ಜಿ ಪರಮೇಶ್ವರ 
ರಾಜಕೀಯ

'ಇದು ವಿಪಕ್ಷಗಳ ಕೆಲಸ, ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ'; ಜಿ ಪರಮೇಶ್ವರ

ಕಳೆದ 10-12 ದಿನಗಳಿಂದ ವಿವಿಧ ಇಲಾಖೆಗಳಲ್ಲಿ ಬಜೆಟ್ ಕುರಿತು ವಿವರವಾದ ಚರ್ಚೆಗಳು ನಡೆದಿವೆ ಮತ್ತು ಆಡಳಿತವು ಸಾಮಾನ್ಯವಾಗಿ ನಡೆಯುತ್ತಿದೆ.

ಬೆಂಗಳೂರು: ಆಡಳಿತದಿಂದ ಗಮನವನ್ನು ಬೇರೆಡೆ ಸೆಳೆಯಲು ವಿರೋಧ ಪಕ್ಷಗಳು ದಲಿತ ಮುಖ್ಯಮಂತ್ರಿಯ ಚರ್ಚೆಯನ್ನು ಅನಗತ್ಯವಾಗಿ ಕೆದಕುತ್ತಿವೆ. ದಲಿತ ನಾಯಕನನ್ನು ಉನ್ನತ ಹುದ್ದೆಗೆ ಏರಿಸುವ ಬದ್ಧತೆ ಕಾಂಗ್ರೆಸ್‌ಗೆ ಮಾತ್ರ ಇದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಸೋಮವಾರ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ದಲಿತ ಮುಖ್ಯಮಂತ್ರಿ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಮೂಲಕ ಕಾರಣ ವಿರೋಧ ಪಕ್ಷಗಳು. ಇದು ವಿರೋಧ ಪಕ್ಷದ ಕೆಲಸ. ತಮ್ಮ ಸ್ವಂತ ವೈಫಲ್ಯಗಳನ್ನು ಮರೆಮಾಡಲು, ಅವರು ದಲಿತ ಮುಖ್ಯಮಂತ್ರಿ ವಿಷಯವನ್ನು ಎತ್ತುತ್ತಿದ್ದಾರೆ. ಆಡಳಿತವು ಸುಗಮವಾಗಿ ನಡೆಯುತ್ತಿಲ್ಲವೇ? ಮುಖ್ಯಮಂತ್ರಿ ಆಡಳಿತ ನಡೆಸುತ್ತಿಲ್ಲವೇ?' ಎಂದು ಅವರು ಕೇಳಿದರು.

ಕಳೆದ 10-12 ದಿನಗಳಿಂದ ವಿವಿಧ ಇಲಾಖೆಗಳಲ್ಲಿ ಬಜೆಟ್ ಕುರಿತು ವಿವರವಾದ ಚರ್ಚೆಗಳು ನಡೆದಿವೆ ಮತ್ತು ಆಡಳಿತವು ಸಾಮಾನ್ಯವಾಗಿ ನಡೆಯುತ್ತಿದೆ. ದಲಿತರನ್ನು ಮುಖ್ಯಮಂತ್ರಿ ಮಾಡುವ ಇತಿಹಾಸ ಮತ್ತು ರಾಜಕೀಯ ಇಚ್ಛಾಶಕ್ತಿ ಕಾಂಗ್ರೆಸ್‌ಗೆ ಮಾತ್ರ ಇದೆ ಎಂದು ಸಚಿವರು ತಿಳಿಸಿದರು.

'ಹೌದು, ಅದು ಕಾಂಗ್ರೆಸ್ ಪಕ್ಷವೇ ಆಗಿರಬೇಕು. ಬೇರೆ ಯಾರು ಅದನ್ನು ಮಾಡುತ್ತಾರೆ?. ಆದರೆ ಅಂತಹ ಯಾವುದೇ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ' ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಅನ್ನು ಗುರಿಯಾಗಿಸಿಕೊಂಡು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಮಾಧ್ಯಮ ಹೇಳಿಕೆಯ ಕುರಿತು ಮಾತನಾಡಿದ ಪರಮೇಶ್ವರ, ಸಿದ್ದರಾಮಯ್ಯ ಅವರು ಈ ಹಿಂದೆ ಜೆಡಿಎಸ್‌ನ ಭಾಗವಾಗಿದ್ದರು ಮತ್ತು ಪಕ್ಷದಿಂದ ಉಚ್ಛಾಟಿಸುವ ಮೊದಲು ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಎಂದು ಹೇಳಿದರು.

ಆ ಪಕ್ಷದ ಆಂತರಿಕ ಇತಿಹಾಸವು ಅದರೊಳಗಿನವರಿಗೆ ಚೆನ್ನಾಗಿ ತಿಳಿದಿದೆ ಎಂದ ಅವರು, ನಿರ್ದಿಷ್ಟ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಮುಖ್ಯಮಂತ್ರಿಯವರ ಸೈದ್ಧಾಂತಿಕ ನಿಲುವನ್ನು ಸಮರ್ಥಿಸಿಕೊಂಡ ಪರಮೇಶ್ವರ, ಸಿದ್ದರಾಮಯ್ಯ ಅವರ ರಾಜಕೀಯವು ಯಾವಾಗಲೂ ಸಾಮಾಜಿಕ ನ್ಯಾಯದಲ್ಲಿ ಬೇರೂರಿದೆ ಮತ್ತು ಅವರ ನಿಲುವಿನಲ್ಲಿ ಹೊಸ ಅಥವಾ ಅವಕಾಶವಾದಿ ಏನೂ ಇಲ್ಲ. ಮುಖ್ಯಮಂತ್ರಿಗಳು ತಮ್ಮ ರಾಜಕೀಯ ಜೀವನವನ್ನು ಆ ಅಡಿಪಾಯದ ಮೇಲೆ ನಿರಂತರವಾಗಿ ನಿರ್ಮಿಸಿಕೊಂಡಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್ ಪಕ್ಷದ ರಕ್ಷಣೆ ಏಕೆ ? ಮಹಿಳಾ ಸಂಸದರನ್ನು ಗುರಾಣಿಯಾಗಿ ಬಳಸಿಕೊಳ್ಳುವಷ್ಟು ಟೊಳ್ಳಾಗಿದ್ದೀರಾ? ಅಶಿಸ್ತಿನ ನಾಯಕರಿಂದ ದೇಶ ನಾಶ- PM

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಎರಡು ಪ್ರಮಾದಗಳು: ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ವಿರುದ್ಧ ಆರ್. ಅಶ್ವಿನ್ ಕಿಡಿ! Video

'ದೇವರೇ... ದಯವಿಟ್ಟು ಮುಂದಿನ ಜಾತ್ರೆಯೊಳಗೆ ನಮ್ ಅತ್ತೆ ಸಾಯುವಂತೆ ಮಾಡು': ದೇಗುಲ ಹುಂಡಿಯೊಳಗೆ ಚೀಟಿ ಪತ್ತೆ!

T20 World Cup 2026: ಹರಿಣಿಗಳಿಂದ ಸೋತ ಬಳಿಕ ಡಗ್ ಔಟ್ ನಲ್ಲಿ ಗಂಭೀರ್-ಯಾದವ್ ನಡುವೆ ಮಾತಿನ ಚಕಮಕಿ! Video

ಬಿಟ್ಟುಹೋದ ಪತ್ನಿ, ಪುತ್ರನಿಗೆ ದುಬಾರಿ ಬೆಲೆಯ 'ಕಾರು ಗಿಫ್ಟ್' ಮಾಡಿದ ಹಾರ್ದಿಕ್ ಪಾಂಡ್ಯ! Video

SCROLL FOR NEXT