ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವ 
ರಾಜಕೀಯ

ದೇಶದ ಮಹಿಳೆಯರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ: ಬಂಗಾಳ- ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ; ಮಾರ್ಗರೇಟ್ ಆಳ್ವಾ

ತಮಿಳುನಾಡು ಮತ್ತು ಬಂಗಾಳ ಚುನಾವಣೆ ಗಮನದಲ್ಲಿಟ್ಟುಕೊಂಡು ಮೀಸಲಾತಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು ಎಂದು ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವ ಹೇಳಿದ್ದಾರೆ.

ಬೆಂಗಳೂರು: ಕೇಂದ್ರ ಸರಕಾರವು ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ 2023ರಲ್ಲಿ ಅಂಗೀಕರಿಸಲ್ಪಟ್ಟ ಕಾಯ್ದೆಯನ್ನು ಜಾರಿ ಮಾಡಲು ಜನಗಣತಿ ಹಾಗೂ ಕ್ಷೇತ್ರ ಮರು ವಿಂಗಡನೆಯ ಶರತ್ತು ಯಾಕೆ. ತಮಿಳುನಾಡು ಮತ್ತು ಬಂಗಾಳ ಚುನಾವಣೆ ಗಮನದಲ್ಲಿಟ್ಟುಕೊಂಡು ಮೀಸಲಾತಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು ಎಂದು ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವ ಹೇಳಿದ್ದಾರೆ.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾನೂನು ಪುಸ್ತಕದಲ್ಲಿ ಇದ್ದ ಮೇಲೆ ಅದನ್ನು ಜಾರಿಗೆ ತರಲು ಇವರಿಗೆ ಏನು ಅಡ್ಡಿ? ಜನಗಣತಿಗೆ ಎರಡು ವರ್ಷ, ಕ್ಷೇತ್ರ ವಿಂಗಡಣೆಗೆ 2 ವರ್ಷ ಅಂದರೆ 2029ಕ್ಕೂ ಮಹಿಳೆಯರಿಗೆ ಮೀಸಲಾತಿ ಸಿಗುವ ಸಾಧ್ಯತೆಯಿಲ್ಲ. ಬಿಜೆಪಿಗೆ ಮಹಿಳಾ ಮೀಸಲಾತಿ ಬೇಕಾಗಿಲ್ಲ. ಅವರದ್ದು ಮೊಸಳೆ ಕಣ್ಣೀರು ಎಂದು ಕಿಡಿಕಾರಿದರು.

ಈಗಿನ ಮಸೂದೆಯನ್ನು 2011ರ ಜನಗಣತಿ ಪ್ರಕಾರ ಮಾಡೋಣ ಎನ್ನುತ್ತಿದ್ದಾರೆ. ಇದೇ ಮಾತನ್ನು 2023ರಲ್ಲಿ ನಾವು ಸಲಹೆ ನೀಡಿದಾಗ ಇದೇ ಬಿಜೆಪಿಗರು ಆಗುವುದಿಲ್ಲ ಎಂದರು. ಈ ಸರ್ಕಾರಕ್ಕೆ ನಿಜಕ್ಕೂ ಮಹಿಳೆಯರಿಗೆ ಮೀಸಲಾತಿ ನೀಡುವ ಉದ್ದೇಶವಿದ್ದರೆ ಲೋಕಸಭೆಯಲ್ಲಿ ಹಾಲಿ ಇರುವ ಸ್ಥಾನಗಳಲ್ಲೆ ಶೇ.33ರಷ್ಟು ಮೀಸಲಾತಿ ನೀಡಲಿ ಎಂದು ಆಗ್ರಹಿಸಿದರು.

ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ಪ್ರತಿಯೊಂದು ರಾಜ್ಯದ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವುದಾಗಿ ತಿಳಿಸಿದರು. ಯಾವ ಆಧಾರದಲ್ಲಿ ಈ ತೀರ್ಮಾನ ಕೈಗೊಂಡಿದ್ದಾರೆ. ಕೇಂದ್ರ ಸರಕಾರ ವಿಪಕ್ಷಗಳು, ರಾಜಕೀಯ ಪಕ್ಷಗಳು, ರಾಜ್ಯ ಸರಕಾರಗಳ ಜೊತೆ ಈ ವಿಚಾರದಲ್ಲಿ ಸಮಾಲೋಚನೆ ಮಾಡಿದೆಯೇ? ಮೋದಿ-ಅಮಿತ್ ಶಾ ಇಬ್ಬರೇ ನಿರ್ಧಾರ ಮಾಡಿದರೆ ಸಾಕಾ? ಅಥವಾ ಆರೆಸ್ಸೆಸ್ ಸೂಚನೆ ನೀಡಿದೆಯೇ? ಎಂದು ಮಾರ್ಗರೇಟ್ ಆಳ್ವ ಪ್ರಶ್ನಿಸಿದರು.

ಮಸೂದೆಯನ್ನು ಸೋಲಿಸಲಾಗುವುದು ಎಂದು ಕೇಂದ್ರಕ್ಕೆ ತಿಳಿದಿತ್ತು. ಆದರೂ, ಅಮಿತ್ ಶಾ ಇಡಿ ಮತ್ತು ಸಿಬಿಐನಂತಹ ಸಂಸ್ಥೆಗಳೊಂದಿಗೆ ವಿರೋಧ ಪಕ್ಷಗಳನ್ನು ಬೆದರಿಸುವ ಮೂಲಕ ಅವರ ಬೆಂಬಲವನ್ನು ಪಡೆಯಲು ಪ್ರಯತ್ನಿಸಿದರು. ವಿರೋಧ ಪಕ್ಷಗಳನ್ನು ಹಿಂದೆಂದಿಗಿಂತಲೂ ಉತ್ತಮವಾಗಿ ಒಗ್ಗೂಡಿಸಿದ್ದಕ್ಕಾಗಿ ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳುತ್ತೇವೆ" ಎಂದು ಅವರು ಹೇಳಿದರು.

ದೇಶದ ಮಹಿಳೆಯರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. "ಸರ್ಕಾರ ಆಡಲು ಪ್ರಯತ್ನಿಸುತ್ತಿರುವ ಈ ದುಷ್ಟ ಆಟ ಏನು? ಜನಗಣತಿ ಮತ್ತು ಗಡಿನಿರ್ಣಯಕ್ಕೆ ಸಂಬಂಧಿಸಿ ಮಹಿಳಾ ಮೀಸಲಾತಿ ಅನುಷ್ಠಾನವನ್ನು ವಿಳಂಬ ಮಾಡುತ್ತಿದೆ ಎಂದು ಹೇಳಿದರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಅಧ್ಯಕ್ಷರನ್ನಾಗಿ ನೇಮಿಸಿ 14 ಸದಸ್ಯರ ಸಮಿತಿಯನ್ನು ರಚಿಸಿದ್ದ ಕಾಲದಿಂದಲೂ ಮಹಿಳಾ ಮೀಸಲಾತಿ ಮಸೂದೆ ಚರ್ಚೆಯಲ್ಲಿದೆ ಎಂದು ಅವರು ವಿವರಿಸಿದರು. "ನಾವು ಒಂದು ವರದಿಯನ್ನು ಸಿದ್ಧಪಡಿಸಿದ್ದೇವೆ ಮತ್ತು 12 ಕ್ಷೇತ್ರಗಳಲ್ಲಿ ಮಹಿಳೆಯರ ಘನತೆಯನ್ನು ಹೆಚ್ಚಿಸಲು ಏನು ಮಾಡಬೇಕೆಂದು ಅಧ್ಯಯನ ಮಾಡಿದ್ದೇವೆ.

ನಾವು ಅದನ್ನು 1989 ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಈ ವರದಿಯಲ್ಲಿ, ನಾವು ಮುಖ್ಯವಾಗಿ ಮಹಿಳೆಯರ ರಾಜಕೀಯ ಸಬಲೀಕರಣವನ್ನು ಪ್ರತಿಪಾದಿಸಿದ್ದೇವೆ. ನಾವು ಯಾವುದೇ ಸ್ಥಾನವನ್ನು ನೀಡಿದರೂ, ರಾಜಕೀಯ ಸ್ಥಾನವಿಲ್ಲದೆ ಸಬಲೀಕರಣ ಅಸಾಧ್ಯ ಎಂದು ಅವರು ವಿವರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವವರೆಗೂ ದಿಗ್ಬಂಧನ ತೆರವುಗೊಳಿಸಲ್ಲ: ಡೊನಾಲ್ಡ್ ಟ್ರಂಪ್

IPL 2026: ಬಾಲಿವುಡ್ ನಟಿ ಪ್ರೀತಿಜಿಂಟಾ 'ಅಪ್ಪುಗೆ'ಯಿಂದ ಕುಣಿದು ಕುಪ್ಪಳಿಸಿದ ಅರ್ಶದೀಪ್ ಸಿಂಗ್! ಹೊಟ್ಟೆ ಉರಿದುಕೊಂಡ ಶಮಿ Video

MGR ಆಗೋಕೆ ಹೊರಟಿದ್ದಾರೆ ಅದೆಲ್ಲಾ ಸಿನಿಮಾದಲ್ಲಷ್ಟೇ ಸಾಧ್ಯ, ಇಲ್ಲಿ ನಡೆಯಲ್ಲ: ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

IPL 2026: ಪಂದ್ಯದ ಮಧ್ಯೆ ತಿಲಕ್ ವರ್ಮಾ ವಿರುದ್ಧ ಹಾರ್ದಿಕ್ ಪಾಂಡ್ಯ ಸಿಟ್ಟಾದರೆ ಅಥವಾ ಹುರಿದುಂಬಿಸಿದ್ರಾ?Video ನೋಡಿ....

ಮೈಸೂರು: ನೀರು ಕುಡಿಯಲು ಬಂದು ಕೆಸರಿನಲ್ಲಿ ಸಿಲುಕಿದ್ದ ಮೂರು ಕಾಡಾನೆಗಳ ರಕ್ಷಣೆ!

SCROLL FOR NEXT