ಬಿಜೆಪಿ ನಾಯಕರು. 
ರಾಜಕೀಯ

ಚುನಾವಣಾ ಅಕ್ರಮ ಆರೋಪ: ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ; ಸೋಲು ಮರೆಮಾಚಲು ನಡೆಸುತ್ತಿರುವ ಹತಾಶ ಯತ್ನ- BJP ಟೀಕೆ

ಜನರ ನಂಬಿಕೆಯನ್ನು ಕಳೆದುಕೊಂಡ ನಂತರ ಸುಳ್ಳುಗಳನ್ನು ಹರಡುವುದು ಪ್ರಜಾಪ್ರಭುತ್ವವಲ್ಲ. ಈ ಪ್ರತಿಭಟನೆ ಹತಾಶ ಪ್ರಯತ್ನವಾಗಿದೆ. ಮಹಾದೇವಪುರ ಮತ್ತು ರಾಜಾಜಿನಗರದ ಜನಾದೇಶವನ್ನು ಯಾವುದೇ ನಕಲಿ ನಿರೂಪಣೆಯು ದುರ್ಬಲಗೊಳಿಸಲು ಸಾಧ್ಯವಿಲ್ಲ.

ಬೆಂಗಳೂರು: ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಪಕ್ಷದ ಈ ನಡೆಯನ್ನು ಬಿಜೆಪಿ ಟೀಕಿಸಿದೆ.

ಬಿಜೆಪಿ ಸಂಸದ ಪಿಸಿ.ಮೋಹನ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಬೆಂಗಳೂರಿನಲ್ಲಿನ ಹೀನಾಯ ಸೋಲನ್ನು ಮರೆಮಾಚಲು ಹತಾಶ ಯತ್ನ ನಡೆಸತ್ತಿದ್ದಾರೆಂದು ಟೀಕಿಸಿದ್ದಾರೆ.

ವಂಶಪಾರಂಪರ್ಯದ ಪರವಲ್ಲದೆ, ಮಹದೇವಪುರ ಮತ್ತು ರಾಜಾಜಿನಗರದ ಜನರು ಅಭಿವೃದ್ಧಿಗೆ ಮತ ಹಾಕಿದ್ದಾರೆ. ಚುನಾವಣಾ ಅಕ್ರಮ ನಡೆದಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕರ ಬಳಿ ಶೇ.100ರಷ್ಟು ಪುರಾವೆ ಇರುವುದೇ ಆದರೆ, ಬೆಂಗಳೂರಿನಲ್ಲಿ ಬೀದಿ ನಾಟಕ ಮಾಡುವ ಬದಲು ನ್ಯಾಯಾಲಯಕ್ಕೆ ಸಲ್ಲಿಸಲಿ ಎಂದು ಸವಾಲು ಹಾಕಿದ್ದಾರೆ.

ಜನರ ನಂಬಿಕೆಯನ್ನು ಕಳೆದುಕೊಂಡ ನಂತರ ಸುಳ್ಳುಗಳನ್ನು ಹರಡುವುದು ಪ್ರಜಾಪ್ರಭುತ್ವವಲ್ಲ. ಈ ಪ್ರತಿಭಟನೆ ಹತಾಶ ಪ್ರಯತ್ನವಾಗಿದೆ. ಮಹಾದೇವಪುರ ಮತ್ತು ರಾಜಾಜಿನಗರದ ಜನಾದೇಶವನ್ನು ಯಾವುದೇ ನಕಲಿ ನಿರೂಪಣೆಯು ದುರ್ಬಲಗೊಳಿಸಲು ಸಾಧ್ಯವಿಲ್ಲ. ಯಾವುದೇ ಅಪಪ್ರಚಾರವು ಮತಪತ್ರದ ತೀರ್ಪನ್ನು ಪುನಃ ಬರೆಯಲು ಸಾಧ್ಯವಿಲ್ಲ. ಬೀದಿ ಪ್ರದರ್ಶನಗಳನ್ನು ನಡೆಸುವ ಬದಲು ಕಾಂಗ್ರೆಸ್ ಜನಾದೇಶವನ್ನು ಗೌರವಿಸಬೇಕು ಎಂದು ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Flood Relief: ಕರ್ನಾಟಕ, ಮಹಾರಾಷ್ಟ್ರಕ್ಕೆ ರೂ. 1,950 ಕೋಟಿ ಬಿಡುಗಡೆಗೆ ಕೇಂದ್ರದ ಅನುಮೋದನೆ!

ದೊಡ್ಡಬಳ್ಳಾಪುರ: "ಹೃದಯವಂತ ಆರ್.ಎಲ್.ಜಾಲಪ್ಪ ಜೀವನ‌ ಪಥ"; ಕೃತಿ ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ದರಾಮಯ್ಯ!

ವಿಕೃತ ಮನಸ್ಥಿತಿ: ಪ್ರತಿಭಟನೆ ನಡೆಸುತ್ತಿದ್ದ ತನ್ನದೇ ಜನರ ಮೇಲೆ 'ಮಲ' ಸುರಿಸುವ AI ವಿಡಿಯೋ ಹರಿಬಿಟ್ಟ Donald Trump

ಮಂಗಳೂರು: Honeytrap ಯುವಕ ಆತ್ಮಹತ್ಯೆ; ಗೆಳತಿಯರು ಬಟ್ಟೆ ಬದಲಿಸುವ ವಿಡಿಯೋ ಸೆರೆಹಿಡಿದು ವೈರಲ್, ಯುವತಿ ಬಂಧನ!

Pune: ಐತಿಹಾಸಿಕ 'ಶನಿವಾರ ವಾಡಾ' ಕೋಟೆಯಲ್ಲಿ ಮುಸ್ಲಿಂ ಮಹಿಳೆಯರ ನಮಾಜ್! ವಿಡಿಯೋ ವೈರಲ್ , ಪ್ರತಿಭಟನೆ

SCROLL FOR NEXT