ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜಿಎಸ್ಟಿ ಸುಧಾರಣೆಯು ಕಾರ್ಪೊರೇಟ್ ತೆರಿಗೆ ದರವನ್ನು ಕಡಿಮೆ ಮಾಡಲು ಬಲವಾದ ವಿನಾಯಿತಿಯನ್ನು ತೆಗೆದುಕೊಂಡಿದೆ ಎಂದು ಕರ್ನಾಟಕ ಐಟಿ/ಬಿಟಿ ಮತ್ತು ಆರ್ಡಿಪಿಆರ್ ಸಚಿವ ಪ್ರಿಯಾಂಕ ಖರ್ಗೆ ಗುರುವಾರ ಒಪ್ಪಿಕೊಂಡಿದ್ದಾರೆ.
"ಒಟ್ಟು ಜಿಎಸ್ಟಿಯ ಶೇ. 64 ರಷ್ಟು ಬಡವರು ಮತ್ತು ಮಧ್ಯಮ ವರ್ಗದವರ ಜೇಬಿನಿಂದ ಬರುತ್ತದೆ. ಕೇವಲ ಶೇ. 3 ರಷ್ಟು ಜಿಎಸ್ಟಿಯನ್ನು ಕೋಟ್ಯಾಧಿಪತಿಗಳಿಂದ ಸಂಗ್ರಹಿಸಲಾಗುತ್ತದೆ. ಆದರೆ ಕಾರ್ಪೊರೇಟ್ ತೆರಿಗೆ ದರವನ್ನು ಶೇ. 30 ರಿಂದ ಶೇ. 22ಕ್ಕೆ ಇಳಿಸಲಾಗಿದೆ" ಎಂದು ಪ್ರಿಯಾಂಕ್ ಖರ್ಗೆ ಅವರು 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.
"#ಗಬ್ಬರ್ಸಿಂಗ್ಟ್ಯಾಕ್ಸ್ನಲ್ಲಿ ಮೋದಿ ಸರ್ಕಾರಕ್ಕೆ ಈಗ ಸ್ವಲ್ಪ ಸಾಮಾನ್ಯ ಜ್ಞಾನ ಬಂದಂತೆ ಕಾಣುತ್ತಿದೆ" ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಸುಧಾರಣೆಗಳ ಬಗ್ಗೆ ಕೇಂದ್ರದ ಮನ್ನಣೆಯನ್ನು ಧಿಕ್ಕರಿಸಿದ ಖರ್ಗೆ, ಸುಮಾರು ಒಂದು ದಶಕದಿಂದ ಕಾಂಗ್ರೆಸ್ ಜಿಎಸ್ಟಿಯನ್ನು ಸರಳೀಕರಿಸಬೇಕೆಂದು ಒತ್ತಾಯಿಸುತ್ತಿದೆ ಎಂದು ಹೇಳಿದ್ದಾರೆ.
"ಒಂದು ರಾಷ್ಟ್ರ, ಒಂದು ತೆರಿಗೆ" ಎಂಬುದು "ಒಂದು ರಾಷ್ಟ್ರ 9 ತೆರಿಗೆ ಎಂಬಂತಾಗಿತ್ತು". 0%, 5%, 12%, 18%, 28%, ಮತ್ತು ವಿಶೇಷ ದರಗಳು 0.25%, 1.5%, 3% ಮತ್ತು 6%" ಆಗಿ ಮಾರ್ಪಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.
"ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರು GST ದರವನ್ನು ಶೇ. 18ರ ಮಿತಿ ಅಥವಾ ಅದಕ್ಕಿಂತ ಕಡಿಮೆಗಾಗಿ ನಿರಂತರವಾಗಿ ಹೋರಾಡುತ್ತಿದ್ದರು. ಅಲ್ಲದೆ ಕಾಂಗ್ರೆಸ್ ತನ್ನ 2019 ಮತ್ತು 2024 ರ ಪ್ರಣಾಳಿಕೆಗಳಲ್ಲಿ ಸರಳೀಕೃತ ಮತ್ತು ತರ್ಕಬದ್ಧ ತೆರಿಗೆ ಆಡಳಿತದೊಂದಿಗೆ GST 2.0ಗೆ ಒತ್ತಾಯಿಸಿತ್ತು. "MSMEಗಳು ಮತ್ತು ಸಣ್ಣ ವ್ಯವಹಾರಗಳನ್ನು ತೀವ್ರವಾಗಿ ಬಾಧಿಸುತ್ತಿರುವ ಈ ಸಂಕೀರ್ಣ ಜಿಎಸ್ ಟಿಯನ್ನು ಸರಳೀಕರಿಸಲು ನಾವು ಒತ್ತಾಯಿಸಿದ್ದೇವೆ" ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
"ಮೊದಲ ಬಾರಿಗೆ, ಬಿಜೆಪಿ ಸರ್ಕಾರ ರೈತರಿಗೆ ತೆರಿಗೆ ವಿಧಿಸಿತು. ಕೃಷಿ ವಲಯದ ಕನಿಷ್ಠ 36 ಸರಕುಗಳು/ವಸ್ತುಗಳ ಮೇಲೆ ಶೇ. 12 ರಿಂದ ಶೇ. 28ರ ವರೆಗೆ GST ವಿಧಿಸಲಾಯಿತು" ಎಂದು ಅವರು ತಿಳಿಸಿದ್ದಾರೆ.
ಪ್ಯಾಕ್ ಮಾಡಿದ ಹಾಲು, ಗೋಧಿ ಹಿಟ್ಟು, ಮೊಸರು, ಪುಸ್ತಕಗಳು, ಲೇಖನ ಸಾಮಗ್ರಿಗಳು ಮುಂತಾದ ಅಗತ್ಯ ಸರಕುಗಳನ್ನು GST ಅಡಿಯಲ್ಲಿ ತರಲಾಯಿತು ಎಂದು ಅವರು ಹೇಳಿದ್ದಾರೆ.