ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಅಧಿಕಾರ ಹಸ್ತಾಂತರ ಪ್ರಹಸನವೂ ಪ್ರಭಾವಿ ಕುರುಬ ಸಮುದಾಯದೊಳಗೆ ಚರ್ಚೆ ಹುಟ್ಟುಹಾಕಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಮುದಾಯದ ಶಾಸಕರಿಗೆ ಹೆಚ್ಚಿನ ಸ್ಥಾನ ಮತ್ತು ಸಂಪುಟದಲ್ಲಿ ಪ್ರಾತಿನಿದ್ಯ ಕೊಡಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ನಂತರ ಮಹತ್ವದ ರಾಜಕೀಯ ಯುಗಾಂತ್ಯ ಎಂದು ಸಮುದಾಯದ ಮುಖಂಡರು ವಿವರಿಸಿದ್ದಾರೆ. ಕುರುಬ ನಾಯಕರ ಅಸಮರ್ಪಕ ಸಬಲೀಕರಣ ಎಂದು ಕರೆದಿದ್ದಾರೆ. ರಾಜ್ಯಾದ್ಯಂತ ಪ್ರಭಾವ ಬೀರುವ ಸಾಮರ್ಥ್ಯವಿರುವ ವಿಶಾಲವಾದ ಎರಡನೇ ಹಂತದ ನಾಯಕರನ್ನು ರೂಪಿಸುವ ಸಮಯ ಬಂದಿದೆ ಎಂದು ಅವರು ವಾದಿಸುತ್ತಾರೆ.
ಸಮುದಾಯದ ಹಿರಿಯ ವ್ಯಕ್ತಿಗಳು ನಿರ್ದಿಷ್ಟ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಮಾಜಿ ಸಚಿವ ಹಾವೇರಿ ಶಾಸಕ ಬಸವರಾಜ ಶಿವಣ್ಣನವರ್ ಅವರನ್ನು ಉಪಮುಖ್ಯಮಂತ್ರಿ ಹುದ್ದೆ ಸೇರಿದಂತೆ ಹಿರಿಯ ಕ್ಯಾಬಿನೆಟ್ ಸ್ಥಾನಕ್ಕೆ ಪರಿಗಣಿಸಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ. ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಮತ್ತು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಗೆ ಸಚಿವ ಸ್ಥಾನ ನೀಡುವಂತೆಯೂ ಬೇಡಿಕೆ ಇಡಲಾಗಿದೆ.
ಉತ್ತರ ಕರ್ನಾಟಕದಿಂದ ಆಯ್ಕೆಯಾದವರಲ್ಲಿ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಶಿವಣ್ಣನವರ್ ಹೇಳಿದ್ದಾರೆ. ಅತ್ಯಂತ ಹಿಂದುಳಿದ ಸಮುದಾಯ ಎಂದು ವರ್ಗೀಕರಿಸಲ್ಪಟ್ಟ ಕುರುಬ ಸಮುದಾಯವನ್ನು ಕರ್ನಾಟಕದ ಹಿಂದುಳಿದ ಜಾತಿಗಳಲ್ಲಿ ಪ್ರಮುಖ ಶಕ್ತಿಯಾಗಿ ನೋಡಲಾಗುತ್ತದೆ, ಅವರು ಒಟ್ಟಾರೆಯಾಗಿ ರಾಜ್ಯದ ಜನಸಂಖ್ಯೆಯ ಸುಮಾರು ಶೇಕಡಾ 56 ರಷ್ಟಿದ್ದಾರೆ. ರಾಜಕೀಯ ವೀಕ್ಷಕರು ಈ ಸಮುದಾಯವನ್ನು 'ಹಿರಿ ಅಣ್ಣ ಅಥವಾ ಹಿಂದುಳಿದವರ ಅಣ್ಣ' ಎಂದು ಪರಿಗಣಿಸಲಾಗುತ್ತದೆ.
ಸಿದ್ದರಾಮಯ್ಯ ಅವರು ರಾಜ್ಯ ರಾಜಕೀಯದ ಚುಕ್ಕಾಣಿ ಹಿಡಿದ ದೀರ್ಘ ಮತ್ತು ಯಶಸ್ವಿ ಅವಧಿಯ ಹೊರತಾಗಿಯೂ, ಹಲವಾರು ಕುರುಬ ನಾಯಕರು ರಾಜ್ಯದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಲು ಸಿದ್ಧವಾಗಿರುವ ಪ್ರಬಲವಾದ ಎರಡನೇ ಸಾಲಿನ ನಾಯಕತ್ವದ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಹೆಬ್ಬಾಳ ಶಾಸಕ ಬೈರತಿ ಸುರೇಶ್ ಮತ್ತು ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಅವರಂತಹ ನಾಯಕರು ಪ್ರಾಮುಖ್ಯತೆಯಲ್ಲಿ ಉತ್ತಮ ಸ್ಥಾನ ಏರಿದ್ದರೂ, ಅನೇಕ ತಳಮಟ್ಟದ ಕಾರ್ಯಕರ್ತರು ಅವರನ್ನು ಇನ್ನೂ ಕುರುಬ ಆಕಾಂಕ್ಷೆಗಳ ವಿಶಾಲ ಪ್ರತಿನಿಧಿಗಳಾಗಿ ನೋಡುತ್ತಿಲ್ಲ, ಏಕೆಂದರೆ ಅವರನ್ನು 'ಕರಿ ಕಂಬಳಿ' (ಬಡ ಕುರುಬರು) ಅಲ್ಲ 'ರತ್ನ ಕಂಬಳಿ' (ಗಣ್ಯ ಕುರುಬರು) ಎಂದು ಕರೆಯಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಸೇವೆ ಸಲ್ಲಿಸಿದ್ದ ಕುರುಬ ಜನಾಂಗದ ಮಾಜಿ ಸಚಿವ ಅಡಗೂರು ಎಚ್. ವಿಶ್ವನಾಥ್, ಸಂಭಾವ್ಯ ನಾಯಕತ್ವದ ನಿರ್ವಾತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಮುದಾಯದ ಸದಸ್ಯರ ಪ್ರಕಾರ, ಸಿದ್ದರಾಮಯ್ಯ ಅವರಂತೆ ಆಕರ್ಷಣೆಯನ್ನು ಹೊಂದಿರುವ ಕುರುಬ ಜನಾಂಗವು ಮತ್ತೊಂದು ಸಾಮೂಹಿಕ ನಾಯಕನನ್ನು ಉತ್ಪಾದಿಸಲು ದಶಕಗಳೇ ಬೇಕಾಗಬಹುದು ಎಂದು ವಿಶ್ವನಾಥ್ ನಂಬುತ್ತಾರೆ.
ಕರ್ನಾಟಕದ ಅತಿದೊಡ್ಡ ಹಿಂದುಳಿದ ವರ್ಗ ಗುಂಪುಗಳಲ್ಲಿ ಒಂದಾದ ಕುರುಬ ಜನಾಂಗವು ತಮ್ಮ ಜನಸಂಖ್ಯಾ ಮತ್ತು ರಾಜಕೀಯ ತೂಕಕ್ಕೆ ಹೊಂದಿಕೆಯಾಗುವ ಶಾಸಕಾಂಗ ಮತ್ತು ಕಾರ್ಯಕಾರಿ ಸ್ಥಾನಗಳ ಪಾಲನ್ನು ಅರ್ಹರು ಎಂದು ಸಮುದಾಯದ ನಾಯಕರು ಸಮರ್ಥಿಸಿಕೊಂಡಿದ್ದಾರೆ.