ಸಚಿವ ಪ್ರಿಯಾಂಕ್ ಖರ್ಗೆ 
ರಾಜಕೀಯ

ಧೈರ್ಯವಿದ್ದರೆ ಯಡಿಯೂರಪ್ಪಗೆ 'ಕುಟುಂಬ ರಾಜಕಾರಣ' ಎಂದು ಹೇಳಿ ನೋಡೋಣ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಡೈನಸ್ಟಿ ಎಂದು ಜರಿದಿದ್ದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಧೈರ್ಯವಿದ್ದರೆ ಯಡಿಯೂರಪ್ಪಗೆ ಕುಟುಂಬ ರಾಜಕಾರಣ ಎಂದು ಹೇಳಿ ನೋಡೋಣ ಎಂದು ಸವಾಲೆಸೆದಿದ್ದಾರೆ.

ಬೆಂಗಳೂರು: ಡೈನಸ್ಟಿ ಎಂದು ಜರಿದಿದ್ದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಧೈರ್ಯವಿದ್ದರೆ ಯಡಿಯೂರಪ್ಪಗೆ ಕುಟುಂಬ ರಾಜಕಾರಣ ಎಂದು ಹೇಳಿ ನೋಡೋಣ ಎಂದು ಸವಾಲೆಸೆದಿದ್ದಾರೆ.

ಬಿಜೆಪಿಯ 'ವಂಶ ರಾಜಕಾರಣ' ಟ್ವೀಟ್ ಗೆ ತಿರುಗೇಟು ನೀಡಿ ಅಸಮಾಧಾನ ವ್ಯಕ್ತಪಡಿಸಿರುವ ಪ್ರಿಯಾಂಕ್ ಖರ್ಗೆ, "ಆತ್ಮೀಯ @BJP4Karnataka, ನಿಮಗೆ ಧೈರ್ಯವಿದ್ದರೆ, @BSYBJP @BYRBJP @BYVijayendra ಅವರಿಗೆ DYNAST ಪದವನ್ನು ಬಳಸಿ ಎಂದು @BSBommai @ikseshwarappa @Tejasvi_Surya @JagadishShettar @ShashikalaJolle @UmeshJadhav ), ಸೇರಿದಂತೆ ರಾಜಕೀಯ ವಂಶಾವಳಿ ಹಿನ್ನಲೆ ಹೊಂದಿರುವ ಹಲವಾರು ಬಿಜೆಪಿ ನಾಯಕರನ್ನು ಟ್ಯಾಗ್ ಮಾಡಿದ್ದಾರೆ.

ರಾಜ್ಯ ಸಚಿವ ಸಂಪುಟದ ಸದಸ್ಯರಾಗಿರುವ ಪ್ರಿಯಾಂಕ್ ಅವರು ಕಾಂಗ್ರೆಸ್ ರಾಷ್ಟ್ರೀಯ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರಾಗಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದಾರೆ ಎಂಬರ್ಥದಲ್ಲಿ ಬಿಜೆಪಿ ಟ್ವೀಟ್ ಮಾಡಿತ್ತು. ಅಲ್ಲದೆ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ಘೋಷಣೆ ಮಾಡಿದ್ದ ಚುನಾವಣಾ ಆಯೋಗದ ಕ್ರಮವನ್ನು ಟೀಕಿಸಿ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದರು. ಈ ಬಗ್ಗೆಯೂ ಬಿಜೆಪಿ ಟ್ವೀಟ್ ಮಾಡಿತ್ತು. ಇದಕ್ಕೆ ಇದೀಗ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಅಂತೆಯೇ "ಮತ್ತೊಮ್ಮೆ, ನಾನು @BJP4India ಮತ್ತು @BJP4Karnataka ನಾಯಕರಿಗೆ ನನ್ನ ಖರ್ಚಿನಲ್ಲಿ ಉಚಿತ ಡಿಎನ್‌ಎ ಪರೀಕ್ಷೆಯ ಆಫರ್ ನೀಡುತ್ತೇನೆ, ನಿಮ್ಮ ಮೂಲದ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ. ಹಿಂಜರಿಯಬೇಡಿ, "ವಂಶ ರಾಜಕೀಯ" ಎಂಬ ಈ ವಾದವನ್ನು ಒಮ್ಮೆ ನೋಡಿಯೇ ಬಿಡೋಣ. ನಿಮ್ಮ ಬಿಜೆಪಿ ಐಟಿ ಸೆಲ್‌ನಲ್ಲಿ ನಾವು ವಂಶಸ್ಥರು ಮತ್ತು ನ್ಯಾಯಸಮ್ಮತರು ಮತ್ತು ನೀವು ಉಳಿದವರು ಕುಟುಂಬ ರಾಜಕಾರಣಿಗಳಲ್ಲ.. ನೀವು ಕಾನೂನುಬದ್ಧರು ಅಥವಾ ನೀವು ನ್ಯಾಯಸಮ್ಮತರಾಗಿದ್ದರೆ ತಿಳಿಯುತ್ತದೆ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

SCROLL FOR NEXT