ಸಚಿವ ಪ್ರಿಯಾಂಕ್ ಖರ್ಗೆ 
ರಾಜಕೀಯ

ಧೈರ್ಯವಿದ್ದರೆ ಯಡಿಯೂರಪ್ಪಗೆ 'ಕುಟುಂಬ ರಾಜಕಾರಣ' ಎಂದು ಹೇಳಿ ನೋಡೋಣ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಡೈನಸ್ಟಿ ಎಂದು ಜರಿದಿದ್ದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಧೈರ್ಯವಿದ್ದರೆ ಯಡಿಯೂರಪ್ಪಗೆ ಕುಟುಂಬ ರಾಜಕಾರಣ ಎಂದು ಹೇಳಿ ನೋಡೋಣ ಎಂದು ಸವಾಲೆಸೆದಿದ್ದಾರೆ.

ಬೆಂಗಳೂರು: ಡೈನಸ್ಟಿ ಎಂದು ಜರಿದಿದ್ದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಧೈರ್ಯವಿದ್ದರೆ ಯಡಿಯೂರಪ್ಪಗೆ ಕುಟುಂಬ ರಾಜಕಾರಣ ಎಂದು ಹೇಳಿ ನೋಡೋಣ ಎಂದು ಸವಾಲೆಸೆದಿದ್ದಾರೆ.

ಬಿಜೆಪಿಯ 'ವಂಶ ರಾಜಕಾರಣ' ಟ್ವೀಟ್ ಗೆ ತಿರುಗೇಟು ನೀಡಿ ಅಸಮಾಧಾನ ವ್ಯಕ್ತಪಡಿಸಿರುವ ಪ್ರಿಯಾಂಕ್ ಖರ್ಗೆ, "ಆತ್ಮೀಯ @BJP4Karnataka, ನಿಮಗೆ ಧೈರ್ಯವಿದ್ದರೆ, @BSYBJP @BYRBJP @BYVijayendra ಅವರಿಗೆ DYNAST ಪದವನ್ನು ಬಳಸಿ ಎಂದು @BSBommai @ikseshwarappa @Tejasvi_Surya @JagadishShettar @ShashikalaJolle @UmeshJadhav ), ಸೇರಿದಂತೆ ರಾಜಕೀಯ ವಂಶಾವಳಿ ಹಿನ್ನಲೆ ಹೊಂದಿರುವ ಹಲವಾರು ಬಿಜೆಪಿ ನಾಯಕರನ್ನು ಟ್ಯಾಗ್ ಮಾಡಿದ್ದಾರೆ.

ರಾಜ್ಯ ಸಚಿವ ಸಂಪುಟದ ಸದಸ್ಯರಾಗಿರುವ ಪ್ರಿಯಾಂಕ್ ಅವರು ಕಾಂಗ್ರೆಸ್ ರಾಷ್ಟ್ರೀಯ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರಾಗಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದಾರೆ ಎಂಬರ್ಥದಲ್ಲಿ ಬಿಜೆಪಿ ಟ್ವೀಟ್ ಮಾಡಿತ್ತು. ಅಲ್ಲದೆ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ಘೋಷಣೆ ಮಾಡಿದ್ದ ಚುನಾವಣಾ ಆಯೋಗದ ಕ್ರಮವನ್ನು ಟೀಕಿಸಿ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದರು. ಈ ಬಗ್ಗೆಯೂ ಬಿಜೆಪಿ ಟ್ವೀಟ್ ಮಾಡಿತ್ತು. ಇದಕ್ಕೆ ಇದೀಗ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಅಂತೆಯೇ "ಮತ್ತೊಮ್ಮೆ, ನಾನು @BJP4India ಮತ್ತು @BJP4Karnataka ನಾಯಕರಿಗೆ ನನ್ನ ಖರ್ಚಿನಲ್ಲಿ ಉಚಿತ ಡಿಎನ್‌ಎ ಪರೀಕ್ಷೆಯ ಆಫರ್ ನೀಡುತ್ತೇನೆ, ನಿಮ್ಮ ಮೂಲದ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ. ಹಿಂಜರಿಯಬೇಡಿ, "ವಂಶ ರಾಜಕೀಯ" ಎಂಬ ಈ ವಾದವನ್ನು ಒಮ್ಮೆ ನೋಡಿಯೇ ಬಿಡೋಣ. ನಿಮ್ಮ ಬಿಜೆಪಿ ಐಟಿ ಸೆಲ್‌ನಲ್ಲಿ ನಾವು ವಂಶಸ್ಥರು ಮತ್ತು ನ್ಯಾಯಸಮ್ಮತರು ಮತ್ತು ನೀವು ಉಳಿದವರು ಕುಟುಂಬ ರಾಜಕಾರಣಿಗಳಲ್ಲ.. ನೀವು ಕಾನೂನುಬದ್ಧರು ಅಥವಾ ನೀವು ನ್ಯಾಯಸಮ್ಮತರಾಗಿದ್ದರೆ ತಿಳಿಯುತ್ತದೆ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT