸಿಗೆ ಧಕ್ಕೆ ಬರಲಿದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ.

ಬಲಪಂಥೀಯ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವುದು, ರಾಜ್ಯದ ವಿವಿಧ ಭಾಗಗಳಲ್ಲಿ ಪಕ್ಷ ಹೊಂದಿದ್ದ ಅಲ್ಪಸಂಖ್ಯಾತರ ಬೆಂಬಲವನ್ನು ಪಕ್ಷವು ತಕ್ಷಣವೇ ಕಳೆದುಕೊಳ್ಳುವ ಸಾಧ್ಯತೆಯಿದೆ.

ಕೆಲವು ದಲಿತ ಮತ್ತು ಒಬಿಸಿ ವರ್ಗಗಳ ಬೆಂಬಲದಿಂದ ಜೆಡಿಎಸ್ ವಂಚಿತವಾಗಬಹುದು. ಇನ್ನು ಮುಂದೆ ಅದು ಕೇವಲ ಒಕ್ಕಲಿಗರ ಪಕ್ಷ, ಅದೂ ಕೂಡ ‘ಗಂಗಾಡಿಕರ್ ಒಕ್ಕಲಿಗ ಪಕ್ಷ’ವಾಗುತ್ತದೆ.

ಏಕೆಂದರೆ ಮರಸು ಒಕ್ಕಲಿಗರು, ದಾಸ ಒಕ್ಕಲಿಗರಂತಹ ಇತರ ಕೆಲವು ಉಪಪಂಗಡಗಳು ನಿಧಾನವಾಗಿ ಜೆಡಿಎಸ್‌ನಿಂದ ದೂರ ಸರಿಯುತ್ತಿವೆ ಎಂದು ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

ಮೈತ್ರಿಯೊಂದಿಗೆ, ಪಕ್ಷದ ಹಿರಿಯ ನಾಯಕ- ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಸದ್ಯ ರಾಜ್ಯದಲ್ಲಿ ಖಾಲಿಯಿರುವ ವಿಧಾನಸಭೆ ಪ್ರತಿಪಕ್ಷ ನಾಯಕರಾಗಬಹುದು.

ದೇವೇಗೌಡರ ಅತ್ಯುತ್ತಮ ವೃತ್ತಿಜೀವನಕ್ಕೆ ದುಃಖದ ಅಂತ್ಯವಾಗಿದೆ. ಅಂತಿಮವಾಗಿ, ಇದು ಅವರ ಪುತ್ರರು ಮತ್ತು ಮೊಮ್ಮಕ್ಕಳ ರಾಜಕೀಯ ಜೀವನವನ್ನು ಉಳಿಸಲು ಮಾಡಿದ ನಿರ್ಧಾರವಾಗಿದೆ. ಆದರೆ ಮೈತ್ರಿಯೊಂದಿಗೆ, ಗೌಡರ  ಜಾತ್ಯಾತೀತ ವರ್ಚಸ್ಸು ಹೆಚ್ಚು ಕುಸಿಯುತ್ತದೆ ಎಂದು ಮೂರ್ತಿ ತಿಳಿಸಿದ್ದಾರೆ.

2024 ರ ಲೋಕಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಮೈತ್ರಿ ಮಾಡಿಕೊಳ್ಳುವುದು ಖಂಡಿತವಾಗಿಯೂ ಅವರಿಗೆ ದುಬಾರಿಯಾಗಲಿದೆ ಎಂದು ಪಕ್ಷದ ನಾಯಕರೊಬ್ಬರು ಒಪ್ಪಿಕೊಂಡಿದ್ದಾರೆ.

ಆದರೆ ಜಾತ್ಯತೀತ ನಾಯಕರಾಗಿರುವ ಗೌಡರ ಇಮೇಜ್ ಮೇಲೆ ಕೂಡ ಪರಿಣಾಮ ಬೀರುತ್ತದೆ. ಪಕ್ಷದ ಕಚೇರಿಯಲ್ಲಿರುವ ಜಯಪ್ರಕಾಶ ನಾರಾಯಣ ಅವರ ಭಾವಚಿತ್ರ ತೆಗೆಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇಲ್ಲ ಎಂದು ಹೇಳಿದ್ದಾರೆ.

ಪಕ್ಷದ ಉಳಿವಿಗೆ ಈ ಮೈತ್ರಿ ಅನಿವಾರ್ಯ ಎಂದರು. ಪಕ್ಷದ ಕಾರ್ಯಕರ್ತರು, “ನಿತೀಶ್ ಕುಮಾರ್ (ಬಿಹಾರ ಮುಖ್ಯಮಂತ್ರಿ) ಬಿಜೆಪಿಯೊಂದಿಗೆ ಹೋಗುವ ಮೂಲಕ ಕಡಿಮೆ ಜಾತ್ಯತೀತರಾದರೆ? ಎಂದು ಪ್ರಶ್ನಿಸಿದರು. ಅಲ್ಪಸಂಖ್ಯಾತರು ಬೆಂಬಲಿಸದ ಕಾರಣ ಬಿಜೆಪಿ ಕೇವಲ ಶೇ.85 ರಷ್ಟು ಮತಗಳಿಗಾಗಿ ಹೋರಾಡುತ್ತದೆ. ಇದು ಜೆಡಿಎಸ್‌ಗೆ ನೆರವಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ಪಕ್ಷವು ನಿಧಿಯ ಕೊರತೆಯಿದೆ ಎಂದು ದೂರುತ್ತಿದೆ ಮತ್ತು ಈ ಸಂಬಂಧವು ಪ್ರಾದೇಶಿಕ ಪಕ್ಷಕ್ಕೆ ಸಹಾಯ ಮಾಡುತ್ತದೆಯೇ ಎಂದು ನೋಡಬೇಕಾಗಿದೆ ಎಂದು ಮೂರ್ತಿ ಹೇಳಿದರು. ವಿಧಾನಸಭೆ ಚುನಾವಣೆಯಲ್ಲಿ ಭಾರೀ ಕುಸಿತ ಕಂಡಿದ್ದ ಜೆಡಿಎಸ್‌ನ ಮತ ಹಂಚಿಕೆ, ಮೈತ್ರಿ ಇಲ್ಲದಿದ್ದರೆ ಒಂದೇ ಅಂಕೆಗೆ ಕುಸಿಯುತ್ತಿತ್ತು ಮತ್ತು ರಾಜಕೀಯವಾಗಿ ಪಕ್ಷ ಅಪ್ರಸ್ತುತವಾಗುವ ಅಪಾಯವಿದೆ ಎಂದು ಅವರು ಹೇಳಿದರು.

ಕೇರಳದಲ್ಲಿ ಎಡ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ಏನಾಗಲಿದೆ? ಈ ವ್ಯವಸ್ಥೆಯಿಂದ ಬಿಜೆಪಿ ತನ್ನ ಲಿಂಗಾಯತ ಬೆಂಬಲದ ನೆಲೆಯನ್ನು ಅಪಾಯಕ್ಕೆ ತೆಗೆದುಕೊಳ್ಳುತ್ತದೆಯೇ ಎಂಬುದಕ್ಕೆ ಇನ್ನೂ ಉತ್ತರಿಸಬೇಕಾದ ಕೆಲವು ಪ್ರಮುಖ ಪ್ರಶ್ನೆಗಳು ಬಾಕಿ ಉಳಿದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT