ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಮತ್ತು ಉತ್ತರ ಕ್ಷೇತ್ರದ ಅಭ್ಯರ್ಥಿ ರಾಜೀವ್ ಗೌಡ ಅವರು ಬೆಂಗಳೂರಿನಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು 
ರಾಜಕೀಯ

ಬೆಂಗಳೂರಿಗೆ ಪ್ರತ್ಯೇಕ ‘ವಿಷನ್ ಡಾಕ್ಯುಮೆಂಟ್’ ಬಿಡುಗಡೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿಗಳು: ಭರವಸೆಗಳು ಏನು?

ವಿಷನ್ ಡಾಕ್ಯುಮೆಂಟ್‌ನಲ್ಲಿ 1 ಲಕ್ಷ ಕೋಟಿ ವಿಶೇಷ ಅನುದಾನ, ನಗರ ಉದ್ಯೋಗ ಖಾತರಿ, ನಗರಕ್ಕೆ ಸುರಕ್ಷಿತ ನೀರು ಮತ್ತು ಪ್ರಸ್ತುತ ಇರುವ ಹಳಿಗಳ ಮೇಲೆ ಉಪನಗರ ರೈಲು ಓಡಿಸುವಿಕೆಯನ್ನು ಉಲ್ಲೇಖಿಸಲಾಗಿದೆ.

ಬೆಂಗಳೂರು: ಬೆಂಗಳೂರು ಉತ್ತರ, ಮಧ್ಯ, ದಕ್ಷಿಣ, ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಐದು ಲೋಕಸಭಾ ಕ್ಷೇತ್ರಗಳ ಸುಸ್ಥಿರ ಬೆಳವಣಿಗೆಗೆ ಪ್ರತ್ಯೇಕ ಪ್ರಣಾಳಿಕೆಯಾದ ‘ವಿಷನ್ ಡಾಕ್ಯುಮೆಂಟ್’ ನ್ನು ಬೆಂಗಳೂರಿನ ಕಾಂಗ್ರೆಸ್ ಅಭ್ಯರ್ಥಿಗಳು ಬಿಡುಗಡೆ ಮಾಡಿದರು.

ಐಟಿ ಸಿಟಿ ಅಭಿವೃದ್ಧಿಗೆ ಅಭ್ಯರ್ಥಿಗಳು ವೈಯಕ್ತಿಕ ಸಂಸದರಾಗಿ ಕೆಲಸ ಮಾಡದೆ ತಂಡವಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ನಾವು ಚುನಾಯಿತರಾಗಿ ಆಯ್ಕೆಯಾಗಿ ಬಂದ ನಂತರ ದೆಹಲಿಗೆ ಹೋಗಿ ಬೆಂಗಳೂರು ನಗರಕ್ಕೆ ಕೇಂದ್ರ, ರಾಜ್ಯ ಮತ್ತು ಬಿಬಿಎಂಪಿಗೆ ಟ್ರಿಪಲ್ ಎಂಜಿನ್ ನಂತೆ ಕೆಲಸ ಮಾಡಲು ಹಣವನ್ನು ತರುತ್ತೇವೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ಎಂ.ವಿ.ರಾಜೀವ್ ಗೌಡ ಹೇಳಿದರು.

ವಿಷನ್ ಡಾಕ್ಯುಮೆಂಟ್‌ನಲ್ಲಿ 1 ಲಕ್ಷ ಕೋಟಿ ವಿಶೇಷ ಅನುದಾನ, ನಗರ ಉದ್ಯೋಗ ಖಾತರಿ, ನಗರಕ್ಕೆ ಸುರಕ್ಷಿತ ನೀರು ಮತ್ತು ಪ್ರಸ್ತುತ ಇರುವ ಹಳಿಗಳ ಮೇಲೆ ಉಪನಗರ ರೈಲು ಓಡಿಸುವಿಕೆಯನ್ನು ಉಲ್ಲೇಖಿಸಲಾಗಿದೆ. ನಾನು ನಗರ ಚಲನಶೀಲತೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. 2008 ರಿಂದ ಬೆಂಗಳೂರು ಉಪನಗರ ರೈಲು ಯೋಜನೆಗಾಗಿ ಹೋರಾಡುತ್ತಿದ್ದೇನೆ. KRIDE ಅಡಿಯಲ್ಲಿ, ಯೋಜನೆಯು ಹಳೆಯ ಸರಕುಗಳ ರೈಲಿನಂತೆ ಓಡುತ್ತಿದೆ.

ನಾವು ಅನೇಕ ಜನರನ್ನು ಖಾಸಗಿಯಿಂದ ಸಾರ್ವಜನಿಕ ಸಾರಿಗೆಗೆ ಬದಲಾಯಿಸುವಂತೆ ಮಾಡಬೇಕಾಗುತ್ತದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ಮೆಟ್ರೋ ಫೀಡರ್ ಬಸ್‌ಗಳು ಉತ್ತಮ ಯಶಸ್ಸನ್ನು ಸಾಧಿಸಿವೆ ಎಂದು ಹೇಳಿದರು. ನೀರಿನ ಟ್ಯಾಂಕರ್ ಮಾಫಿಯಾವನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗುವುದು. ನಗರದ ಮತ್ತು ಸುತ್ತಮುತ್ತಲಿನ ಕೆರೆಗಳಿಗೆ ಕಾಯಕಲ್ಪ ನೀಡಲಾಗುವುದು ಎಂದು ಪ್ರೊ.ಗೌಡ ಹೇಳಿದರು, ನಗರದ ಪರಂಪರೆಯನ್ನು ಪ್ರದರ್ಶಿಸಲು ಪಾರಂಪರಿಕ ನಡಿಗೆಗಳ ಭರವಸೆ ನೀಡಿದರು.

ಅಮೆರಿಕದಲ್ಲಿ ಪರಿಸರ ತಂತ್ರಜ್ಞಾನ ಅಧ್ಯಯನ ಮಾಡಿರುವ ಕಾಂಗ್ರೆಸ್ ಬೆಂಗಳೂರು ದಕ್ಷಿಣ ಅಭ್ಯರ್ಥಿ ಸೌಮ್ಯಾ ರೆಡ್ಡಿ, ಈ ಕ್ಷೇತ್ರದಲ್ಲಿ ಪರಿಣಿತರನ್ನು ಕರೆತರುವ ಮೂಲಕ ಬೆಂಗಳೂರಿನ ಹವಾಮಾನವನ್ನು ಸುಧಾರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ವಿಕೇಂದ್ರೀಕೃತ ಮತ್ತು ಸಶಕ್ತ ಬಿಬಿಎಂಪಿ, ಬೆಂಗಳೂರಿಗೆ ಮೆಟ್ರೋಪಾಲಿಟನ್ ಸಿಟಿ ಸ್ಥಾನಮಾನ, ‘ನಮ್ಮ ಸಂಸ್ಕೃತಿ-ನಮ್ಮ ಹೆಮ್ಮೆ’ ಮೂಲಕ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೆಚ್ಚಿಸುವುದು, ಉದ್ಯೋಗಿಗಳಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಮತ್ತು ‘ಇನ್ವೆಸ್ಟ್ ಕರ್ನಾಟಕ’ ಮಾದರಿಯಲ್ಲಿ ‘ಇನ್ವೆಸ್ಟ್ ಬೆಂಗಳೂರು’ ಪ್ರಾರಂಭಿಸುವ ಭರವಸೆಯನ್ನು ಕಾಂಗ್ರೆಸ್ ನ ಭರವಸೆ ಒಳಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT